ನಕಲಿ ದಾಖಲೆ ಸೃಷ್ಟಿಸಿ ಐಸಿಐಸಿಐ ಬ್ಯಾಂಕ್ ಗೆ ಧೋಖಾ…ನಾಲ್ವರು ಮಧ್ಯವರ್ತಿಗಳು ಸೇರಿದಂತೆ ಇತರರ ಮೇಲೆ FIR ದಾಖಲು…1.09 ಕೋಟಿ ವಂಚನೆ…

ನಕಲಿ ದಾಖಲೆ ಸೃಷ್ಟಿಸಿ ಐಸಿಐಸಿಐ ಬ್ಯಾಂಕ್ ಗೆ ಧೋಖಾ…ನಾಲ್ವರು ಮಧ್ಯವರ್ತಿಗಳು ಸೇರಿದಂತೆ ಇತರರ ಮೇಲೆ FIR ದಾಖಲು…1.09 ಕೋಟಿ ವಂಚನೆ…

ಮೈಸೂರು,ಫೆ1,Tv10 ಕನ್ನಡ

ನಕಲಿ ದಾಖಲೆ ಸೃಷ್ಟಿಸಿ ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್ ಗೆ 1.09 ಕೋಟಿ ಗೆ ವಂಚನೆ ಎಸಗಿದ ಆರೋಪದ ಮೇಲೆ ನಾಲ್ವರು ಮಧ್ಯವರ್ತಿಗಳು ಸೇರಿದಂತೆ ಹಲವರ ಮೇಲೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಧ್ಯವರ್ತಿಗಳಾದ ಸುಶೀಲ್ ಕುಮಾರ್,ವರದರಾಜನ್,ಪುಟ್ಟಸ್ವಾಮಿ ಬ್ಯಾಂಕ್ ನ ಹೊರಗುತ್ತಿಗೆ ನೌಕರ ನಿಮಿಷ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.ಬ್ಯಾಂಕ್ ವ್ಯವಸ್ಥಾಪಕರಾದ ಏಕಾಂತ್ ಪ್ರಕರಣ ದಾಖಲಿಸಿದ್ದಾರೆ.

ಗೀತಾ ಎಂಬುವರು ಜಯಲಕ್ಷ್ಮಿಪುರಂ ಸ್ವತ್ತು ನಂ 23 ಮೇಲೆ ಲ್ಯಾಂಡ್ ಲೋನ್ ಅಪೇಕ್ಷಿಸಿ 1-07-2021 ರಂದು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಬ್ಯಾಂಕ್ ಸಿಬ್ಬಂದಿಗಳು ವಕೀಲರ ಬಳಿ ಲೀಗಲ್ ಸಲಹೆ ಪಡೆದು ವಾಲ್ಯುಏಷನ್ ರಿಪೋರ್ಟ್ ಆಧಾರದ ಮೇಲೆ 1,65,00,000/- ಸಾಲ ನೀಡಿದ್ದಾರೆ.ಮೈಸೂರು ದಕ್ಷಿಣ ಉಪನೊಂದಣಾಧಿಕಾರಿ ಕಚೇರಿಯಲ್ಲಿ 1 ನೇ ಪುಸ್ತಕ ನಂ1 Mys-1-01451-2021-22 ರಲ್ಲಿ ನೊಂದಣಿ ಆಗಿದೆ.ಬ್ಯಾಂಕ್ ನ ಹೊರಗುತ್ತಿಗೆ ನೌಕರ ನಿಮಿಷ್ ರವರು ಸ್ವತ್ತಿನ ಮಾರಾಟಗಾರರಾದ ಪುಟ್ಟರಾಜು ರವರಿಗೆ ಚೆಕ್ ನೀಡಿ ದಾಖಲೆಗಳನ್ನ ಪಡೆದಿದ್ದಾರೆ.ಆಗಸ್ಟ್ 23 ರ ವರೆಗೆ ಗೀತಾ ರವರು ಸಾಲದ ಕಂತು ಕಟ್ಟಿ ನಂತರ ಸ್ಥಗಿತಗೊಳಿಸಿದ್ದಾರೆ.ಬ್ಯಾಂಕ್ ಸಿಬ್ಬಂದಿಗಳು ಸಾಲ ಮರುಪಾವತಿಸುವಂತೆ ತಿಳಿಸಿದಾಗ ತಾವು ಮೋಸ ಹೋಗಿರುವುದಾಗಿ ಗೀತಾ ತಿಳಿಸಿದ್ದಾರೆ.ಬ್ಯಾಂಕ್ ನವರು ಪರಿಶೀಲನೆ ಮಾಡಿದಾಗ ನೊಂದಣಿ ಆದ ದಾಖಲೆಯಲ್ಲಿ ಸದರಿ ಪುಸ್ತಕದಲ್ಲಿ ಶ್ವೇತಾ ಮೋಹನ್ ಕುಟ್ಟಂಡ ಹೆಸರಿನಲ್ಲಿ ಸ್ವತ್ತು ನೊಂದಣಿ ಆಗಿರುವುದು ಕಂಡುಬಂದಿದೆ.ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದಾಗ ಮಧ್ಯವರ್ತಿಗಳಾದ ಸುಶೀಲ್ ಕುಮಾರ್ ನಕಲಿ ದಾಖಲೆಗಳನ್ನ ಸೃಷ್ಟಿಸಿ ಯಾಮಾರಿಸಿರುವುದು ಬೆಳಕಿಗೆ ಬಂದಿದೆ.ಪುಟ್ಟರಾಜು ರವರು ಚೆಕ್ ಪಡೆದು ವರದರಾಜನ್,ವಿಕಾಸಿನಿ ಸೇರದಂತೆ ಹಲವರ ಹೆಸರಲ್ಲಿ ಹಣ ಡ್ರಾ ಮಾಡಿರುವುದು ಕಂಡು ಬಂದಿದೆ.ಇದೀಗ ಗೀತಾ ರವರು ಬ್ಯಾಂಕ್ ಗೆ ಅಸಲು 97,70,391/- ಜೊತೆಗೆ ಬಡ್ಡಿ ಸೇರಿ 1,09,10,780/- ರೂ ಬಾಕಿ ಉಳಿಸಿಕೊಂಡಿದ್ದಾರೆ.ಗೀತಾ ರವರಿಂದ ಹಣ ಮರುಪಾವತಿ ಆಗದ ಹಿನ್ನಲೆ ಬ್ಯಾಂಕ್ ಮ್ಯಾನೇಜರ್ ಏಕಾಂತ್ ಮಧ್ಯವರ್ತಿಗಳ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *