ಹಸೆಮಣೆ ಏರಬೇಕಿದ್ದ ಯುವತಿ ನೇಣಿಗೆ…ಭಾವಿಪತಿಯೇ ಕೊಲೆ ಮಾಡಿರುವ ಆರೋಪ…

ಹಸೆಮಣೆ ಏರಬೇಕಿದ್ದ ಯುವತಿ ನೇಣಿಗೆ…ಭಾವಿಪತಿಯೇ ಕೊಲೆ ಮಾಡಿರುವ ಆರೋಪ…

ಹೆಚ್.ಡಿ.ಕೋಟೆ,ಅ6,Tv10 ಕನ್ನಡ

ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹೆಚ್.ಡಿ.ಕೋಟೆ ತಾಲೂಕು ಹಿರೆಹಳ್ಳಿಯಲ್ಲಿ ನಡೆದಿದೆ.ನಿಶ್ಚಿತಾರ್ಥ ಮಾಡಿಕೊಂಡ ಭಾವಿ ಪತಿಯೇ ಕೊಂದು ನೇಣು ಹಾಕಿರುವುದಾಗಿ ಯುವತಿಯ ಪೋಷಕರು ಆರೋಪಿಸಿದ್ದಾರೆ.
ಕವಿತ (20) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ದುರ್ದೈವಿ.
ಕವಿತಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜಗ ಅಲಿಯಾಸ್ ನಿರಂಜನ್ ಕವಿತಳನ್ನು ನೇಣು ಬಿಗಿದು ಕೊಲೆ ಮಾಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ.ಮೂರು ತಿಂಗಳ ಹಿಂದೆ ಕವಿತ ಮತ್ತು ಜಗ ಮದುವೆ ನಿಶ್ಚಯವಾಗಿತ್ತು.
ಇದೇ ತಿಂಗಳ 22ರಂದು ಎಚ್.ಡಿ.ಕೋಟೆ ಪಟ್ಟಣದ ಜೆಎಸ್ ಎಸ್ ಮಂಗಳ ಮಂಟಪದಲ್ಲಿ ಇಬ್ಬರೂ ಸತಿಪತಿಗಳಾಗಬೇಕಿತ್ತು.
ಕವಿತ ಮನೆಯಲ್ಲಿದ್ದಾಗ ಸಂಜೆ ನಾಲ್ಕುಗಂಟೆ ಸಮಯದಲ್ಲಿ ಜಗ ಮನೆಗೆ ಬಂದಿದ್ದಾನೆ. ಕವಿ‌ತಳನ್ನು ಕೊಂದು ಮನೆಯ ಮೇಲ್ಚಾವಣಿಗೆ ನೇತುಹಾಕಿ ಮನೆಯಲ್ಲಿದ್ದ ಎರಡು ಲಕ್ಷ ನಗದು ಸಮೇತ ಹಾಗೂ ನಿಶ್ಚಿತಾರ್ಥದ ಪೋಟೋ ಮತ್ತು ಕವಿತ ಮೊಬೈಲ್ ಸಮೇತ ಜಗ ಪರಾರಾಯಾಗಿದ್ದಾನೆಂದು ಆರೋಪಿಸಿದ್ದಾರೆ.

ಕವಿತ ಪೋಷಕರ ದೂರಿನ ಮೇಲೆ ಎಚ್.ಡಿ.ಕೋಟೆ ಪೊಲೀಸರು ಆರೋಪಿ ಜಗನನ್ನು ಬಂಧಿಸಿದ್ದಾರೆ..

Spread the love

Related post

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ…2.27 ಕೋಟಿ ಸಂಗ್ರಹ…ನಿಷೇಧಿತ 2000 ಮುಖಬೆಲೆಯ ನೋಟುಗಳು ಪತ್ತೆ…

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ…2.27 ಕೋಟಿ ಸಂಗ್ರಹ…ನಿಷೇಧಿತ…

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ…2.27 ಕೋಟಿ ಸಂಗ್ರಹ…ನಿಷೇಧಿತ 2000 ಮುಖಬೆಲೆಯ ನೋಟುಗಳು ಪತ್ತೆ… ಹನೂರು,ಅ16,Tv10 ಕನ್ನಡ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆ…
ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ…

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ…

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ… ಮೈಸೂರು,ಅ16,Tv10 ಕನ್ನಡ ಮಾಧ್ಯಮದ ಗೆಳೆಯರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ ಕ್ಲಿಕ್ಕಿಸಿದ್ದಾರೆ.ಚಾಮುಂಡಿ ಬೆಟ್ಟಕ್ಕೆ ಭೇಟಿ‌ ನೀಡಿದ ವೇಳೆತಾವೇ ಮೊಬೈಲ್ ಪಡೆದು ಸೆಲ್ಫಿ…
ಉಪ ಪ್ರಾಂಶುಪಾಲರಾಗಿ ನೇಮಕ ಮಾಡುವ ಆಮಿಷ…7.45 ಲಕ್ಷ ವಂಚನೆ…ಸಿಎಆರ್ ಮುಖ್ಯಪೇದೆ,ಪತ್ನಿ ಸೇರಿದಂತೆ 7 ಮಂದಿ ವಿರುದ್ದ FIR…

ಉಪ ಪ್ರಾಂಶುಪಾಲರಾಗಿ ನೇಮಕ ಮಾಡುವ ಆಮಿಷ…7.45 ಲಕ್ಷ ವಂಚನೆ…ಸಿಎಆರ್ ಮುಖ್ಯಪೇದೆ,ಪತ್ನಿ ಸೇರಿದಂತೆ…

ಮೈಸೂರು,ಅ16,Tv10 ಕನ್ನಡ ಪಿಯು ಕಾಲೇಜಿಗೆ ಉಪ ಪ್ರಾಂಶುಪಾಲರಾಗಿ ಹಾಗೂ ಟ್ರಸ್ಟ್ ಗೆ ಟ್ರಸ್ಟಿಯಾಗಿ ನೇಮಕ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಸಿಎಆರ್ ಮುಖ್ಯಪೇದೆ ಹಾಗೂ ಪತ್ನಿ 7.45 ಲಕ್ಷ ವಂಚಿಸಿದ…

Leave a Reply

Your email address will not be published. Required fields are marked *