
ಸಾಲಭಾಧೆ…ವಿಷ ಸೇವಿಸಿ ರೈತ ಆತ್ಮಹತ್ಯೆ…
- CrimeMysore
- July 24, 2024
- No Comment
- 130
ಮಂಡ್ಯ,ಜು24,Tv10 ಕನ್ನಡ
ಸಾಲಭಾಧೆಯಿಂದ ರೈತ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ತಂಗಳಗೆರೆ ಗ್ರಾಮದಲ್ಲಿ ನಡೆದಿದೆ. ಚಂದ್ರಶೇಖರ್(34) ಮೃತ ರೈತ.ಚಂದ್ರಶೇಖರ್ ಸಾಲ ಮಾಡಿ ಬೋರ್ ವೆಲ್ ಕೊರೆಸಿದ್ದರು.ಕಳೆದ ವರ್ಷ ಮಳೆ, ಬೆಳೆ ಇಲ್ಲದೇ ನಷ್ಟವುಂಟಾಗಿತ್ತು.
ಕೃಷಿಗಾಗಿ, ಮನೆ ಕಟ್ಟಲು, ಬ್ಯಾಂಕಿನಿಂದ ಹಾಗೂ ಕೈ ಸಾಲ ಮಾಡಿದ್ದರು.
ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…