ಸರಸ್ವತಿಪುರಂ ಠಾಣೆ ಪೊಲೀಸರ ಕಾರ್ಯಾಚರಣೆ…ಖತರ್ನಾಕ್ ಕಳ್ಳನ ಬಂಧನ…5.13 ಲಕ್ಷ ಮೌಲ್ಯದ ಚಿನ್ನಾಭರಣ,ದ್ವಿಚಕ್ರ ವಾಹನ ವಶ…

ಸರಸ್ವತಿಪುರಂ ಠಾಣೆ ಪೊಲೀಸರ ಕಾರ್ಯಾಚರಣೆ…ಖತರ್ನಾಕ್ ಕಳ್ಳನ ಬಂಧನ…5.13 ಲಕ್ಷ ಮೌಲ್ಯದ ಚಿನ್ನಾಭರಣ,ದ್ವಿಚಕ್ರ ವಾಹನ ವಶ…

ಮೈಸೂರು,ನ27,Tv10 ಕನ್ನಡ

ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತು ಪರಾರಿಯಾದ ಖತರ್ನಾಕ್ ಕಳ್ಳನನ್ನ ಬಂಧಿಸುವಲ್ಲಿ ಸರಸ್ವತಿಪುರಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 5 ದ್ವಿಚಕ್ರ ವಾಹನ ಸೇರಿದಂತೆ 5,13,200/- ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಖತರ್ನಾಕ್ ಕಳ್ಳನ ವಿರುದ್ದ ಈಗಾಗಲೇ ವಿವಿದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 40 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.ಚಂದ್ರು.ಆ.ಕಬ್ಬಾಳ್ (35) ಬಂಧಿತ ಆರೋಪಿ.

ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ನಗರದಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನ ಇಬ್ಬರು ಖದೀಮರು ಕಿತ್ತು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಸರಸ್ವತಿಪುರಂ ಠಾಣೆ ಪೊಲೀಸರು ಖದೀಮರ ಬಂಧನಕ್ಕೆ ಜಾಲ ಬೀಸಿದ್ದರು.ಖಚಿತ ಮಾಹಿತಿ ಆಧರಿಸಿ ಬೋಗಾದಿ ರಿಂಗ್ ರಸ್ತೆ ಬಳಿ ಆರೋಪಿ ಚಂದ್ರು.ಆ.ಕಬ್ಬಾಳ್ ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತನಿಂದ 2.62 ಲಕ್ಷ ಮೌಲ್ಯದ 43 ಗ್ರಾಂ ಚಿನ್ನದ ಸರ ಹಾಗೂ 2.51 ಲಕ್ಷ ಮೌಲ್ಯದ 4 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ.

ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ಮಾರ್ಗದರ್ಶನದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಗಜೇಂದ್ರಪ್ರಸಾದ್ ಉಸ್ತುವಾರಿಯಲ್ಲಿ ಸರಸ್ವತಿಪುರಂ ಠಾಣೆ ಇನ್ಸ್ಪೆಕ್ಟರ್ ಪುರುಷೋತ್ತಮ್ ,ಪಿಎಸ್ಸೈ ರವರಾದ ಲತಾ ಹಾಗೂ ಮಹೇಂದ್ರ ಟಿ ಎಸ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮೋಹನ್ ಕುಮಾರ್,ಕುಮಾರ್,ಸುಧೀಪ್ ಕುಮಾರ್,ರಕ್ಷಿತ್ ಕುಮಾರ್,ಚಂದ್ರಶೇಖರ್,ರಾಜೇಶ್,ಕುಮಾರ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಹಾಗೂ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಕಾರ್ಯಾಚರಣೆಯನ್ನ ಪ್ರಶಂಸಿಸಿದ್ದಾರೆ…

Spread the love

Related post

ಪತ್ರ ಬರಹಗಾರರ ಪ್ರತಿಭಟನೆ..ಪ್ರತ್ಯೇಕ ಲಾಗಿನ್‌ ನೀಡಿ ಸಮಸ್ಯೆ ಬಗೆಹರಿಸಲು ಒತ್ತಾಯ…

ಪತ್ರ ಬರಹಗಾರರ ಪ್ರತಿಭಟನೆ..ಪ್ರತ್ಯೇಕ ಲಾಗಿನ್‌ ನೀಡಿ ಸಮಸ್ಯೆ ಬಗೆಹರಿಸಲು ಒತ್ತಾಯ…

ಪತ್ರ ಬರಹಗಾರರ ಪ್ರತಿಭಟನೆ..ಪ್ರತ್ಯೇಕ ಲಾಗಿನ್‌ ನೀಡಿ ಸಮಸ್ಯೆ ಬಗೆಹರಿಸಲು ಒತ್ತಾಯ… ಮೈಸೂರು,ಡಿ12,Tv10 ಕನ್ನಡ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟದ…
ಮೈಸೂರಿನಲ್ಲಿ ಹೈಡ್ರೋ ಗಾಂಜಾ ವಶ…ಇಬ್ಬರು ಆರೋಪಿಗಳ ಸೆರೆ…17 ಲಕ್ಷ ಮೌಲ್ಯದ ಪದಾರ್ಥ ವಶ…

ಮೈಸೂರಿನಲ್ಲಿ ಹೈಡ್ರೋ ಗಾಂಜಾ ವಶ…ಇಬ್ಬರು ಆರೋಪಿಗಳ ಸೆರೆ…17 ಲಕ್ಷ ಮೌಲ್ಯದ ಪದಾರ್ಥ…

ಮೈಸೂರಿನಲ್ಲಿ ಹೈಡ್ರೋ ಗಾಂಜಾ ವಶ…ಇಬ್ಬರು ಆರೋಪಿಗಳ ಸೆರೆ…17 ಲಕ್ಷ ಮೌಲ್ಯದ ಪದಾರ್ಥ ವಶ… ಮೈಸೂರು,ಡಿ12,Tv10 ಕನ್ನಡ ಮೈಸೂರು ನಗರ ಸಿಸಿಬಿ ತಂಡವು ನಾಯ್ಡು ನಗರ, ನರಸಿಂಹರಾಜ ಪೊಲೀಸ್ ಠಾಣೆ…
ನಕಲಿ ದಾಖಲೆ ಸೃಷ್ಟಿಸಿ ICICI ಬ್ಯಾಂಕ್ ಗೆ 2.33 ಕೋಟಿ ವಂಚನೆ…ಮೂರು ಪ್ರತ್ಯೇಕ ಪ್ರಕರಣಗಳು ದಾಖಲು…ಇಬ್ಬರು ಮಧ್ಯವರ್ತಿ ಸೇರಿದಂತೆ 8 ಮಂದಿ ವಿರುದ್ದ FIR

ನಕಲಿ ದಾಖಲೆ ಸೃಷ್ಟಿಸಿ ICICI ಬ್ಯಾಂಕ್ ಗೆ 2.33 ಕೋಟಿ ವಂಚನೆ…ಮೂರು…

ನಕಲಿ ದಾಖಲೆ ಸೃಷ್ಟಿಸಿ ICICI ಬ್ಯಾಂಕ್ ಗೆ 2.33 ಕೋಟಿ ವಂಚನೆ…ಮೂರು ಪ್ರತ್ಯೇಕ ಪ್ರಕರಣಗಳು ದಾಖಲು…ಇಬ್ಬರು ಮಧ್ಯವರ್ತಿ ಸೇರಿದಂತೆ 8 ಮಂದಿ ವಿರುದ್ದ FIR ಮೈಸೂರು,ಡಿ11,Tv10 ಕನ್ನಡ ನಕಲಿ…

Leave a Reply

Your email address will not be published. Required fields are marked *