ಹೆತ್ತ ತಾಯಿಗೆ ಮಗಳ ಅಶ್ಲೀಲ ಫೋಟೋ ರವಾನಿಸಿದ ಪ್ರಿಯಕರ…ಮದುವೆ ನಿರಾಕರಿಸಿದ್ದಕ್ಕೆ ಸೇಡು…!

ಹೆತ್ತ ತಾಯಿಗೆ ಮಗಳ ಅಶ್ಲೀಲ ಫೋಟೋ ರವಾನಿಸಿದ ಪ್ರಿಯಕರ…ಮದುವೆ ನಿರಾಕರಿಸಿದ್ದಕ್ಕೆ ಸೇಡು…!

ಯುವಕನ ದುರ್ವರ್ತನೆಗೆ ಬೇಸತ್ತು ಮದುವೆ ನಿರಾಕರಿಸಿದ ಹಿನ್ನಲೆ ಪ್ರಿಯಕರ ತನ್ನ ಪ್ರಿಯಕರಳ ಅಶ್ಲೀಲ ಫೋಟೋವನ್ನ ಹೆತ್ತ ತಾಯಿಗೆ ರವಾನಿಸಿ ಸೇಡು ತೀರಿಸಿಕೊಂಡ ಘಟನೆ ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಯ್ಡುನಗರದಲ್ಲಿ ನಡೆದಿದೆ.ಮಗಳ ಅಶ್ಲೀಲ ಫೋಟೋ ನೋಡಿ ದಂಗಾದ ಹೆತ್ತ ತಾಯಿ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಅಳಿಯನಾಗಬೇಕಿದ್ದ ಪ್ರಿಯಕರನ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಕಲ್ಯಾಣಗಿರಿ ನಿವಾಸಿ ಮೊಹಮದ್ ವಾಸೀಂ ಮೇಲೆ ಎಫ.ಐ.ಆರ್.ದಾಖಲಾಗಿದೆ.

ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ನೊಂದ ಯುವತಿಗೆ ಮೊಹಮದ್ ವಾಸೀಂ ಪರಿಚಯವಾಗಿದ್ದಾನೆ.ಇಬ್ಬರೂ ಒಂದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಸಲುಗೆ ಬೆಳೆದಿದೆ.ಯುವತಿಯನ್ನ ಮದುವೆ ಆಗಲು ನಿರ್ಧರಿಸಿ ಹೆತ್ತ ತಾಯಿಯನ್ನ ಸಂಭಂಧ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.ಪ್ರಾರಂಭದಲ್ಲಿ ನಿರಾಕರಿಸಿದ ತಾಯಿ ನಂತರ ಹುಡುಗನ ಮನೆಯವರ ಒತ್ತಡಕ್ಕೆ ಮಣಿದು ಒಪ್ಪಿಗೆ ಸೂಚಿಸಿದ್ದಾರೆ.ನಿಶ್ಚಿತಾರ್ಥವಾದ ನಂತರ ಇಬ್ಬರೂ ಸುತ್ತಾಡಿದ್ದಾರೆ.ಈ ವೇಳೆ ಯುವತಿಯ ಅಶ್ಲೀಲ ಫೋಟೋ ಪಡೆಯುವಲ್ಲಿ ಮಹಮದ್ ವಾಸೀಂ ಯಶಸ್ವಿಯಾಗಿದ್ದಾನೆ.ಕೆಲವು ದಿನಗಳಲ್ಲಿ ಮಹಮದ್ ವಾಸೀಂ ವರ್ತನೆ ಬೇಸರಕ್ಕೆ ಕಾರಣವಾಗಿ ಮದುವೆ ನಿರಾಕರಿಸಿದ್ದಾರೆ.ಆದರೆ ಪಟ್ಟು ಬಿಡದ ಮಹಮದ್ ವಾಸೀಂ ಮದುವೆ ಮಾಡಿಕೊಡಿ ಇಲ್ಲಾಂದ್ರೆ ಅಶ್ಲೀಲ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.ಮಹಮದ್ ವಾಸೀಂ ನ ಬೆದರಿಕೆಗೆ ಮಣಿಯದ ಹಿನ್ನಲೆ ಯುವತಿಯ ತಾಯಿಗೆ ಅಶ್ಲೀಲ ಫೋಟೋ ರವಾನಿಸಿ ಸೇಡು ತೀರಿಸಿಕೊಂಡಿದ್ದಾನೆ.ಮಗಳ ಫೋಟೋ ರವಾನಿಸಿದ ಮಹಮದ್ ವಾಸೀಂ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *