ಗಂಡು ಮಗು ಹೆತ್ತಿಲ್ಲವೆಂದು ವರದಕ್ಷಿಣೆ ನೆಪದಲ್ಲಿ ಪತ್ನಿಗೆ ಟಾರ್ಚರ್…ಹಿಗ್ಗಾಮುಗ್ಗ ಥಳಿಸಿದ ಪತಿ…ಜೀವಭಯದಲ್ಲಿ ಗೃಹಿಣಿ…

ಗಂಡು ಮಗು ಹೆತ್ತಿಲ್ಲವೆಂದು ವರದಕ್ಷಿಣೆ ನೆಪದಲ್ಲಿ ಪತ್ನಿಗೆ ಟಾರ್ಚರ್…ಹಿಗ್ಗಾಮುಗ್ಗ ಥಳಿಸಿದ ಪತಿ…ಜೀವಭಯದಲ್ಲಿ ಗೃಹಿಣಿ…

ಕೆ.ಆರ್.ನಗರ,ಆ2,Tv10 ಕನ್ನಡ

ಗಂಡು ಮಗು ಹೆತ್ತಿಲ್ಲವೆಂದು ವರದಕ್ಷಿಣೆ ನೆಪವೊಡ್ಡಿ ಪತಿರಾಯ ಪತ್ನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಸಾಲಿಗ್ರಾಮ ತಾಲೂಕು ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ.ಪತಿ ಕ್ರೂರತನಕ್ಕೆ ಗಾಯಗೊಂಡ ಪತ್ನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವರದಕ್ಷಿಣೆ ಹಾಗೂ ಗಂಡುಮಗುವಿನ ವ್ಯಾಮೋಹಕ್ಕೆ ಒಳಗಾದ ಪತಿಯ ಹಿಂಸೆ ಭರಿಸಲು ಸಾಧ್ಯವಾಗದ ಪತ್ನಿ ನ್ಯಾಯಕ್ಕಾಗಿ ಸಾಲಿಗ್ರಾಮ ಪೊಲೀಸರ ಮೊರೆ ಹೋಗಿದ್ದಾರೆ.ಬೃಂದಾ(32) ಪತಿಯಿಂದ ಹಲ್ಲೆಗೆ ಒಳಗಾದ ಗೃಹಿಣಿ.ಹಲ್ಲೆ ನಡೆಸಿದ ಪತಿ ಬಸವರಾಜು,ಅತ್ತೆ ಕಾಳಮ್ಮ ಮತ್ತು ಮಾವ ಚೆಲುವಯ್ಯ ವಿರುದ್ದ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಬೃಂದಾ ದೂರು ದಾಖಲಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ಹುಣಸೇಗಾಲದ ಬೃಂದಾ ಹಾಗೂ ದಡದಹಳ್ಳಿಯ ಬಸವರಾಜ್ ಮದುವೆ ಆಗಿದ್ದರು.ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.ಗಂಡು ಮಗು ಹೆತ್ತಿಲ್ಲವೆಂದು ಪತ್ನಿಗೆ ಬಸವರಾಜ್ ಸಾಕಷ್ಟು ಕಿರುಕುಳ ನೀಡಿದ್ದಾನೆ.ವರದಕ್ಷಿಣೆ ವ್ಯಾಮೋಹಕ್ಕೆ ಒಳಗಾದ ಬಸವರಾಜು ಗಂಡು ಮಗು ಹೆತ್ತಿಲ್ಲವೆಂದು ಆಗಾಗ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾನೆ.ಈ ಬಗ್ಗೆ ಸಾಕಷ್ಟು ಬಾರಿ ಮನ ಒಲಿಸುವ ಕಾರ್ಯ ನಡೆದಿದೆ.ಆದರೂ ಎಚ್ಚೆತ್ತುಕೊಳ್ಳದ ಬಸವರಾಜು ಪತ್ನಿಯ ಮೇಲೆ ದೌರ್ಜನ್ಯ ತೋರಿಸುತ್ತಲೇ ಬಂದಿದ್ದಾನೆ.ಹೆಣ್ಣುಮಕ್ಕಳನ್ನ ಕರೆದುಕೊಂಡು ಹೋಗಿ ಆತ್ಮಹತ್ಯೆ ಮಾಡಿಕೋ ಆಗ ನಾನು ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಧಂಕಿ ಹಾಕುತ್ತಿದ್ದಾನೆ.ಪತಿಯ ವರ್ತನೆಯಿಂದ ಬೇಸತ್ತ ಬೃಂದಾ ಪೊಲೀಸರ ಮೊರೆ ಹೋಗಿದ್ದಾರೆ.ಹಿರಿಯರು ಬಸವರಾಜ್ ಗೆ ಬುದ್ದಿವಾದ ಹೇಳಿದ್ದರೂ ಬದಲಾಗಿಲ್ಲ.ಎರಡು ದಿನಗಳ ಹಿಂದೆ ಇದೇ ವಿಚಾರಕ್ಕೆ ಕ್ಯಾತೆ ತೆಗೆದ ಬಸವರಾಜ್ ಪತ್ನಿಯನ್ನ ಹಿಗ್ಗಾ ಮುಗ್ಗ ಥಳಿಸಿದ್ದಾನೆ.ಗಾಯಗೊಂಡ ಬೃಂದಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪತಿ ಹಾಕುತ್ತಿರುವ ಧಂಕಿಯಿಂದ ಬೃಂದಾ ಜೀವಭಯದಲ್ಲಿದ್ದಾರೆ.ತನ್ನ ಹಾಗೂ ಮಕ್ಕಳಿಗೆ ರಕ್ಷಣೆ ಇಲ್ಲವೆಂದು ಕಣ್ಣೀರಿಡುತ್ತಿದ್ದಾರೆ.ಗಂಡು ಮಗು ಹಾಗೂ ವರದಕ್ಷಿಣೆ ವ್ಯಾಮೋಹಕ್ಕೆ ಒಳಗಾದ ಪತಿರಾಯನಿಗೆ ಪೊಲೀಸರು ತಕ್ಕ ಶಾಸ್ತಿ ನೀಡಬೇಕಿದೆ.ಬೃಂದಾ ಹಾಗೂ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *