ಅಪರಿಚತನಿಗೆ ಲಿಫ್ಟ್ ಕೊಡಲು ಹೋದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ…ಮಾನವೀಯತೆ ತೋರಿದ್ದೇ ತಪ್ಪಾಯ್ತು…!

ಅಪರಿಚತನಿಗೆ ಲಿಫ್ಟ್ ಕೊಡಲು ಹೋದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ…ಮಾನವೀಯತೆ ತೋರಿದ್ದೇ ತಪ್ಪಾಯ್ತು…!

ಮೈಸೂರು,ಆ1,Tv10 ಕನ್ನಡ

ಅಪರಿಚಿತನ ಅಸಹಾಯಕತೆಗೆ ಮರುಗಿ ಲಿಫ್ಟ್ ಕೊಡಲು ಹೋದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಬೋಗಾದಿ ರಿಂಗ್ ರಸ್ತೆ ಬಳಿ ನಡೆದಿದೆ.ಚಾಮರಾಜನಗರ ಮೂಲದ ಶಿವು ಎಂಬುವರೇ ಹಲ್ಲೆಗೊಳಗಾದವರು.ಅಪರಿಚತನಿಂದ ಹಲ್ಲೆಗೆ ಒಳಗಾದ ಶಿವು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ ವೇಳೆ ನಿರ್ಗತಿಕರು,ಭಿಕ್ಷುಕರು,ಅಸಹಾಯಕರಿಗೆ ಬೆಡ್ ಶೀಟ್ ಗಳನ್ನ ನೀಡಿ ಮಾನವೀಯತೆ ಮೆರೆಯುವ ಪುಣ್ಯದ ಕಾರ್ಯ ಮಾಡುವ ಶಿವು ರವರು ಎರಡು ದಿನಗಳ ಹಿಂದೆ ಬೋಗಾದಿ ರಿಂಗ್ ರಸ್ತೆಯ ಸೌಪರ್ಣಿಕ ಅಪಾರ್ಟ್ ಮೆಂಟ್ ಬಳಿ ರಾತ್ರಿ 11 ಗಂಟೆ ವೇಳೆ ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದಾಗ.ಅಪರಿಚಿತ ವ್ಯಕ್ತಿಯೊಬ್ಬ ಅಸಹಾಯಕನಾಗಿ ಕಂಡು ಬಂದಿದ್ದಾನೆ.ನೋಡಲು ಭಿಕ್ಷುಕನಂತೆ ಕಂಡು ಬಂದರೂ ಶಿವು ಆತನ ನೆರವಿಗೆ ಮುಂದಾಗಿದ್ದಾರೆ.ವ್ಯಕ್ತಿಗೆ ತಮ್ಮ ಬೈಕ್ ನಲ್ಲಿ ಲಿಫ್ಟ್ ಕೊಡಲು ಯತ್ನಿಸಿದ್ದಾರೆ.ಶಿವು ರವರ ಮನವಿಯನ್ನ ಅಪರಿಚಿತ ವ್ಯಕ್ತಿ ತಿರಸ್ಕರಿಸಿದ್ದಾನೆ.ಮಾನವೀಯತೆಯಿಂದ ಮತ್ತೆ ಬೈಕ್ ಹತ್ತುವಂತೆ ಕರೆದಿದ್ದಾರೆ.ಈ ವೇಳೆ ಅಪರಿಚಿತ ವ್ಯಕ್ತಿ ತನ್ನ ಬಳಿ ಇದ್ದ ಆಯುಧದಿಂದ ಶಿವು ಮೇಲೆ ಹಲ್ಲೆ ನಡೆಸಿದ್ದಾನೆ.ಶಿವು ರವರ ಕೂಗಾಟ ಕೇಳಿ ಕೆಲವು ಸಾರ್ವಜನಿಕರು ನೆರವಿಗೆ ಬಂದಿದ್ದಾರೆ.ಆಯುಧದಿಂದ ಹಲ್ಲೆ ನಡೆಸಿದ ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದಾನೆ.ಅಪರಿಚಿತನಿಗೆ ಸಹಾಯ ಮಾಡಲು ಹೋದ ಶಿವು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ ಪ್ರಕರಣ ದಾಖಲಾಗಿದೆ…

Spread the love

Related post

ಮರದ ಬಳಿ ಮಲಗಿದ್ದ ರೈತನ ಕಾಲುಗಳ ಮೇಲೆ ಹರಿದ ಟಿಪ್ಪರ್…ಎರಡು ಕಾಲುಗಳು ಮುರಿತ…

ಮರದ ಬಳಿ ಮಲಗಿದ್ದ ರೈತನ ಕಾಲುಗಳ ಮೇಲೆ ಹರಿದ ಟಿಪ್ಪರ್…ಎರಡು ಕಾಲುಗಳು…

ಮಂಡ್ಯ,ಏ30,Tv10 ಕನ್ನಡ ಅರಳಿ ಮರದ ಕೆಳಗೆ ವಿರಮಿಸುತ್ತಿದ್ದ ರೈತನ ಕಾಲುಗಳ ಮೇಲೆ ಟಿಪ್ಪರ್ ಹರಿದ ಮಂಡ್ಯ ಜಿಲ್ಲೆ ಕೆ.ಆರ್‌‌.ಪೇಟೆ ತಾಲೂಕಿನ ಆಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪುಟ್ಟೇಗೌಡ ಎಂಬುವವರ ಮೇಲೆ ಹರಿದ…
ಮಳೆ ಎಫೆಕ್ಟ್…ಮನೆ ಮೇಲೆ ಉರುಳಿದ ಮರ,ವಿದ್ಯುತ್ ಕಂಬ…ತಪ್ಪಿದ ಅನಾಹುತ…ಸ್ಥಳಕ್ಕೆ ಬಾರದ ಅಧಿಕಾರಿಗಳು…

ಮಳೆ ಎಫೆಕ್ಟ್…ಮನೆ ಮೇಲೆ ಉರುಳಿದ ಮರ,ವಿದ್ಯುತ್ ಕಂಬ…ತಪ್ಪಿದ ಅನಾಹುತ…ಸ್ಥಳಕ್ಕೆ ಬಾರದ ಅಧಿಕಾರಿಗಳು…

ಮೈಸೂರು,ಏ30,Tv10 ಕನ್ನಡ ನಿನ್ನೆ ಸುರಿದ ಭಾರಿ ಮಳೆಗೆ ಮನೆಯೊಂದರ ಮೇಲೆ ವಿದ್ಯುತ್ ಕಂಬ ಹಾಗೂ ಮರ ಉರುಳಿಬಿದ್ದಿದೆ.ಮೈಸೂರಿನ ಬೃಂದಾವನ ಬಡಾವಣೆ 7 ನೇ ಕ್ರಾಸ್ ನ ಪ್ರಿಯದರ್ಶಿನಿ ಆಸ್ಪತ್ರೆ…
ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ವಿರುದ್ದ ಶಿಸ್ತುಕ್ರಮಕ್ಕೆ ಮುಂದಾದ ಪ್ರಾಧಿಕಾರ…ಮೃತ ವ್ಯಕ್ತಿಯ ಆಸ್ತಿ ಕಬಳಿಸಲು ದಾಖಲೆ ಮಾಡಿಕೊಟ್ಟ ಆರೋಪ…ಮುಡಾ ಆಯುಕ್ತರಿಂದ ಸರ್ಕಾರಕ್ಕೆ ಅನುಮತಿ ಕೋರಿ ಪತ್ರ…

ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ವಿರುದ್ದ ಶಿಸ್ತುಕ್ರಮಕ್ಕೆ ಮುಂದಾದ ಪ್ರಾಧಿಕಾರ…ಮೃತ ವ್ಯಕ್ತಿಯ…

ಮೈಸೂರು,ಏ29,Tv10 ಕನ್ನಡ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಮತ್ತೊಂದು ವಿಕೆಟ್ ಉರುಳಲಿದೆ.ಕೆಲವೇ ದಿನಗಳ ಹಿಂದೆ ಒಬ್ಬರನ್ನ ಅಮಾನತುಗೊಳಿಸಿದ್ದ ಆಯುಕ್ತರು ಇಂದು ಮತ್ತೊಬ್ಬ ಅಧಿಕಾರಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಸಜ್ಜಾಗಿದ್ದಾರೆ.ಸೂಕ್ತ…

Leave a Reply

Your email address will not be published. Required fields are marked *