ಲವ್ ಫೇಲ್…ಕೈಕೊಟ್ಟ ಅತ್ತೆ ಮಗಳು…ಡೆತ್ ನೋಟ್ ಬರೆದು ಭಗ್ನಪ್ರೇಮಿ ನಾಪತ್ತೆ…ಒಂದು ವಾರವಾದ್ರೂ ಇಲ್ಲ ಸುಳಿವು…ಕುಟುಂಬಸ್ಥರು ಹೈರಾಣು…

ಲವ್ ಫೇಲ್…ಕೈಕೊಟ್ಟ ಅತ್ತೆ ಮಗಳು…ಡೆತ್ ನೋಟ್ ಬರೆದು ಭಗ್ನಪ್ರೇಮಿ ನಾಪತ್ತೆ…ಒಂದು ವಾರವಾದ್ರೂ ಇಲ್ಲ ಸುಳಿವು…ಕುಟುಂಬಸ್ಥರು ಹೈರಾಣು…

ಮೈಸೂರು,ಸೆ17,Tv10 ಕನ್ನಡ

ನಾಲ್ಕು ವರ್ಷಗಳಿಂದ ಪ್ರೀತಿಸಿ ಕೈಕೊಟ್ಟ ಅತ್ತೆ ಮಗಳ ವರ್ತನೆಗೆ ಬೇಸತ್ತ ಭಗ್ನಪ್ರೇಮಿ ಡೆತ್ ನೋಟ್ ಬರೆದು ನಾಪತ್ತೆಯಾದ ಘಟನೆ ಲಿಂಗಾಂಬುದಿ ಪಾಳ್ಯದ ಸಿದ್ದರಾಮಯ್ಯ ನಗರದಲ್ಲಿ ನಡೆದಿದೆ.ಪ್ರೇಮಿ ನಾಪತ್ತೆಯಾಗಿ ಒಂದು ವಾರವಾದರೂ ಸುಳಿವು ದೊರೆತಿಲ್ಲ.ಪ್ರೇಮಿಯ ನಾಪತ್ತೆಯಿಂದಾಗಿ ಕುಟುಂಬಸ್ಥರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

ಸಿದ್ದರಾಮಯ್ಯ ನಗರದ ಮಹದೇವು ರವರ ಪುತ್ರ ರವಿ (26) ನಾಪತ್ತೆಯಾದವನು.ಕಳೆದ ನಾಲ್ಕು ವರ್ಷಗಳಿಂದ ಅತ್ತೆ ಮಗಳು ವಾಣಿಶ್ರೀಯನ್ನ ಪ್ರೀತಿಸುತ್ತಿದ್ದ.ವಾಣಿಶ್ರೀ ಸಹ ರವಿಯನ್ನ ಪ್ರೀತಿಸುತ್ತಿದ್ದಳು.ಹದಿನೈದು ದಿನಗಳ ಹಿಂದೆ ವಾಣಿಶ್ರೀ ಯೂ ಟರ್ನ್ ಹೊಡೆದಿದ್ದಾಳೆ.ತಾನು ಪ್ರೀತಸುತ್ತಿಲ್ಲವೆಂದು ಹೇಳಿದ್ದಲ್ಲದೆ ರವಿ ಬಗ್ಗೆ ಚಿಕ್ಕಪ್ಪ ಹಾಗೂ ಮಾವನ ಬಳಿ ಇಲ್ಲಸಲ್ಲದ ದೂರು ನೀಡಿದ್ದಾಳೆ.ಈ ಎಲ್ಲಾ ಬೆಳವಣಿಗೆಯಿಂದ ಬೇಸತ್ತ ರವಿ ಸೆಪ್ಟೆಂಬರ್ 10 ರಂದು ಮನೆ ಬಿಟ್ಟಿದ್ದಾನೆ.ರವಿ ಮಲಗುವ ಹಾಸಿಗೆ ಕೆಳಗೆ ಪರಿಶೀಲಿಸಿದಾಗ ಡೆತ್ ನೋಟ್ ದೊರೆತಿದೆ.*ಇಷ್ಟು ದಿನ ಲವ್ ಮಾಡಿ ಈಗ ಪ್ರೀತಿಸಿಲ್ಲವೆಂದು ಹೇಳಿ ನನ್ನ ಮತ್ತು ನಮ್ಮ ಮನೆಯವರ ನೆಮ್ಮದಿ ಹಾಳು ಮಾಡಿದ್ದಲ್ಲದೆ ಮನೆಯವರಿಗೆ ಅವಮಾನ ಮಾಡಿ ಸಂಭಂಧಿಕರ ಬಳಿ ಇಲ್ಲಸಲ್ಲದ ಕಂಪ್ಲೇಂಟ್ ಮಾಡಿ ನೆಮ್ಮದಿ ಹಾಳು ಮಾಡಿದ್ದಾರೆ.ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಯಾರೂ ಹುಡುಕಬೇಡಿ.ಇದಕ್ಕೆಲ್ಲಾ ಕಾರಣ ಮಾವ ಮಹದೇವ,ಚಿಕ್ಕಪ್ಪ ಮಹದೇವಮೂರ್ತಿ,ವಾಣಿಶ್ರೀ ಕಾರಣ* ಎಂದು ಬರೆದು ನಾಪತ್ತೆಯಾಗಿದ್ದಾನೆ.ರವಿಗಾಗಿ ಕುಟುಂಬಸ್ಥರು ಹುಡುಕಾಡಿ ಹೈರಾಣರಾಗಿದ್ದಾರೆ.ಮಗನ ನಾಪತ್ತೆಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳುವಂತೆ ರವಿ ತಂದೆ ಮಹದೇವು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ರಸ್ತೆ ಡಿವೈಡರ್ ಗೆ ಖಾಸಗಿ ಮಿನಿ ಬಸ್ ಢಿಕ್ಕಿ…ಅಯ್ಯಪ್ಪಸ್ವಾಮಿ ಭಕ್ತರು ಪ್ರಾಣಾಪಾಯದಿಂದ ಪಾರು…

ರಸ್ತೆ ಡಿವೈಡರ್ ಗೆ ಖಾಸಗಿ ಮಿನಿ ಬಸ್ ಢಿಕ್ಕಿ…ಅಯ್ಯಪ್ಪಸ್ವಾಮಿ ಭಕ್ತರು ಪ್ರಾಣಾಪಾಯದಿಂದ…

ರಸ್ತೆ ಡಿವೈಡರ್ ಗೆ ಖಾಸಗಿ ಮಿನಿ ಬಸ್ ಢಿಕ್ಕಿ…ಅಯ್ಯಪ್ಪಸ್ವಾಮಿ ಭಕ್ತರು ಪ್ರಾಣಾಪಾಯದಿಂದ ಪಾರು… ನಂಜನಗೂಡು,ಸೆ20,Tv10 ಕನ್ನಡ ರಸ್ತೆ ಡಿವೈಡರ್ ಗೆ ಢಿಕ್ಕಿ ಹೊಡೆದ ಮಿನಿಬಸ್ ಪಲ್ಟಿಯಾದ ಘಟನೆ ನಂಜನಗೂಡು…
ಮುಳುಗದೆ…ತೇಲದೆ…ಕರಗದೆ ಅತಂತ್ರವಾದ ಗಣಪತಿ ಮೂರ್ತಿಗಳು…ಸಂಪ್ರದಾಯಕ ವಿಸರ್ಜನೆಗೆ ಆಧ್ಯತೆ ನೀಡುವರೇ…?

ಮುಳುಗದೆ…ತೇಲದೆ…ಕರಗದೆ ಅತಂತ್ರವಾದ ಗಣಪತಿ ಮೂರ್ತಿಗಳು…ಸಂಪ್ರದಾಯಕ ವಿಸರ್ಜನೆಗೆ ಆಧ್ಯತೆ ನೀಡುವರೇ…?

ಮೈಸೂರು,ಸೆ20,Tv10 ಕನ್ನಡ ವಿಘ್ನನಿವಾರಕ ಗಣಪತಿ ಹಬ್ಬ ನಾಡಿನ ಮೂಲೆ ಮೂಲೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.ರಸ್ತೆ ರಸ್ತೆಗಳಲ್ಲೂ ವಿವಿಧ ಆಕಾರಗಳಲ್ಲಿ ವಿಗ್ರಹಗಳು ಭಕ್ತರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.ವಿಸರ್ಜನೆಗಾಗಿ ಹಮ್ಮಿಕೊಳ್ಳುವ ಮೆರವಣಿಗೆಗಳಂತೂ ಜಂಬೂಸವಾರಿಯನ್ನೂ ನಾಚಿಸಯವಂತೆ…
ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಾಹಿತಿಗಳೇ ಆಗಲಿ :ಡಾ. ಸಿ ಪಿ ಕೆ.

ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಾಹಿತಿಗಳೇ ಆಗಲಿ :ಡಾ. ಸಿ ಪಿ…

ಮೈಸೂರು, ಸೆಪ್ಟೆಂಬರ್. 19-ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರನ್ನಾಗಿ ಸಾಹಿತ್ಯೇತರ ವ್ಯಕ್ತಿಯನ್ನೂ ಅಧ್ಯಕ್ಷರನ್ನಾಗಿಸುವುದು ಬೇಡ ಎಂದು ಹಿರಿಯ ಸಾಹಿತಿ ಡಾ. ಸಿ. ಪಿ ಕೆ…

Leave a Reply

Your email address will not be published. Required fields are marked *