ಗಾಂಜಾ ಸೇವನೆ ಮಾಡ್ತೀಯ ಎಂದು ಬೆದರಿಸಿ 10 ಸಾವಿರ ಕಿತ್ತ ಖದೀಮರು…ನಾಲ್ವರ ವಿರುದ್ದ FIR ದಾಖಲು…

ಗಾಂಜಾ ಸೇವನೆ ಮಾಡ್ತೀಯ ಎಂದು ಬೆದರಿಸಿ 10 ಸಾವಿರ ಕಿತ್ತ ಖದೀಮರು…ನಾಲ್ವರ ವಿರುದ್ದ FIR ದಾಖಲು…

ಮೈಸೂರು,ಜ20,Tv10 ಕನ್ನಡ

ಗಾಂಜಾ ಸೇವನೆ ಮಾಡುತ್ತಿದ್ದೀಯ ಪೊಲೀಸರನ್ನ ಕರೆಸ್ತೀನಿ,ಮನೆಯವರನ್ನ ಕರೆಸ್ತೀನಿ ಎಂದು ಬೆದರಿಕೆ ಹಾಕಿದ ನಾಲ್ವರು ಯುವಕರ ತಂಡ ಖಾಸಗಿ ಕಂಪನಿ ಉದ್ಯೋಗಿಯಿಂದ 10 ಸಾವಿರ ಪೀಕಿದ ಘಟನೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕನಗರದಲ್ಲಿ ನಡೆದಿದೆ.ಪಡುವಾರಹಳ್ಳಿ ನಿವಾಸಿಗಳಾದ ವರುಣ್,ಒಂಟೆ ಹಾಗೂ ಇನ್ನಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ.ಖಾಸಗಿ ಕಂಪನಿಯೊಂದರ ಟೆಕ್ನಿಕಲ್ ಅಡ್ವೈಸರ್ ಆಗಿರುವ ಚಿರಾಗ್ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿನಾಯಕನಗರದಲ್ಲಿ ಬಾಡಿಗೆ ಪಡೆದಿದ್ದ ಕೊಠಡಿಯಲ್ಲಿ ಒಂಟಿಯಾಗಿ ಕುಳಿತಿದ್ದ ವೇಳೆ ವರುಣ್,ಒಂಟೆ ಹಾಗೂ ಇನ್ನಿಬ್ಬರು ಅಕ್ರಮವಾಗಿ ನುಗ್ಗಿದ್ದಾರೆ.ನೀನು ಗಾಂಜಾ ಸೇವನೆ ಮಾಡ್ತಿದ್ದೀಯ ಪೊಲೀಸರನ್ನ ಕರೆಸ್ತೀನಿ,ನಿಮ್ಮ ಮನೆಯವರನ್ನ ಕರೆಸ್ತೀನಿ ಎಂದು ಬೆದರಿಕೆ ಹಾಕಿದ್ದಾರೆ.ಒಂದು ವಾರದ ಹಿಂದೆ ಕೊಲೆ ಮಾಡಿ ಬಂದಿದ್ದೀನಿ ನನಗೆ ತೊಂದರೆ ಮಾಡಿದ್ರೆ ನನ್ನನ್ನ ಕೊಲೆ ಮಾಡಲು ಬಂದಿದ್ದೀಯ ಎಂದು ಹೇಳ್ತೀನಿ ಎಂದು ಹೆದರಿಸಿದ್ದಾರೆ.ನಂತರ ಬಲವಂತವಾಗಿ ಕೊಠಡಿಯಿಂದ ಹೊರಕ್ಕೆ ಕರೆದೊಯ್ದು ಮಹಾರಾಣಿ ಕಾಲೇಜಿನ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ಕರೆದೊಯ್ದು ಸ್ಕ್ಯಾನ್ನಿಂಗ್ ಮೂಲಕ 10 ಸಾವಿರ ಗೂಗಲ್ ಪೇ ಡ್ರಾ ಮಾಡಿಸಿ ನಾಪತ್ತೆಯಾಗಿದ್ದಾರೆ.ಮತ್ತೊಮ್ಮೆ ಕೊಠಡಿಗೆ ಬಂದು ಇದೇ ರೀತಿ ಧಂಕಿ ಹಾಕಿದ್ದಾರೆ.ಆಗ ಚಿರಾಗ್ ರವರ ಸ್ನೇಹಿತರಾದ ಪೂಣಚ್ಚ,ಪೌಲೋಸ್ ಎಂಬುವರನ್ನ ಕರೆಸಿದಾಗ ವರುಣ್ ಹಾಗೂ ತಂಡ ಪರಾರಿಯಾಗಿದೆ.ಅಕ್ರಮವಾಗಿ ಕೊಠಡಿಗೆ ನುಗ್ಗಿ ಹಣ ಕಿತ್ತ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಚಿರಾಗ್ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ…

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್ ಶ್ರೀರಂಗಪಟ್ಟಣ,ಅ25,Tv10 ಕನ್ನಡ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸರ್ವೇ ನಂ. 44ರಲ್ಲಿ 2.13…
ಸಂಸದ ಯದುವೀರ್ ತಾತ ವಿಧಿವಶ…ಸಂಸದರ ಅಧಿಕೃತ ಕಾರ್ಯಕ್ರಮ ಮುಂದೂಡಿಕೆ…

ಸಂಸದ ಯದುವೀರ್ ತಾತ ವಿಧಿವಶ…ಸಂಸದರ ಅಧಿಕೃತ ಕಾರ್ಯಕ್ರಮ ಮುಂದೂಡಿಕೆ…

ಮೈಸೂರು,ಅ23,Tv10 ಕನ್ನಡ ಸಂಸದರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ತಾತ ಮದನ್ ಗೋಪಾಲ್ ರಾಜ್ ಅರಸ್ ವಿಧಿ ವಶರಾಗಿದ್ದಾರೆ.ಈ ಹಿನ್ನಲೆಯದುವೀರ್ ಅಧಿಕೃತ ಕಾರ್ಯಕ್ರಮಗಳು ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.93 ವರ್ಷ…
ಹೃದಯಾಘಾತಕ್ಕೆ ರೈತ ಬಲಿ…ಜಮೀನು ಉಳುಮೆ ಮಾಡುವ ವೇಳೆ ಘಟನೆ…

ಹೃದಯಾಘಾತಕ್ಕೆ ರೈತ ಬಲಿ…ಜಮೀನು ಉಳುಮೆ ಮಾಡುವ ವೇಳೆ ಘಟನೆ…

ಹೃದಯಾಘಾತಕ್ಕೆ ರೈತ ಬಲಿ…ಜಮೀನು ಉಳುಮೆ ಮಾಡುವ ವೇಳೆ ಘಟನೆ… ಮಂಡ್ಯ,ಅ23,Tv10 ಕನ್ನಡ ಜಮೀನಲ್ಲಿ ಉಳುಮೆ ಮಾಡುವ ವೇಳೆ ಹೃದಯಾಘಾತದಿಂದ ರೈತ ಸಾವನ್ನಪ್ಪಿದ ಘಟನೆಮಂಡ್ಯ ತಾಲ್ಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ…

Leave a Reply

Your email address will not be published. Required fields are marked *