ಸ್ನಾನ ಮಾಡಲು ಬಂದ ವ್ಯಕ್ತಿ ದೇವಿಕೆರೆಯಲ್ಲಿ ಬಿದ್ದು ಸಾವು…ಹುಟ್ಟುಹಬ್ಬ ಮುನ್ನಾ ದಿನ ಮಸಣಕ್ಕೆ…

ಸ್ನಾನ ಮಾಡಲು ಬಂದ ವ್ಯಕ್ತಿ ದೇವಿಕೆರೆಯಲ್ಲಿ ಬಿದ್ದು ಸಾವು…ಹುಟ್ಟುಹಬ್ಬ ಮುನ್ನಾ ದಿನ ಮಸಣಕ್ಕೆ…

ಮೈಸೂರು,ಅ25,Tv10 ಕನ್ನಡ

ಹುಟ್ಟುಹಬ್ಬ ಮುನ್ನಾ ದಿನ ನಾಡದೇವಿಯ ದರುಶನ ಪಡೆಯಲು ಬಂದ ವ್ಯಕ್ತಿ ದೇವಿಕೆರೆ ಪಾಲಾಗಿದ್ದಾರೆ.ದೇವಿಯ ಆರಾಧಕರಾದ ಬೆಂಗಳೂರು ಮೂಲದ ಚೇತನ್ (27) ಮೃತ ದುರ್ದೈವಿ.ಮೃತ ಚೇತನ್ ಬೆಂಗಳೂರಿನ ಬಳಗೇರಿ ನಿವಾಸಿ ಎಂದು ಹೇಳಲಾಗಿದೆ.

ನಾಳೆ ಚೇತನ್ ರವರ ಜನ್ಮದಿನ.ಅಲ್ಲದೆ ಇವರು ದೇವಿಯ ಆರಾಧಕರೂ ಸಹ ಆಗಿದ್ದಾರೆ.ಹುಟ್ಟುಹಬ್ಬದ ಮುನ್ನಾ ದಿನ ನಾಡದೇವಿಯ ದರುಶನ ಪಡೆಯಲು ತಮ್ಮ ನಾಲ್ಕು ಜನ ಸ್ನೇಹಿತರೊಂದಿಗೆ ಬಂದು ಚಾಮುಂಡಿ ಬೆಟ್ಟದ ವಸತಿಗೃಹದಲ್ಲಿ ತಂಗಿದ್ದಾರೆ.ಇಂದು ಮುಂಜಾನೆ ದೇವೆಕೆರೆಯಲ್ಲಿ ಸ್ನಾನ ಮಾಡಲು ತೆರಳಿದ ವೇಳೆ ಆಕಸ್ಮಿಕವಾಗಿ ಜಾರಿ ನೀರುಪಾಲಾಗಿದ್ದಾರೆ.ಇಂದು ಬೆಳಿಗ್ಗೆ ದೇವರ ಶುದ್ದಿಗಾಗಿ ಕೆರೆಯಿಂದ ನೀರು ತರಲು ಅರ್ಚಕರು ಬಂದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.ಕೆ.ಆರ್.ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *