ಶ್ರೀ ಯೋಗಾ ನರಸಿಂಹಸ್ವಾಮಿ ಸನ್ನಿಧಾನದಲ್ಲಿ `ಪವಿತ್ರೋತ್ಸವ’ ಸಂಭ್ರಮ…ಸಾವಿರಾರು ಭಕ್ತರು ಭಾಗಿ…

ಶ್ರೀ ಯೋಗಾ ನರಸಿಂಹಸ್ವಾಮಿ ಸನ್ನಿಧಾನದಲ್ಲಿ `ಪವಿತ್ರೋತ್ಸವ’ ಸಂಭ್ರಮ…ಸಾವಿರಾರು ಭಕ್ತರು ಭಾಗಿ…

ಮೈಸೂರು,ಸೆ15,Tv10 ಕನ್ನಡ

ಮೈಸೂರು ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ಪವಿತ್ರೋತ್ಸವ ವಿಶೇಷ ಪೂಜಾ ಮಹೋತ್ಸವವ

ನಡೆಯುತ್ತಿದೆ.ಬಾದ್ರಪದ, ಶುಕ್ಲ ಏಕಾದಶಿಯಿಂದ ಆರಂಬಿಸಿ, ಕೃಷ್ಣ ದ್ವಿತೀಯೇವರೆಗೂ ಪವಿತ್ರೋತ್ಸವ ಸ್ವಾಮಿಯ ಸನ್ನಿಧಾನದಲ್ಲಿ ಜರುಗಲಿದೆ.. ಪವಿತ್ರ ಎಂದರೇ ಶುದ್ದವಾಗಿರುವುದು, ಉತ್ಸವ ಎಂದರೇ ಹಬ್ಬ, ಜಾತ್ರೆಯೆಂದೇ ಅರ್ಥವಾಗಿದೆ.ಹೆಸರಲ್ಲೇ ತಿಳಿಸಿರುವಂತೆ ಲೋಕದಲ್ಲಿ ಇರುವಂತಹ ದುಷ್ಟಶಕ್ತಿಗಳು ಯಾವುದಾದರೂ ಪಾತಕಾದಿಗಳು ಜರುಗಿದ್ದಲ್ಲಿ ಈ ಉತ್ಸವ ಆಚರಣೆಯಿಂದಾಗಿ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ದೇವಾಲಯದ ಆಡಳಿತಾಧಿಕಾರಿ ಶ್ರೀ ಎನ್.ಶ್ರೀನಿವಾಸನ್ ಈ ಉತ್ಸವದ ಬಗ್ಗೆ ಮಾಹಿತಿ ನೀಡಿದರು. ಈ ಉತ್ಸವ ಉಲ್ಲೇಖ ನಮಗೆ ಅಗ್ನಿಪುರಾಣ ಹಾಗೂ ಗರುಡ ಪುರಾಣಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ.ಪಂಚಾರಾತ್ರಗಮದಲ್ಲಿ ಪ್ರಸಿದ್ಧ ಸಂಹಿತೆಯಾದ ಜಯಕ್ಯ ಸಂಹಿತೆಯಲ್ಲಿ ಸರ್ವದೋಶ ನಿವಾರಣೆ ಈ ಉತ್ಸವದದಲ್ಲಿ ಪ್ರಮುಖ ಅಂಶವಾಗಿದೆ ಎಂದು ವಿವರಿಸಿದರು.
ಎಲ್ಲರಿಗೂ ಶಾಂತಿ, ಸಂತೋಷ, ಕಲ್ಯಾಣ ಎಲ್ಲವೂ ಲಭಿಸಲಿ ಎಂಬ ಉದ್ದೇಶದಿಂದ ಸುದರ್ಶನ ನಾರಸಿಂಹ ಕ್ಷೇತ್ರಗಳಲ್ಲಿ ಅಂಕನಾರ್ಪಣದಿಂದ ತೊಡಗಿ ಯಾಗಶಾಲ ಮಂಡಲರಾಧನೆಯೊಂದಿಗೆ ಭಗವಂತನಿಗೆ (ಯೋಗಾನರಸಿಂಹ ಸ್ವಾಮಿಯವರಿಗೆ) ಶುದ್ಧವಾದ ರೇಷ್ಮೇಯಿಂದ ಮಾಡಲ್ಪಟ್ಟ ಮಾಲೆಗಳನ್ನು ಪವಿತ್ರೀಕರಿಸಿ ಧರಿಸಲಾಗುವುದು ಎಂದರು. ಇದರಿಂದಾಗಿ ಜಗತ್ತಿಗೆ ಕ್ಷೇಮ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಸರ್ವದೋಷ ನಿವಾರಣೆ, ಸರ್ವಯಜ್ಞ ಫಲಪ್ರದ, ಸರ್ವದೋಷ ಉಪಶಮನ, ಸರ್ವ ಸುಷ್ಠಿಕರ, ಸರ್ವ ಕಾಮಪ್ರದ ಮತ್ತು ಸರ್ವ ಲೋಕಶಾಂತಿ ಈ ಪವಿತ್ರೋತ್ಸವದಿಂದ ಲಭಿಸಲಿದ್ದು, ಭಕ್ತಾದಿಗಳು ಆಗಮಿಸಿ, ಈ ಉತ್ಸವದಲ್ಲಿ ಪಾಲ್ಗೊಂಡು ಯೋಗಾನರಸಿಂಹ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದರು.
ಈ ಸಂದರ್ಭದಲ್ಲಿ ತಿಳಿಸಿದರು. ದೇವಾಲಯದ ಸಂಸ್ಥಾಪರಾದ ಶ್ರೀ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರ ನೇತೃತ್ವದಲ್ಲಿ ಪವಿತ್ರೋತ್ಸವದ ಪೂಜಾ ಕೈಂಕರ್ಯಗಳು ನಡೆಯಿತು. ಇದೇ ವೇಳೆ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

Spread the love

Related post

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…
ಕ್ಯಾಪ್ಟನ್ ಅಭಿಮನ್ಯುವಿಗೆ ರಾಜೋಚಿತ ಬೀಳ್ಕೊಡುಗೆ ನೀಡಿ…ಸಚಿವ ಈಶ್ವರ ಖಂಡ್ರೆ

ಕ್ಯಾಪ್ಟನ್ ಅಭಿಮನ್ಯುವಿಗೆ ರಾಜೋಚಿತ ಬೀಳ್ಕೊಡುಗೆ ನೀಡಿ…ಸಚಿವ ಈಶ್ವರ ಖಂಡ್ರೆ

ಕ್ಯಾಪ್ಟನ್ ಅಭಿಮನ್ಯುವಿಗೆ ರಾಜೋಚಿತ ಬೀಳ್ಕೊಡುಗೆ ನೀಡಿ…ಸಚಿವ ಈಶ್ವರ ಖಂಡ್ರೆ ಬೆಂಗಳೂರು,ಆ19,Tv10 ಕನ್ನಡ ಆರು ಬಾರಿ ಚಿನ್ನದ ಅಂಬಾರಿ ಹೊತ್ತಿರುವ 60 ವರ್ಷದ ಕ್ಯಾಪ್ಟನ್ ಅಭಿಮನ್ಯುವಿಗೆ ಈ ಬಾರಿಯ ಮೈಸೂರು…
ಮೂವರು ಗುಂಡೇಟಿಗೆ ಬಲಿ ಪ್ರಕರಣ…ಬೇಟೆಗಾರರು ಎಂಬುದಕ್ಕೆ ಪುರಾವೆ…ಸಾಕ್ಷ್ಯ ಸಲ್ಲಿಸಿದ ಅರಣ್ಯ ಇಲಾಖೆ…

ಮೂವರು ಗುಂಡೇಟಿಗೆ ಬಲಿ ಪ್ರಕರಣ…ಬೇಟೆಗಾರರು ಎಂಬುದಕ್ಕೆ ಪುರಾವೆ…ಸಾಕ್ಷ್ಯ ಸಲ್ಲಿಸಿದ ಅರಣ್ಯ ಇಲಾಖೆ…

ಮೂವರು ಗುಂಡೇಟಿಗೆ ಬಲಿ ಪ್ರಕರಣ…ಬೇಟೆಗಾರರು ಎಂಬುದಕ್ಕೆ ಪುರಾವೆ…ಸಾಕ್ಷ್ಯ ಸಲ್ಲಿಸಿದ ಅರಣ್ಯ ಇಲಾಖೆ… ಚಾಮರಾಜನಗರ,ಆ17,Tv10 ಕನ್ನಡ ಚಾಮರಾಜನಗರದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರು ಬೇಟೆಗಾರರು ಎಂಬುದಕ್ಕೆ ಅರಣ್ಯ ಇಲಾಖೆ…

Leave a Reply

Your email address will not be published. Required fields are marked *