ಸೆಲ್ಫೀ ಹುಚ್ಚಾಟ…ವಿದೇಶಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ…ಪೊಲೀಸರ ಅತಿಥಿಯಾದ ಆಟೋ ಡ್ರೈವರ್…

ಸೆಲ್ಫೀ ಹುಚ್ಚಾಟ…ವಿದೇಶಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ…ಪೊಲೀಸರ ಅತಿಥಿಯಾದ ಆಟೋ ಡ್ರೈವರ್…

ಮೈಸೂರು,ಫೆ1,Tv10 ಕನ್ನಡ

ವಿದೇಶಿ ಮಹಿಳೆಯ ಜೊತೆ ಸೆಲ್ಫೀ ತೆಗೆದುಕೊಳ್ಳುವ ಸಂಭಂಧ ಅಸಭ್ಯವಾಗಿ ವರ್ತಿಸಿದ ಊಬರ್ ಆಟೋ ಡ್ರೈವರ್ ಪೊಲೀಸರ ಅತಿಥಿಯಾದ ಘಟನೆ ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಊಬರ್ ಆಟೋ ಡ್ರೈವರ್ ರಂಜನ್ ವಿರುದ್ದ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಸ್ಪೇನ್ ದೇಶದ ಮಹಿಳೆ ಮರಿಯಾ ನೋಯಲ್ ಕಟಲಡೋ ರೋಡ್ರಿಗ್ಸ್ ರವರು ಪ್ರಕರಣ ದಾಖಲಿಸಿದ್ದಾರೆ.

ಮರಿಯಾ ರೋಡ್ರಿಗ್ಸ್ ರವರು ನವೆಂಬರ್ ತಿಂಗಳಲ್ಲಿ ಯೋಗ ಟ್ರೈನಿಂಗ್ ಪಡೆಯಲು ಸ್ಪೇನ್ ದೇಶದಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿದ್ದು ಇನ್ಫೋಸಿಸ್ ಬಳಿ ಮನೆ ಬಾಡಿಗೆ ಪಡೆದು ತಂಗಿದ್ದಾರೆ.ಜನವರಿ 26 ರಂದು ಗೋಕುಲಂ ನಿಂದ ತಮ್ಮ ಮನೆಗೆ ತೆರಳಲು ಮರಿಯಾ ರೋಡ್ರಿಗ್ಸ್ ರವರು ಊಬರ್ ಆಟೋ ಬುಕ್ ಮಾಡಿದ್ದಾರೆ.KA09 -B 6216. ನೊಂದಣಿ ಸಂಖ್ಯೆಯ ಆಟೋ ಚಾಲಕ ರಂಜನ್ ವಿದೇಶಿ ಮಹಿಳೆಯನ್ನ ತನ್ನ ಆಟೋದಲ್ಲಿ ಕರೆದೊಯ್ಯುವಾಗ ಇನ್ಫೋಸಿಸ್ ಬಳಿ ಸೆಲ್ಫೀ ತೆಗೆಯಲು ಪ್ರಯತ್ನಿಸಿದ್ದಾನೆ.ಈ ಪ್ರಯತ್ನವನ್ನ ಮರಿಯಾ ರೋಡ್ರಿಗ್ಸ್ ವಿರೋಧಿಸಿದ್ದಾರೆ.ನಂತರ ಆಟೋದಿಂದ ಇಳಿದ ರಂಜನ್ ವಿದೇಶಿ ಮಹಿಳೆಯನ್ನ ಹೊರಕ್ಕೆ ಎಳೆಯುವ ಪ್ರಯತ್ನ ಮಾಡಿ ನಂತರ ತಾನೇ ಆಕೆಯ ಪಕ್ಕದಲ್ಲಿ ಕುಳಿತು ಬುಜಗಳ ಮೇಲೆ ಕೈ ಹಾಕಿ ಬಕವಂತವಾಗಿ ಸೆಲ್ಪೀ ತೆಗೆದಿದ್ದಾನೆ.ಈ ವೇಳೆ ಆಕೆಗೆ ಮುತ್ತು ಕೊಡುವ ಪ್ರಯತ್ನ ಮಾಡಿ ವಿರೋಧಿಸುತ್ತಿದ್ದರೂ ಬಿಡದೆ ಬಕವಂತವಾಗಿ ಸೆಲ್ಪೀ ತೆಗೆದುಕೊಂಡಿದ್ದಾನೆ.ಇವೆಲ್ಲಾ ಬೆಳವಣಿಗೆ ನಂತರ ಫೋನ್ ಆಕೆಗೆ ಫೋನ್ ನಂಬರ್ ನೀಡಿ ಮಸಾಜ್ ಬೇಕಿದ್ದಲ್ಲಿ ಕರೆಯಿರಿ ಎಂದು ಅಸಭ್ಯವಾಗಿ ಮಾತನಾಡಿದ್ದಾನೆ.ರಂಜನ್ ಕಪಿಮುಷ್ಠಿಯಿಂದ ಬಿಡಿಸಿಕೊಂಡ ಮರಿಯಾ ರೋಡ್ರಿಗ್ಸ್ ಊಬರ್ ಕಂಪನಿಗೆ ದೂರು ನೀಡಿ ನಂತರ ಹೆಬ್ಬಾಳ್ ಠಾಣೆಗೆ ಬಂದು ರಂಜನ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ವಿದೇಶಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ರಂಜನ್ ವಿರುದ್ದ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *