ಐಪಿಎಲ್ ಬೆಟ್ಟಿಂಗ್ ಎಫೆಕ್ಟ್…ತಂಗಿಗೆ ಸಾಲದ ಹೊರೆ…ಒಬ್ಬ ಅಣ್ಣ ಸೆಲ್ಫೀ ವಿಡಿಯೋ ಮಾಡಿ ನೇಣಿಗೆ ಶರಣು…ಪ್ರಕರಣ ದಾಖಲಾಗುತ್ತಿದ್ದಂತೆಯೇ ಮತ್ತೊಬ್ಬ ಅಣ್ಣ ಅತ್ತಿಗೆ ಆತ್ಮಹತ್ಯೆ…ಸಾಲದ ಉರುಳಿಗೆ ಮೂವರು ಬಲಿ…

ಐಪಿಎಲ್ ಬೆಟ್ಟಿಂಗ್ ಎಫೆಕ್ಟ್…ತಂಗಿಗೆ ಸಾಲದ ಹೊರೆ…ಒಬ್ಬ ಅಣ್ಣ ಸೆಲ್ಫೀ ವಿಡಿಯೋ ಮಾಡಿ ನೇಣಿಗೆ ಶರಣು…ಪ್ರಕರಣ ದಾಖಲಾಗುತ್ತಿದ್ದಂತೆಯೇ ಮತ್ತೊಬ್ಬ ಅಣ್ಣ ಅತ್ತಿಗೆ ಆತ್ಮಹತ್ಯೆ…ಸಾಲದ ಉರುಳಿಗೆ ಮೂವರು ಬಲಿ…

ಮೈಸೂರು,ಫೆ18,Tv10 ಕನ್ನಡ

ಐಪಿಎಲ್ ಬೆಟ್ಟಿಂಗ್ ಹಿನ್ನಲೆ ತಂಗಿಗೆ ಸ್ವಂತ ಅಣ್ಣ ಹಾಗೂ ಅತ್ತಿಗೆ ಮಾಡಿಸಿದ ಸಾಲ ಇಂದು ಒಂದೇ ಕುಟುಂಬದ ಮೂವರ ಸಾವಿಗೆ ಕಾರಣವಾಗಿದೆ.ತಂಗಿ ಮೇಲಿದ್ದ ಸಾಲದ ಕಿರುಕುಳಕ್ಕೆ ಬೇಸತ್ತ ಒಬ್ಬ ಅಣ್ಣ ಸೆಲ್ಫೀ ವಿಡಿಯೋ ಮಾಡಿ ನೇಣಿಗೆ ಶರಣಾದ ಬೆನ್ನ ಹಿಂದೆಯೇ ಪ್ರಕರಣ ದಾಖಲಾದ ಹಿನ್ನಲೆ ಮತ್ತೊಬ್ಬ ಅಣ್ಣ ಹಾಗೂ ಅತ್ತಿಗೆ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಈ ಸಂಭಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಾಗೂ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆ.17 ರಂದು ಒಬ್ಬ ಅಣ್ಣ ಸೆಲ್ಫೀ ವಿಡಿಯೋ ಮಾಡಿ ತನ್ನ ತಮ್ಮ ಹಾಗೂ ಆತನ ಪತ್ನಿ ವಿರುದ್ದ ಆರೋಪ ಮಾಡಿ ರಮ್ಮನಹಳ್ಳಿ ಸ್ಮಶಾನದ ಬಳಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡರೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪ ಹೊತ್ತ ಮತ್ತೊಬ್ಬ ಅಣ್ಣ ಹಾಗೂ ಪತ್ನಿ ವಾಟರ್ ಟ್ಯಾಂಕ್ ಗೆ ಅಳವಡಿಸಿದ ಮೆಟ್ಟಿಲುಗಳಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜೋಷಿ ಆಂಟೋನಿ(46) ರಮ್ಮನಹಳ್ಳಿಯಲ್ಲಿ ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದವರು.ಇವರ ತಮ್ಮ ಜೋಬಿ ಆಂಟೋನಿ ಹಾಗೂ ಪತ್ನಿ ಶರ್ಮಿಳಾ.@.ಸ್ವಾತಿ ವಿಜಯನಗರ ವಾಟರ್ ಟ್ಯಾಂಕ್ ಬಳಿ ನೇಣಿಗೆ ಶರಣಾದವರು.ಸಾಲದ ವಿಚಾರದಲ್ಲಿ ಶುರುವಾದ ವಿವಾದ ಒಂದೇ ಕುಟುಂಬದ ಮೂವರನ್ನ ಬಲಿ ಪಡೆದಿದೆ.

ಮೇರಿಷಿಲಿನ್ ಗೆ ಇಬ್ಬರು ಅಣ್ಣಂದಿರು.ಓರ್ವ ಜೋಷಿ ಆಂಟೋನಿ ಹಾಗೂ ಮತ್ತೊಬ್ಬ ಜೋಬಿ ಆಂಟೋನಿ.ಜೋಬಿ ಆಂಟೋನಿ ತನ್ನ ತಂಗಿ ಮೇರಿಷಿಯಸ್ ಗೆ ಲಕ್ಷಾಂತರ ರೂ ಸಾಲ ಮಾಡಿಸಿದ್ದಾನೆ.ಐಪಿಎಲ್ ನಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಜೋಬಿ ಆಂಟೋನಿ ತಂಗಿ ಹೆಸರಲ್ಲಿ ಹಣ ಕಳೆದಿದ್ದಾನೆ.ಇದಕ್ಕೆ ಜೋಬಿ ಆಂಟೋನಿ ಪತ್ನಿ ಶರ್ಮಿಳಾ.ಆ.ಸ್ವಾತಿ ಕುಮ್ಮಕ್ಕು ಇದೆ.ಲಕ್ಷಾಂತರ ಸಾಲ ನೀಡಿದ ಜನ ಮೇರಿಷಿಯಸ್ ಗೆ ದುಂಬಾಲು ಬಿದ್ದಿದ್ದಾರೆ.ಸಾಲ ತೀರಿಸಲಾಗದೆ ಮೇರಿಷಿಯಸ್ ಒತ್ತಡಕ್ಕೆ ಬಿದ್ದಿದ್ದಾರೆ.ತಂಗಿಗೆ ಸಾಲಗಾರರ ಕಿರುಕುಳ ಹೆಚ್ಚಾಗುತ್ತಿದ್ದಂತೆಯೇ ಬೇಸತ್ತ ಮತ್ತೊಬ್ಬ ಅಣ್ಣ ಜೋಷಿ ಆಂಟೋನಿ ನೊಂದಿದ್ದಾರೆ.ತಂಗಿಗೆ ಬಂದ ಸ್ಥಿತಿಗೆ ಮರುಗಿದ ಜೋಷಿ ಆಂಟೋನಿ ಫೆ.17 ರಂದು ರಮ್ಮನಹಳ್ಳಿ ಸ್ಮಶಾನದ ಬಳಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಸೆಲ್ಫೀ ವಿಡಿಯೋ ಮಾಡಿ ತನ್ನ ತಂಗಿಯ ಪರಿಸ್ಥಿತಿಗೆ ನನ್ನ ತಮ್ಮ ಜೋಬಿ ಆಂಟೋನಿ ಹಾಗೂ ಆತ್ಮ ಪತ್ನಿ ಶರ್ಮಿಳಾ.ಆ.ಸ್ವಾತಿ ಕಾರಣ ಇವರನ್ನ ಸುಮ್ಮನೆ ಬಿಡಬೇಡಿ ಎಂದು ಕಣ್ಣೀರಿಡುತ್ತಾ ಸೆಲ್ಫೀ ಮಾಡಿ ವಿಡಿಯೋವನ್ನ ತಂಗಿ ಮಗಳ ಮೊಬೈಲ್ ಗೆ ಸೆಂಡ್ ಮಾಡಿ ನೇಣಿಗೆ ಶರಣಾಗಿದ್ದಾರೆ.ತಂದೆ ತಾಯಿಯನ್ನ ದಫನ್ ಮಾಡಿದ ಸ್ಥಳದಲ್ಲೇ ಜೋಷಿ ಆಂಟೋನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸಂಭಂಧ ಮೇರಿಷಿಯಸ್ ರವರು ಮತ್ತೊಬ್ಬ ಅಣ್ಣ ಜೋಬಿ ಆಂಟೋನಿ ಮತ್ತು ಅತ್ತಿಗೆ ಶರ್ಮಿಳಾ.ಆ.ಸ್ವಾತಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಈ ಮಾಹಿತಿ ಅರಿತ ಅಣ್ಣ ಜೋಬಿ ಆಂಟೋನಿ ಹಾಗೂ ಪತ್ನಿ ಶರ್ಮಿಳಾ.ಆ.ಸ್ವಾತಿ ವಿಜಯನಗರ ವಾಟರ್ ಟ್ಯಾಂಕ್ ಮೆಟ್ಟಿಲುಗಳಿಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಐಪಿಎಲ್ ಬೆಟ್ಟಿಂಗ್ ದಂಧೆ ಹಿನ್ನಲೆ ಮಾಡಿದ ಸಾಲ ಇಂದು ಒಂದೇ ಕುಟುಂಬದ ಮೂವರ ಆತ್ಮಹತ್ಯೆಗೆ ಕಾರಣವಾಗಿದೆ.

Spread the love

Related post

ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ…

ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ…

ಮೈಸೂರು,ಮಾ11,Tv10 ಕನ್ನಡ ಸುಡು ಬೇಸಿಗೆಯ ಉಷ್ಣಾಂಶದಲ್ಲಿ ಜೀವಸಂಕುಲಪ್ರಾಣಿಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮೂಕಸ್ಪಂದನೆ ಎಂಬ ಜಾಗೃತಿ ಅಭಿಯಾನಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಕೈ…
ಖಾಸಗಿ ಜಾಗಕ್ಕೆ ಅತಿಕ್ರಮ ಪ್ರವೇಶ ಆರೋಪ…ಗ್ರಾ.ಪಂ.ಉಪಾಧ್ಯಕ್ಷ ಸೇರಿದಂ ನಾಲ್ವರ ವಿರುದ್ದ FIR…ನ್ಯಾಯಾಲಯದ ಆದೇಶದಂತೆ ಕ್ರಮ…

ಖಾಸಗಿ ಜಾಗಕ್ಕೆ ಅತಿಕ್ರಮ ಪ್ರವೇಶ ಆರೋಪ…ಗ್ರಾ.ಪಂ.ಉಪಾಧ್ಯಕ್ಷ ಸೇರಿದಂ ನಾಲ್ವರ ವಿರುದ್ದ FIR…ನ್ಯಾಯಾಲಯದ…

ಮೈಸೂರು,ಮಾ11,Tv10 ಕನ್ನಡ ಖಾಸಗಿ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ ಮಾಲೀಕರಿಗೆ ನಿಂದನೆ, ಕೊಲೆ ಬೆದರಿಕೆ ಆರೋಪದ ಹಿನ್ನಲೆ ನ್ಯಾಯಾಲಯದ ಆದೇಶದಂತೆಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ.ಎಸ್‌. ರವಿ…
ಕಾರು ಪಡೆದು ವಂಚನೆ ಆರೋಪ…ಮೈ ಟಾರ್ಪಾಲಿನ್ಸ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ ಪ್ರಕರಣ ದಾಖಲು…

ಕಾರು ಪಡೆದು ವಂಚನೆ ಆರೋಪ…ಮೈ ಟಾರ್ಪಾಲಿನ್ಸ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ…

ಮೈಸೂರು,ಮಾ11,Tv10 ಕನ್ನಡ ವೈಯುಕ್ತಿಕ ಉಪಯೋಗಕ್ಕಾಗಿ ವ್ಯಕ್ತಿಯೊಬ್ಬರಿಂದ ಪಡೆದ ಕಾರನ್ನ ಹಿಂದಿರುಗಿಸದ ಮೈ ಟಾರ್ಪಾಲಿನ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಬೆಂಗಳೂರಿನ ರಾಜಿಯಾ…

Leave a Reply

Your email address will not be published. Required fields are marked *