ನಡುರಸ್ತೆಯಲ್ಲಿ ಪತ್ನಿ ಮೇಲೆ ಪತಿಯಿಂದ ಹಲ್ಲೆ…ಆಸಿಡ್ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ…ಗಂಡ ಸೇರಿದಂತ ಮೂವರ ವಿರುದ್ದ FIR ದಾಖಲು…

ನಡುರಸ್ತೆಯಲ್ಲಿ ಪತ್ನಿ ಮೇಲೆ ಪತಿಯಿಂದ ಹಲ್ಲೆ…ಆಸಿಡ್ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ…ಗಂಡ ಸೇರಿದಂತ ಮೂವರ ವಿರುದ್ದ FIR ದಾಖಲು…

ಮೈಸೂರು,ಜ31,Tv10 ಕನ್ನಡ

ನ್ಯಾಯಾಲಯದಲ್ಲಿರುವ ದಾವೆಯನ್ನ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಪತ್ನಿ ಮೇಲೆ ಪತಿರಾಯ ಹಾಡುಹಗಲೇ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಆಸಿಡ್ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಮೈಸೂರಿನ ಕುಕ್ಕರಹಳ್ಳಿ ಬಳಿ ನಡೆದಿದೆ. ದೌರ್ಜನ್ಯಕ್ಕೆ ಬೆದರಿದ ಪತ್ನಿ ಪತಿ ಹಾಗೂ ಇಬ್ಬರು ಸ್ನೇಹಿತರು ಸೇರಿದಂತೆ ಮೂವರ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶಾರದಾದೇವಿ ನಗರದ ನಿವಾಸಿ ಐಶ್ವರ್ಯ ಎಂಬುವರೇ ಪತಿ ಮೇಲೆ ಪ್ರಕರಣ ದಾಖಲಿಸಿದ ಮಹಿಳೆ.ಪತಿ ಸಂದೇಶ್ ಹಾಗೂ ಇವರ ಸ್ನೇಹಿತರಾದ ವಿಜಯ್ ಕುಮಾರ್ ಮತ್ತು ಪುಟ್ಟಸ್ವಾಮಿ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.ಎರಡು ಮಕ್ಕಳ ತಾಯಿ ಆಗಿರುವ ಐಶ್ವರ್ಯ ರವರು ಕಾರಣಾಂತರದಿಂದ ಪತಿ ಸಂದೇಶ್ ರಿಂದ ದೂರವಾಗಿದ್ದಾರೆ.ಜೀವನಾಂಶಕ್ಕಾಗಿ ಐಶ್ವರ್ಯ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಜೀವನಾಙಶ ನೀಡುವಂತೆ ನ್ಯಾಯಾಲಯವೂ ಆದೇಶ ನೀಡಿದೆ ಎಂದು ಹೇಳಲಾಗಿದೆ.ಇದನ್ನ ಸಹಿಸದ ಪತಿ ಸಂದೇಶ್ ತನ್ನ ಸ್ನೇಹಿತರಾದ ವಿಜಯ್ ಕುಮಾರ್ ಹಾಗೂ ಪುಟ್ಟಸ್ವಾಮಿ ನೆರವಿನಿಂದ ಕುಕ್ಕರಹಳ್ಳಿ ಕೆರೆ ಬಳಿ ವಾಕಿಂಗ್ ಮಾಡುತ್ತಿದ್ದ ಐಶ್ವರ್ಯಾರನ್ನ ಅಡ್ಡಹಾಕಿ ಅವಾಚ್ಯ ಶಬ್ಧಗಳಿಂದ ಸಾರ್ವಜನಿಕರೆದುರು ನಿಂದಿಸಿ ಹಲ್ಲೆ ಮಾಡಿದ್ದಾರೆ.ಚಾಕು ಪ್ರದರ್ಶಿಸಿ ಇರಿದು ಸಾಯಿಸುವುದಾಗಿ ಬೆದರಿಸಿದ್ದಾರೆ.ಸಾರ್ವಜನಿಕರ ನೆರವಿನಿಂದ ಐಶ್ವರ್ಯ ಬಚಾವ್ ಆಗಿದ್ದಾರೆ.ನಂತರ ಹೆಲ್ಮೆಟ್ ನಿಂದ ಹಲ್ಲೆ ನಡೆಸಿ ನ್ಯಾಯಾಲಯದಲ್ಲಿ ಹಾಕಿರುವ ಪ್ರಕರಣ ಹಿಂದಕ್ಕೆ ಪಡೆಯುವಂತೆ ಧಂಕಿ ಹಾಕಿದ್ದಾನೆ.ಬೇಕಿದ್ದಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿಕೋ ಎಂದು ಐಶ್ವರ್ಯ ಸಹ ತಿರುಗೇಟು ನೀಡಿದ್ದಾರೆ.ಈ ವೇಳೆ ಆಸಿಡ್ ಹಾಕಿ ಇದೇ ಚಾಕುವಿನಿಂದ ಇರಿದು ಸಾಯಿಸುವುದಾಗಿ ಬೆದರಿಕೆ ಹಾಕಿ ತೆರಳಿದ್ದಾನೆ.ಸಂದೇಶ್ ವರ್ತನೆಯಿಂದ ಬೆದರಿದ ಐಶ್ವರ್ಯ ತನಗೇನಾದ್ರೂ ತೊಂದರೆ ಆದಲ್ಲಿ ಪತಿ ಸಂದೇಶ್ ಕಾರಣವಾಗುತ್ತಾರೆಂದು ಅಲ್ಲದೆ ತನಗೆ ಈತನಿಂದ ರಕ್ಷಣೆ ಬೇಕೆಂದು ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಹಾಡು ಹಗಲು ರಸ್ತೆಯಲ್ಲಿ ಗಜರಾಜನ ಬಿಂದಾಸ್ ವಾಕ್… ಗ್ರಾಮಸ್ಥರಲ್ಲಿ ಆತಂಕ…

ಹಾಡು ಹಗಲು ರಸ್ತೆಯಲ್ಲಿ ಗಜರಾಜನ ಬಿಂದಾಸ್ ವಾಕ್… ಗ್ರಾಮಸ್ಥರಲ್ಲಿ ಆತಂಕ…

ಹಾಡು ಹಗಲು ರಸ್ತೆಯಲ್ಲಿ ಗಜರಾಜನ ಬಿಂದಾಸ್ ವಾಕ್… ಗ್ರಾಮಸ್ಥರಲ್ಲಿ ಆತಂಕ… ವಿರಾಜಪೇಟೆ,ಜೂ13,Tv10 ಕನ್ನಡ ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟ ಗಜರಾಜ ರಸ್ತೆಯಲ್ಲಿ ಸಂಚರಿಸಿ ಭಯದ ವಾತಾವರಣ ಮೂಡಿಸಿದ ಘಟನೆ ಕೊಡಗು…
ಕಾವೇರಿ ಆರತಿ,ಅಮ್ಯೂಸ್ ಮೆಂಟ್ ಪಾರ್ಕ್ ಗೆ ವಿರೋಧ…ರೈತರ ಪ್ರತಿಭಟನೆ…

ಕಾವೇರಿ ಆರತಿ,ಅಮ್ಯೂಸ್ ಮೆಂಟ್ ಪಾರ್ಕ್ ಗೆ ವಿರೋಧ…ರೈತರ ಪ್ರತಿಭಟನೆ…

ಮಂಡ್ಯ,ಜೂ12,Tv10 ಕನ್ನಡ ಕೆಆರ್ ಎಸ್ ನಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಗೆ ತೀವ್ರ ವಿರೋಧ ವ್ಯಕ್ತವಾಗಿದೆ.ರೈತ ಸಂಘದಿಂದ ಬೃಹತ್ ಪ್ರತಿಭಟನೆ ನಡೆದಿದೆ.ಕೆಆರ್ ಎಸ್ ಬೃಂದಾವನದ ಬಳಿ…
ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಇ ಆಫೀಸ್ ಕಚೇರಿ ಆರಂಭಕ್ಕೆ ಕ್ಷಣಗಣನೆ…ಸಿಬ್ಬಂದಿಗಳಿಗೆ ತರಬೇತಿ…

ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಇ ಆಫೀಸ್ ಕಚೇರಿ ಆರಂಭಕ್ಕೆ ಕ್ಷಣಗಣನೆ…ಸಿಬ್ಬಂದಿಗಳಿಗೆ ತರಬೇತಿ…

ಮೈಸೂರು,ಜೂ11,Tv10 ಕನ್ನಡ ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇ ಆಫೀಸ್ ವ್ಯವಸ್ಥೆ ಅನುಷ್ಠಾನಗೊಳಿಸುವುದು ಕಡ್ಡಾಯವಾಗಿದೆ.2021 ರಲ್ಲೇ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರದ ಆದೇಶ ಅನುಷ್ಠಾನಗೊಳಿಸಲು ಮೈಸೂರು ಅಭಿವೃದ್ದಿ ಪ್ರಾಧಿಕಾರ…

Leave a Reply

Your email address will not be published. Required fields are marked *