ಲವ್ ಫೇಲ್…ಕೈಕೊಟ್ಟ ಅತ್ತೆ ಮಗಳು…ಡೆತ್ ನೋಟ್ ಬರೆದು ಭಗ್ನಪ್ರೇಮಿ ನಾಪತ್ತೆ…ಒಂದು ವಾರವಾದ್ರೂ ಇಲ್ಲ ಸುಳಿವು…ಕುಟುಂಬಸ್ಥರು ಹೈರಾಣು…

ಲವ್ ಫೇಲ್…ಕೈಕೊಟ್ಟ ಅತ್ತೆ ಮಗಳು…ಡೆತ್ ನೋಟ್ ಬರೆದು ಭಗ್ನಪ್ರೇಮಿ ನಾಪತ್ತೆ…ಒಂದು ವಾರವಾದ್ರೂ ಇಲ್ಲ ಸುಳಿವು…ಕುಟುಂಬಸ್ಥರು ಹೈರಾಣು…

ಮೈಸೂರು,ಸೆ17,Tv10 ಕನ್ನಡ

ನಾಲ್ಕು ವರ್ಷಗಳಿಂದ ಪ್ರೀತಿಸಿ ಕೈಕೊಟ್ಟ ಅತ್ತೆ ಮಗಳ ವರ್ತನೆಗೆ ಬೇಸತ್ತ ಭಗ್ನಪ್ರೇಮಿ ಡೆತ್ ನೋಟ್ ಬರೆದು ನಾಪತ್ತೆಯಾದ ಘಟನೆ ಲಿಂಗಾಂಬುದಿ ಪಾಳ್ಯದ ಸಿದ್ದರಾಮಯ್ಯ ನಗರದಲ್ಲಿ ನಡೆದಿದೆ.ಪ್ರೇಮಿ ನಾಪತ್ತೆಯಾಗಿ ಒಂದು ವಾರವಾದರೂ ಸುಳಿವು ದೊರೆತಿಲ್ಲ.ಪ್ರೇಮಿಯ ನಾಪತ್ತೆಯಿಂದಾಗಿ ಕುಟುಂಬಸ್ಥರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

ಸಿದ್ದರಾಮಯ್ಯ ನಗರದ ಮಹದೇವು ರವರ ಪುತ್ರ ರವಿ (26) ನಾಪತ್ತೆಯಾದವನು.ಕಳೆದ ನಾಲ್ಕು ವರ್ಷಗಳಿಂದ ಅತ್ತೆ ಮಗಳು ವಾಣಿಶ್ರೀಯನ್ನ ಪ್ರೀತಿಸುತ್ತಿದ್ದ.ವಾಣಿಶ್ರೀ ಸಹ ರವಿಯನ್ನ ಪ್ರೀತಿಸುತ್ತಿದ್ದಳು.ಹದಿನೈದು ದಿನಗಳ ಹಿಂದೆ ವಾಣಿಶ್ರೀ ಯೂ ಟರ್ನ್ ಹೊಡೆದಿದ್ದಾಳೆ.ತಾನು ಪ್ರೀತಸುತ್ತಿಲ್ಲವೆಂದು ಹೇಳಿದ್ದಲ್ಲದೆ ರವಿ ಬಗ್ಗೆ ಚಿಕ್ಕಪ್ಪ ಹಾಗೂ ಮಾವನ ಬಳಿ ಇಲ್ಲಸಲ್ಲದ ದೂರು ನೀಡಿದ್ದಾಳೆ.ಈ ಎಲ್ಲಾ ಬೆಳವಣಿಗೆಯಿಂದ ಬೇಸತ್ತ ರವಿ ಸೆಪ್ಟೆಂಬರ್ 10 ರಂದು ಮನೆ ಬಿಟ್ಟಿದ್ದಾನೆ.ರವಿ ಮಲಗುವ ಹಾಸಿಗೆ ಕೆಳಗೆ ಪರಿಶೀಲಿಸಿದಾಗ ಡೆತ್ ನೋಟ್ ದೊರೆತಿದೆ.*ಇಷ್ಟು ದಿನ ಲವ್ ಮಾಡಿ ಈಗ ಪ್ರೀತಿಸಿಲ್ಲವೆಂದು ಹೇಳಿ ನನ್ನ ಮತ್ತು ನಮ್ಮ ಮನೆಯವರ ನೆಮ್ಮದಿ ಹಾಳು ಮಾಡಿದ್ದಲ್ಲದೆ ಮನೆಯವರಿಗೆ ಅವಮಾನ ಮಾಡಿ ಸಂಭಂಧಿಕರ ಬಳಿ ಇಲ್ಲಸಲ್ಲದ ಕಂಪ್ಲೇಂಟ್ ಮಾಡಿ ನೆಮ್ಮದಿ ಹಾಳು ಮಾಡಿದ್ದಾರೆ.ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಯಾರೂ ಹುಡುಕಬೇಡಿ.ಇದಕ್ಕೆಲ್ಲಾ ಕಾರಣ ಮಾವ ಮಹದೇವ,ಚಿಕ್ಕಪ್ಪ ಮಹದೇವಮೂರ್ತಿ,ವಾಣಿಶ್ರೀ ಕಾರಣ* ಎಂದು ಬರೆದು ನಾಪತ್ತೆಯಾಗಿದ್ದಾನೆ.ರವಿಗಾಗಿ ಕುಟುಂಬಸ್ಥರು ಹುಡುಕಾಡಿ ಹೈರಾಣರಾಗಿದ್ದಾರೆ.ಮಗನ ನಾಪತ್ತೆಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳುವಂತೆ ರವಿ ತಂದೆ ಮಹದೇವು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಎಂಎಲ್ಸಿ ವಿಶ್ವನಾಥ್ ವಿರುದ್ದ FIR…ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪ…55 ಲಕ್ಷ ಹಿಂದಿರುಗಿಸದ ಆರೋಪ…

ಎಂಎಲ್ಸಿ ವಿಶ್ವನಾಥ್ ವಿರುದ್ದ FIR…ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ…

ಎಂಎಲ್ಸಿ ವಿಶ್ವನಾಥ್ ವಿರುದ್ದ FIR…ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪ…55 ಲಕ್ಷ ಹಿಂದಿರುಗಿಸದ ಆರೋಪ… ಮೈಸೂರು,ಮೇ20,Tv10 ಕನ್ನಡ ಸಾಲದ ಹಣ ವಾಪಸ್ ಕೇಳಲು ಹೋದ…
ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ..ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ…

ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ..ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ…

ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ..ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ… ಮಂಡ್ಯ,ಮೇ20,Tv10 ಕನ್ನಡ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ.ಮಾರಕಾಸ್ತ್ರಗಳಿಂದ ಯುವಕನನ್ನ ದುಷ್ಕರ್ಮಿಗಳು ಕೊಚ್ಚಿ ಹಾಕಿದ್ದಾರೆ.ಮಂಡ್ಯ ಜಿಲ್ಲೆ ಮದ್ದೂರು…
ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ…

ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ…

ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ… ಶ್ರೀರಂಗಪಟ್ಟಣ,ಮೇ19,Tv10 ಕನ್ನಡ ಅಕ್ರಮ ಗಣಿಗಾರಿಕೆ ವಿರುದ್ಧ ಮಂಡ್ಯ ಜಿಲ್ಲಾಡಳಿತದ ಸಮರ ಸಾರಿದೆ.ನಿಷೇಧದ ನಡುವೆಯೂ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ…

Leave a Reply

Your email address will not be published. Required fields are marked *