ಜಮೀನು ಖರೀದಿಸಿ ನಿವೇಶನ ಅಭಿವೃದ್ದಿಪಡಿಸಿಕೊಡುವುದಾಗಿ ನಂಬಿಸಿ ಕೊ.ಆಪರೇಟಿವ್ ಸೊಸೈಟಿಗೆ ದ್ರೋಹ…ಮೂವರ ವಿರುದ್ದ FIR ದಾಖಲು…

ಜಮೀನು ಖರೀದಿಸಿ ನಿವೇಶನ ಅಭಿವೃದ್ದಿಪಡಿಸಿಕೊಡುವುದಾಗಿ ನಂಬಿಸಿ ಕೊ.ಆಪರೇಟಿವ್ ಸೊಸೈಟಿಗೆ ದ್ರೋಹ…ಮೂವರ ವಿರುದ್ದ FIR ದಾಖಲು…

ಮೈಸೂರು,ಡಿ3,Tv10 ಕನ್ನಡ

ಸಂಘದ ಸದಸ್ಯರ ಅನುಕೂಲಕ್ಕಾಗಿ ಜಮೀನು ಖರೀದಿಸಿ ವಸತಿ ನಿವೇಶನಗಳನ್ನ ಅಭಿವೃದ್ದಿ ಕೊಡಿಸುವುದಾಗಿ ನಂಬಿಸಿ ಕೋ.ಆಪರೇಟಿವ್ ಸೊಸೈಟಿ ಒಂದಕ್ಕೆ ಕೋಟ್ಯಾಂತರ ರೂ ವಂಚಿಸಿರುವ ಪ್ರಕರಣ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಈ ಸಂಭಂಧ ಸರಸ್ವತಿಪುರಂ ನಲ್ಲಿರುವ ಸ್ಕಿಲ್ ಟೆಕ್ ಇಂಜಿನಿಯರ್ಸ್ ಸಂಸ್ಥೆಯ ಮೂವರು ನಿರ್ದೇಶಕರ ವಿರುದ್ದ ವಂಚನೆಗೆ ಒಳಗಾದ ಶ್ರೀ ರಾಮಕೃಷ್ಣ ಹೌಸ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಮುಖ್ಯಸ್ಥರು ಪ್ರಕರಣ ದಾಖಲಿಸಿದ್ದಾರೆ.

2006 ರಲ್ಲಿ ಶ್ರೀ ರಾಮಕೃಷ್ಣ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿಯವರು ತಮ್ಮ ಸದಸ್ಯರಿಗಾಗಿ ನಿವೇಶನ ನಿರ್ಮಿಸಲು ಸ್ಕಿಲ್ ಟೆಕ್ ಇಂಜಿನಿಯರ್ಸ್ ನ ನಿರ್ದೇಶಕರಾದ ಶಿವಶಂಕರ್,ಅರುಣ್ ಕುಮಾರ್,ವೀರೇಶ್ ರವರ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.ಹಂಚ್ಯಾ ಗ್ರಾಮದ ಸರ್ವೆ ನಂ.45 ರಲ್ಲಿ 30 ಎಕ್ರೆ ಜಮೀನು ನೀಡುವುದಾಗಿ ಅಗ್ರೀಮೆಂಟ್ ಮಾಡಿಕೊಂಡು 181 ನಿವೇಶನಗಳನ್ನ ಅಭಿವೃದ್ದಿ ಮಾಡಿಕೊಂಡುವುದಾಗಿ ಒಪ್ಪಿದ್ದಾರೆ.ಈ ಸಂಭಂಧ ಸ್ಕಿಲ್ ಟೆಕ್ ಇಂಜಿನಿಯರ್ ಸಂಸ್ಥೆಗೆ 14,67,04,434/- ರೂ ಗಳನ್ನ ಪಾವತಿ ಮಾಡಲಾಗಿದೆ.ಒಪ್ಪಂದದಂತೆ 30 ಎಕ್ರೆ ಜಮೀನಿಗೆ ಬದಲಾಗಿ ಕೇವಲ 12 ಎಕ್ರೆ ಜಮೀನು ಖರೀದಿಸಿ 90 ಸೈಟ್ ಗಳನ್ನ ನೀಡಿದ್ದಾರೆ.ಈ ವೇಳೆ ಸದಸ್ಯರಿಂದ ಪ್ರತಿ ಚದರ ವಿಸ್ತೀರ್ಣಕ್ಕೆ ರೂ 95/- ರಂತೆ ಹೆಚ್ಚುವರಿಯಾಗಿ 2,63,47,614/- ರೂ ಪಡೆದಿದ್ದಾರೆ.ಉಳಿದ 90 ನಿವೇಶನಗಳಿಗಾಗಿ ಒತ್ತಡ ಹೇರಿದಾಗ ಸಮಯಾವಕಾಶ ಪಡೆದು ನಂತರ ನಿವೇಶನ ನೀಡುವಲ್ಲಿ ವಿಫಲರಾಗಿದ್ದಾರೆ.ಇದೇ ವೇಳೆ ಕೋ.ಆಪರೇಟಿವ್ ಸೊಸೈಟಿಗೆ ಮರೆಮಾಚಿ ಹಂಚ್ಯಾ ಗ್ರಾಮದ ಸರ್ವೆ ನಂ.126 ರಲ್ಲಿ 6 ಎಕ್ರೆ 28 ಗುಂಟೆ ಜಮೀನು ಖರೀದಿಸಿ ನಿವೇಶನಗಳನ್ನಾಗಿ ಪರಿವರ್ತಿಸಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆಂದು ಆರೋಪಿಸಿದ್ದಾರೆ.ಒಪ್ಪಂದದ ಪ್ರಕಾರ 181 ನಿವೇಶನಗಳನ್ನ ನೀಡದೆ ಕೇವಲ 90 ನಿವೇಶನಗಳನ್ನ ನೀಡಿ ಉಳಿದ 90 ನಿವೇಶನಗಳನ್ನ ನೀಡಿಲ್ಲ.ಹಾಗೂ ಸದಸ್ಯರಿಂದ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಿದ್ದಾರೆ.ಉಳಿಕೆ 90 ನಿವೇಶನಗಳನ್ನ ನೀಡಲು ವಿಫಲವಾಗಿರುವ ಸ್ಕಿಲ್ ಟೆಕ್ ಇಂಜಿನಿಯರ್ಸ್ ಸಂಸ್ಥೆಯ ಮೂವರು ನಿರ್ದೇಶಕರ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *