ಮುಡಾ ಸೈಟ್ ಕೊಡಿಸುವ ಆಮಿಷ…ಮಹಿಳೆಗೆ 30 ಲಕ್ಷ ಪಂಗನಾಮ…ಹಣ ಕೇಳಿದ್ದಕ್ಕೆ ಹಲ್ಲೆ…ಮೂವರ ವಿರುದ್ದ FIR ದಾಖಲು…

ಮುಡಾ ಸೈಟ್ ಕೊಡಿಸುವ ಆಮಿಷ…ಮಹಿಳೆಗೆ 30 ಲಕ್ಷ ಪಂಗನಾಮ…ಹಣ ಕೇಳಿದ್ದಕ್ಕೆ ಹಲ್ಲೆ…ಮೂವರ ವಿರುದ್ದ FIR ದಾಖಲು…

ಮೈಸೂರು,ಜ29,Tv10 ಕನ್ನಡ

ಮುಡಾದಲ್ಲಿ ನಿವೇಶನ ಕೊಡಿಸುವುದಾಗಿ ಮಹಿಳೆಗೆ ಆಮಿಷ ತೋರಿಸಿ 30 ಲಕ್ಷ ವಂಚಿಸಿದ ಪ್ರಕರಣ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹಣ ವಾಪಸ್ ಕೊಡುವಂತೆ ಕೇಳಿದ ಮಹಿಳೆ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ.ವಂಚನೆ ಮಾಡಿ ಹಲ್ಲೆ ನಡೆಸಿದ ಮೂವರ ವಿರುದ್ದ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಪ್ರಕರಣ ದಾಖಲಿಸಿದ್ದಾರೆ.

ಲಲಿತಾದ್ರಿಪುರ ಗ್ರಾಮದ ಮನಿಷಾ ಎಂಬ ಮಹಿಳೆ ವಂಚನೆಗೆ ಒಳಗಾದವರು.ಆಲನಹಳ್ಳಿ ಗ್ರಾಮದ ಪವಿತ್ರಾ ಹಾಗೂ ವಿಶ್ವನಾಥ್ ಶೆಟ್ಟಿ ಮತ್ತು ಪವಿತ್ರಾ ಪುತ್ರನ ವಿರುದ್ದ ಮನಿಷಾ ಪ್ರಕರಣ ದಾಖಲಿಸಿದ್ದಾರೆ.ಒಂದು ವರ್ಷದ ಹಿಂದೆ ಮುಡಾ ದಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ಪವಿತ್ರ ಹಾಗೂ ವಿಶ್ವನಾಥ ಶೆಟ್ಟಿ ಮನಿಷಾ ರಿಂದ 30 ಲಕ್ಷ ಪಡೆದಿದ್ದರು.ತಿಂಗಳುಗಳೆ ಉರುಳಿದರೂ ನಿವೇಶನವೂ ಇಲ್ಲ ಹಣವೂ ಇಲ್ಲ.ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿ ಮನಿಷಾ ರವರು ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಾರೆ.ಹಣ ನೀಡುವುದಾಗಿ ಮನೆ ಬಳಿ ಕರೆಸಿಕೊಂಡ ಪವಿತ್ರಾ ತನ್ನ ಮಗ ಹಾಗೂ ವಿಶ್ವನಾಥಶೆಟ್ಟಿ ಕುಮ್ಮಕ್ಕಿನಿಂದ ಮನಿಷಾ ಮೇಲೆ ಹಲ್ಲೆ ನಡೆಸಿದ್ದಾರೆ.ಈ ಸಂಭಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ FIR ದಾಖಲಾಗಿದೆ…

Spread the love

Related post

ನ್ಯಾಯಾಲಯದ ಆವರಣದಲ್ಲಿ ಕೊಲೆ ಬೆದರಿಕೆ ಆರೋಪ…ದಂಪತಿ ಸೇರಿದಂತೆ ಮೂವರ ವಿರುದ್ದ ಪ್ರಕರಣ ದಾಖಲು…

ನ್ಯಾಯಾಲಯದ ಆವರಣದಲ್ಲಿ ಕೊಲೆ ಬೆದರಿಕೆ ಆರೋಪ…ದಂಪತಿ ಸೇರಿದಂತೆ ಮೂವರ ವಿರುದ್ದ ಪ್ರಕರಣ…

ಮೈಸೂರು,ಮಾ12,Tv10 ಕನ್ನಡ ಹಣಕಾಸಿನ ವಿಚಾರದಲ್ಲಿ ಮೈಸೂರು ನ್ಯಾಯಾಲಯ ಆವರಣದಲ್ಲಿ ವ್ಯಕ್ತಿಯೋರ್ವರಿಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ನ್ಯಾಯಾಲಯದ ಆದೇಶದಂತೆ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.ಬೆಂಗಳೂರು…
ಹವಾ ಕ್ರಿಯೇಟ್ ಮಾಡಲು ಮಹಿಳೆ ಮೇಲೆ ಹಲ್ಲೆ…ಭಯದ ವಾತಾವರಣ ಮೂಡಿಸಿದ ಇಬ್ಬರು ಯುವಕರ ವಿರುದ್ದ ಪ್ರಕರಣ ದಾಖಲು…

ಹವಾ ಕ್ರಿಯೇಟ್ ಮಾಡಲು ಮಹಿಳೆ ಮೇಲೆ ಹಲ್ಲೆ…ಭಯದ ವಾತಾವರಣ ಮೂಡಿಸಿದ ಇಬ್ಬರು…

ಮೈಸೂರು,ಮಾ12,Tv10 ಕನ್ನಡ ನಮಗೆ ಇಲ್ಲಿ ಯಾರೂ ಗೌರವ ಕೊಡುತ್ತಿಲ್ಲ,ನಮ್ಮನ್ನ ಕಂಡರೆ ಏರಿಯಾದಲ್ಲಿ ಯಾರಿಗೂ ಭಯವಿಲ್ಲ,ಒಂದು ಹೆಣ ಉರುಳಿಸಿದ್ರೆ ನಾವು ಏನೆಂದು ಗೊತ್ತಾಗುತ್ತೆ ಎಂದು ಹೇಳಿಕೊಂಡು ಏರಿಯಾದಲ್ಲಿ ಹವಾ ಕ್ರಿಯೇಟ್…
ನ್ಯಾಯಾಲಯವನ್ನೇ ಯಾಮಾರಿಸಿದ ಭೂಪರು…ಒಂದೇ ಸ್ವತ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಬಳಸಿ ವಂಚನೆ…ಇಬ್ಬರ ವಿರುದ್ದ FIR ದಾಖಲು…

ನ್ಯಾಯಾಲಯವನ್ನೇ ಯಾಮಾರಿಸಿದ ಭೂಪರು…ಒಂದೇ ಸ್ವತ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಬಳಸಿ…

ಮೈಸೂರು,ಮಾ12,Tv10 ಕನ್ನಡ ಜಾಮೀನು ನೀಡುವ ಸಮಯದಲ್ಲಿ ಒಂದೇ ಸ್ವತ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಗಳನ್ನ ಸಲ್ಲಿಸಿ ನ್ಯಾಯಾಲಯವನ್ನೇ ಯಾಮಾರಿಸಿದ ಇಬ್ಬರ ವಿರುದ್ದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ…

Leave a Reply

Your email address will not be published. Required fields are marked *