ಕೊಟ್ಟಿದ್ದು 4 ಲಕ್ಷ…9 ತಿಂಗಳಲ್ಲಿ ಬಡ್ಡಿ ಸಮೇತ ಪೀಕಿದ್ದು10 ಲಕ್ಷ…ಸಾಲವೇ ತೀರಿಲ್ಲವಂತೆ…ಮೈಸೂರಿನಲ್ಲೊಬ್ಬಳು ಬಡ್ಡಿ ಬಂಗಾರಮ್ಮ…

ಕೊಟ್ಟಿದ್ದು 4 ಲಕ್ಷ…9 ತಿಂಗಳಲ್ಲಿ ಬಡ್ಡಿ ಸಮೇತ ಪೀಕಿದ್ದು10 ಲಕ್ಷ…ಸಾಲವೇ ತೀರಿಲ್ಲವಂತೆ…ಮೈಸೂರಿನಲ್ಲೊಬ್ಬಳು ಬಡ್ಡಿ ಬಂಗಾರಮ್ಮ…

ಮೈಸೂರು,ಡಿ12,Tv10 ಕನ್ನಡ

ಸಹಾಯ ಮಾಡುವ ನೆಪದಲ್ಲಿ ಮಹಿಳಾ ಟೈಲರ್ ಒಬ್ಬರಿಗೆ ಹಂತಹಂತವಾಗಿ 4 ಲಕ್ಷ ಸಾಲ ನೀಡಿ ಕೇವಲ 9 ತಿಂಗಳಿಗೆ ಬಡ್ಡಿ,ಚಕ್ರಬಡ್ಡಿ ಸೇರಿಸಿ 10.90 ಲಕ್ಷ ಪೀಕಿದ್ದಲ್ಲದೆ ಮತ್ತೆ ಲಕ್ಷಾಂತರ ಹಣ ಕೊಡಬೇಕೆಂದು ಇಬ್ಬರು ಮಹಿಳೆಯರು ಟಾರ್ಚರ್ ನೀಡುತ್ತಿರುವ ಪ್ರಕರಣವೊಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಹೂಟಗಳ್ಳಿ ನಿವಾಸಿ ಪವಿತ್ರಾ ಎಂಬಾಕೆಗೆ ಅನುಷಾ ಹಾಗೂ ರೇಖಾ ಎಂಬುವರು ಹಣಕ್ಕಾಗಿ ಟಾರ್ಚರ್ ನೀಡುತ್ತಿದ್ದಾರೆ.ಬಡ್ಡಿ,ಚಕ್ರಬಡ್ಡಿ ವಸೂಲಿ ಮಾಡಿ ಮತ್ತಷ್ಟು ಹಣಕ್ಕೆ ಒತ್ತಡ ಹೇರುತ್ತಿರುವ ಆಧುನಿಕ ಬಡ್ಡಿಬಂಗಾರಮ್ಮರ ವಿರುದ್ದ ಪ್ರಕರಣ ದಾಖಲಾಗಿದೆ.

ಹೂಟಗಳ್ಳಿಯಲ್ಲಿ ಜೀವನೋಪಾಯಕ್ಕಾಗಿ ಪವಿತ್ರಾ ಟೈಲರ್ ಕೆಲಸ ಮಾಡಿಕೊಂಡಿದ್ದಾರೆ.ವೃತ್ತಿಗೆ ಸಹಾಯ ಮಾಡುವುದಾಗಿ ನಂಬಿಸಿದ ಅನುಷಾ ಮತ್ತು ರೇಖಾ ಬಡ್ಡಿಗೆ ಸಾಲ ನೀಡಿದ್ದಾರೆ.15 ದಿನಕ್ಕೆ 25 % ಬಡ್ಡಿ ವಿಧಿಸಿದ್ದಾರೆ.ಅಮಾಯಕಿ ಪವಿತ್ರಾ ಕೇಳಿದಷ್ಟು ಹಣ ಕೊಡುತ್ತಾ ಬಂದಿದ್ದಾರೆ.2022 ರಿಂದ ಮಾರ್ಚ್ 24 ರವರೆಗೆ 4.20 ಲಕ್ಷ ಹಣ ಸಾಲವಾಗಿ ಹಂತಹಂತವಾಗಿ ಕೊಟ್ಟಿದ್ದಾರೆ.ಬಡ್ಡಿ ಚಕ್ರ ಬಡ್ಡಿ ಸೇರಿಸಿ ಈ ವರೆಗೆ ಪವಿತ್ರಾ 10.96 ಲಕ್ಷ ಪಾವತಿಸಿದ್ದಾರೆ.ಹೀಗಿದ್ದರೂ ಸಾಲ ತೀರಿಲ್ಲವೆಂದು ಪವಿತ್ರಾಗೆ ಟಾರ್ಚರ್ ನೀಡುತ್ತಿದ್ದಾರೆ.ಅನುಷಾ ಹಾಗೂ ರೇಖಾ ಜೊತೆಗೆ ನಂದೀಷ್ ಎಂಬಾತ ಸೇರಿಕೊಂಡು ಹಣಕ್ಕಾಗಿ ಪೀಡಿಸಿದ್ದಾರೆ.ಅಕ್ಟೋಬರ್ ತಿಂಗಳಿನಲ್ಲೂ ಸಹ ಸಾವಿರಾರು ರೂಗಳನ್ನ ಪಾವತಿಸಿರುವ ಪವಿತ್ರಾಗೆ ಬಡ್ಡಿ ಬಂಗಾರಮ್ಮರ ಟಾರ್ಚರ್ ಹೆಚ್ಚಾಗಿದೆ.ಹಣ ಹಿಂದಿರುಗಿಸದಿದ್ದಲ್ಲಿ ಮಾನ ಮರ್ಯಾದೆ ತೆಗೆಯುವುದಾಗಿ ಬೆದರಿಸುತ್ತಿದ್ದಾರೆ.ಅನುಷಾ,ರೇಖಾ ಹಾಗೂ ನಂದೀಶ್ ರವರ ಕಿರುಕುಳಕ್ಕೆ ಬೇಸತ್ತಿರುವ ಪವಿತ್ರಾ ಇದೀಗ ವಿಜಯನಗರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ…

Spread the love

Related post

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ… ಚಾಮರಾಜನಗರ,ಜು28,Tv10 ಕನ್ನಡ ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.ಕೊಡಗು ಜಿಲ್ಲೆ…
ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…

Leave a Reply

Your email address will not be published. Required fields are marked *