ಗ್ರಾ.ಪಂ.ಉಪಾಧ್ಯಕ್ಷೆ ಪತಿ ಕೊಲೆ ಪ್ರಕರಣ…ಮತ್ತೋರ್ವ ಆರೋಪಿ ಬಂಧನ…ರೌಡಿ ಶೀಟರ್ ಧನರಾಜ್ ಭೋಲಾ ಅಂದರ್…

ಗ್ರಾ.ಪಂ.ಉಪಾಧ್ಯಕ್ಷೆ ಪತಿ ಕೊಲೆ ಪ್ರಕರಣ…ಮತ್ತೋರ್ವ ಆರೋಪಿ ಬಂಧನ…ರೌಡಿ ಶೀಟರ್ ಧನರಾಜ್ ಭೋಲಾ ಅಂದರ್…

ನಂಜನಗೂಡು,ಅ25,Tv10 ಕನ್ನಡ

ನಂಜನಗೂಡು ತಾಲೂಕು ದೇವರಸನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಪತಿ ನಂಜುಂಡಸ್ವಾಮಿ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಮತ್ತೋರ್ವ ಆರೋಪಿಯನ್ನ ಬಂಧಿಸಲಾಗಿದೆ.ಈಗಾಗಲೇ ಬಿಜೆಪಿ ಮುಖಂಡ ಸೇರಿದಂತೆ ನಾಲ್ವರನ್ನ ಬಙಧಿಸಿದ್ದ ಪೊಲೀಸರು ನಿನ್ನೆ ರಾತ್ರಿ ಮತ್ತೋರ್ವ ಆರೋಪಿಯನ್ನ ಬಂಧಿಸಿದ್ದಾರೆ.ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಬಂಧಿತರ ಸಂಖ್ಯೆ 5 ಕ್ಕೆ ಏರಿದೆ.

ನಂಜನಗೂಡಿನ ರೌಡಿಶೀಟರ್ ಧನರಾಜ್ ಭೋಲಾ ಬಂಧಿತ ಅರೋಪಿ.ಈ ಹಿಂದೆ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಧನರಾಜ್ ಭೋಲಾ ಜೈಲು ವಾಸ ಅನುಭವಿಸಿದ್ದ.ಇದೀಗ ನಂಜುಂಡಸ್ವಾಮಿ ಕೊಲೆ ಪ್ರಕರಣದಲ್ಲಿ ಇದೇ ಧನರಾಜ್ ಭೋಲಾ ಭಾಗಿಯಾಗಿ ಪೊಲೀಸರ ಅತಿಥಿಯಾಗಿದ್ದಾನೆ.

ದೇವರಸನ ಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಸುಮತಿ ಅವಧಿ ಮುಗಿದಿದ್ದು ಒಪ್ಪಂದದ ಪ್ರಕಾರ ಉಪಾಧ್ಯಕ್ಷೆಯಾಗಿದ್ದ ನಂಜುಂಡಸ್ವಾಮಿ ಪತ್ನಿ ಸೌಭಾಗ್ಯ ರವರಿಗೆ ಅಧಿಕಾರ ನೀಡಬೇಕಿತ್ತು.ಆದರೆ ಈ ವಿಚಾರದಲ್ಲಿ ಸುಮತಿ ಸಂಭಂಧಿ ಹಾಗೂ ಹಾಲಿ ಸದಸ್ಯ ಗೋವರ್ಧನ್ ಅಡ್ಡಗಾಲು ಹಾಕಿ ಅಧಿಕಾರ ನೀಡಲು ಕ್ಯಾತೆ ತೆಗೆದಿದ್ದ.ಅಕ್ಟೋಬರ್ 6 ರಂದು ಇದೇ ವಿಚಾರವಾಗಿ ಮಾತನಾಡಲು ನಂಜುಂಡಸ್ವಾಮಿ ಹಣದ ಸಮೇತ ತೆರಳಿದ್ದಾರೆ.ಗೋವರತಧನ್ ಹಾಗೂ ಇತರರನ್ನ ಭೇಟಿ ಮಾಡಿದ್ದಾರೆ.ಆ ದಿನ ರಾತ್ರಿ ನಂಜುಂಡಸ್ವಾಮಿ ಮನೆಗೆ ಹಿಂದಿರುಗಿಲ್ಲ.ಮರುದಿನ ಜಮೀನೊಂದರಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದಿದ್ದಾರೆ.ಆಸ್ಪತ್ರೆಗೆ ಸಾಗಿಸುವ ವೇಳೆ ನಂಜುಂಡಸ್ವಾಮಿ ಮೃತಪಟ್ಟಿದ್ದಾರೆ.

ನಂಜುಂಡಸ್ವಾಮಿ ಸಾವು ಅನುಮಾನಾಸ್ಪದವಾಗಿದೆ ಎಂದು ಪತ್ನಿ ಸೌಭಾಗ್ಯ ಪೊಲೀಸ್ ಠಾಣೆಯಲ್ಲಿ ಗೀವರ್ಧನ್ ವಿರುದ್ದ ದೂರು ನೀಡಿ ಕೊಲೆ ಎಂದು ಆರೋಪಿಸಿದ್ದರು.ಮತ್ತೊಂದೆಡೆ ಆರೋಪ ಹೊತ್ತ ಗೋವರ್ಧನ್ ಇದು ಅಪಘಾತ ಎಂದು ಬಿಂಬಿಸಿ ಪೊಲೀಸರನ್ನೇ ದಿಕ್ಕಿ ತಪ್ಪಿಸುವಂತೆ ಮಾಡಿದ್ದ.ಆದ್ರೆ ಸಂಚಾರಿ ಠಾಣೆ ಪೊಲೀಸರು ಕೂಲಂಕುಷವಾಗು ಪರಿಶೀಲನೆ ನಡೆಸಿದಾಗ ಅನುಮಾನದ ಹುತ್ತ ದಟ್ಟವಾಗಿ ಕಾಣಿಸಿತ್ತು.ಜೊತೆಗೆ ಉಪ್ಪಾರ ಜನಾಂಗದ ಮುಖಂಡರು ಕೊಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ನಂಜನಗೂಡು ಗ್ರಾಮಾಂತರ ಠಾಣೆಗೆ ಮುತ್ತಿಗೆ ಹಾಕಿದ್ದರು.ಪ್ರಕರಣ ದಾಖಲಿಸಿಕೊಂಡು ತೆನಿಖೆ ಆರಂಭಿಸಿದ ಪೊಲೀಸರಿಗೆ ಕೊಲೆ ಎಂದು ಖಚಿತವಾಗಿ ಗೋವರ್ಧನ್ ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಸತ್ಯತೆ ಹೊರಬಿದ್ದಿತು.ಕೂಡಲೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಜಾಹಿರ್,ಮಣಿಕಙಠ ಹಾಗೂ ಮಹೇಂದ್ರ ಸೇರಿದಂತೆ ನಾಲ್ವರನ್ನ ಬಂಧಿಸಿದ್ದರು.ಇದೀಗ 5 ನೇ ಆರೋಪಿ ಧನರಾಜ್ ಭೋಲಾನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ…

Spread the love

Related post

ಪ್ರಿಯತಮೆಯನ್ನ ಕೊಲೆ ಮಾಡಿ ಚಿನ್ನಾಭರಣ ದೋಚಿ ತನ್ನ ಜಮೀನಿನಲ್ಲಿ ಶವ ಹೂತಿಟ್ಟ ಐನಾತಿ…ಪ್ರಿಯಕರ ಅಂದರ್…

ಪ್ರಿಯತಮೆಯನ್ನ ಕೊಲೆ ಮಾಡಿ ಚಿನ್ನಾಭರಣ ದೋಚಿ ತನ್ನ ಜಮೀನಿನಲ್ಲಿ ಶವ ಹೂತಿಟ್ಟ…

ಮಂಡ್ಯ,ಜೂ24,Tv10 ಕನ್ನಡ ವಿವಾಹಿತ ಮಹಿಳೆಯನ್ನ ಇನ್ಸ್ಟಾಗ್ರಾಂ ನಲ್ಲಿ ಪರಿಚಯಿಸಿಕೊಂಡು ಪ್ರೀತಿಸಿ ಚೆಕ್ಕಂದವಾಗಿ ವಿಹರಿಸಿ ಹತ್ತೇ ದಿನಗಳಲ್ಲಿ ಕೊಲೈಗೈದು ಶವವನ್ನ ತನ್ನ ಜಮೀನಿನಲ್ಲೇ ಬಚ್ಚಿಟ್ಟ ಪ್ರಿಯಕರ ಪೊಲೀಸರ ಅತಿಥಿಯಾದ ಘಟನೆ…
ಕಾವೇರಿ ನದಿ ಪಾತ್ರದ ಜನತೆಗೆ ಪ್ರವಾಹದ ಮುನ್ಸೂಚನೆ…ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ…

ಕಾವೇರಿ ನದಿ ಪಾತ್ರದ ಜನತೆಗೆ ಪ್ರವಾಹದ ಮುನ್ಸೂಚನೆ…ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ…

ಕೆ.ಆರ್.ಎಸ್,ಜೂ23,Tv10 ಕನ್ನಡ ಕೊಡಗಿನಲ್ಲಿ ಮಳೆ ಪ್ರಮಾಣ ಹೆಚ್ಚಾದ ಹಿನ್ನಲೆ ಕೆ ಆರ್ ಎಸ್ ಗೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದ ಈ ಹಿನ್ನಲೆ ಹೊರಹರಿವಿನ ಪ್ರಮಾಣವನ್ನ ಹೆಚ್ಚಿಸಲಾಗಿದೆ.5000 ಕ್ಯೂಸೆಕ್ಸ್ ನಿಂದ…
ನಿರ್ಲಕ್ಷ್ಯಕ್ಕೆ ಒಳಗಾದ ಕಳಲೆ ಲಕ್ಷ್ಮಿಕಾಂತ ದೇವಸ್ಥಾನ…ಶತಮಾನಗಳ ಇತಿಹಾಸವಿರುವ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…

ನಿರ್ಲಕ್ಷ್ಯಕ್ಕೆ ಒಳಗಾದ ಕಳಲೆ ಲಕ್ಷ್ಮಿಕಾಂತ ದೇವಸ್ಥಾನ…ಶತಮಾನಗಳ ಇತಿಹಾಸವಿರುವ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…

ನಂಜನಗೂಡು,ಜೂ23,Tv10 ಕನ್ನಡ ಶಿಥಿಲಗೊಂಡ ದೇವಾಲಯದ ಕಟ್ಟಡ,ಗೋಪುರಗಳ ಮೇಲೆ ಬೆಳೆದು ನಿಂತ ಸಸ್ಯಗಳು,ಬಿರುಕು ಬಿಟ್ಟ ಕಟ್ಟಡ,ಭಿನ್ನವಾಗಿರುವ ದೇವರ ಮೂರ್ತಿಗಳು,ಮುರಿದು ಮೂಲೆ ಸೇರಿರುವ ರಥದ ಚಕ್ರಗಳು,ಮಣ್ಣು ಹಿಡಿದ ರಥ ಎಳೆಯವ ಹಗ್ಗಗಳು,ಭಕ್ತರಿಗೆ…

Leave a Reply

Your email address will not be published. Required fields are marked *