ಗಾಂಜಾ ಸೇವನೆ ಮಾಡ್ತೀಯ ಎಂದು ಬೆದರಿಸಿ 10 ಸಾವಿರ ಕಿತ್ತ ಖದೀಮರು…ನಾಲ್ವರ ವಿರುದ್ದ FIR ದಾಖಲು…

ಗಾಂಜಾ ಸೇವನೆ ಮಾಡ್ತೀಯ ಎಂದು ಬೆದರಿಸಿ 10 ಸಾವಿರ ಕಿತ್ತ ಖದೀಮರು…ನಾಲ್ವರ ವಿರುದ್ದ FIR ದಾಖಲು…

ಮೈಸೂರು,ಜ20,Tv10 ಕನ್ನಡ

ಗಾಂಜಾ ಸೇವನೆ ಮಾಡುತ್ತಿದ್ದೀಯ ಪೊಲೀಸರನ್ನ ಕರೆಸ್ತೀನಿ,ಮನೆಯವರನ್ನ ಕರೆಸ್ತೀನಿ ಎಂದು ಬೆದರಿಕೆ ಹಾಕಿದ ನಾಲ್ವರು ಯುವಕರ ತಂಡ ಖಾಸಗಿ ಕಂಪನಿ ಉದ್ಯೋಗಿಯಿಂದ 10 ಸಾವಿರ ಪೀಕಿದ ಘಟನೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕನಗರದಲ್ಲಿ ನಡೆದಿದೆ.ಪಡುವಾರಹಳ್ಳಿ ನಿವಾಸಿಗಳಾದ ವರುಣ್,ಒಂಟೆ ಹಾಗೂ ಇನ್ನಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ.ಖಾಸಗಿ ಕಂಪನಿಯೊಂದರ ಟೆಕ್ನಿಕಲ್ ಅಡ್ವೈಸರ್ ಆಗಿರುವ ಚಿರಾಗ್ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿನಾಯಕನಗರದಲ್ಲಿ ಬಾಡಿಗೆ ಪಡೆದಿದ್ದ ಕೊಠಡಿಯಲ್ಲಿ ಒಂಟಿಯಾಗಿ ಕುಳಿತಿದ್ದ ವೇಳೆ ವರುಣ್,ಒಂಟೆ ಹಾಗೂ ಇನ್ನಿಬ್ಬರು ಅಕ್ರಮವಾಗಿ ನುಗ್ಗಿದ್ದಾರೆ.ನೀನು ಗಾಂಜಾ ಸೇವನೆ ಮಾಡ್ತಿದ್ದೀಯ ಪೊಲೀಸರನ್ನ ಕರೆಸ್ತೀನಿ,ನಿಮ್ಮ ಮನೆಯವರನ್ನ ಕರೆಸ್ತೀನಿ ಎಂದು ಬೆದರಿಕೆ ಹಾಕಿದ್ದಾರೆ.ಒಂದು ವಾರದ ಹಿಂದೆ ಕೊಲೆ ಮಾಡಿ ಬಂದಿದ್ದೀನಿ ನನಗೆ ತೊಂದರೆ ಮಾಡಿದ್ರೆ ನನ್ನನ್ನ ಕೊಲೆ ಮಾಡಲು ಬಂದಿದ್ದೀಯ ಎಂದು ಹೇಳ್ತೀನಿ ಎಂದು ಹೆದರಿಸಿದ್ದಾರೆ.ನಂತರ ಬಲವಂತವಾಗಿ ಕೊಠಡಿಯಿಂದ ಹೊರಕ್ಕೆ ಕರೆದೊಯ್ದು ಮಹಾರಾಣಿ ಕಾಲೇಜಿನ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ಕರೆದೊಯ್ದು ಸ್ಕ್ಯಾನ್ನಿಂಗ್ ಮೂಲಕ 10 ಸಾವಿರ ಗೂಗಲ್ ಪೇ ಡ್ರಾ ಮಾಡಿಸಿ ನಾಪತ್ತೆಯಾಗಿದ್ದಾರೆ.ಮತ್ತೊಮ್ಮೆ ಕೊಠಡಿಗೆ ಬಂದು ಇದೇ ರೀತಿ ಧಂಕಿ ಹಾಕಿದ್ದಾರೆ.ಆಗ ಚಿರಾಗ್ ರವರ ಸ್ನೇಹಿತರಾದ ಪೂಣಚ್ಚ,ಪೌಲೋಸ್ ಎಂಬುವರನ್ನ ಕರೆಸಿದಾಗ ವರುಣ್ ಹಾಗೂ ತಂಡ ಪರಾರಿಯಾಗಿದೆ.ಅಕ್ರಮವಾಗಿ ಕೊಠಡಿಗೆ ನುಗ್ಗಿ ಹಣ ಕಿತ್ತ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಚಿರಾಗ್ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *