ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ…ಸಬ್ ಇನ್ಸ್ಪೆಕ್ಟರ್ ವರ್ಗಾವಣೆ…

ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ…ಸಬ್ ಇನ್ಸ್ಪೆಕ್ಟರ್ ವರ್ಗಾವಣೆ…

ಮೈಸೂರು,ಫೆ18,Tv10 ಕನ್ನಡ

ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಭಂಧಿಸಿದಂತೆ ಸಬ್ ಇನ್ಸ್‌ ಪೆಕ್ಟರ್ ಎತ್ತಂಗಡಿಯಾಗಿದೆ.ಸಬ್
ಇನ್ಸ್ಪೆಕ್ಟರ್ ರೂಪೇಶ್ ವರ್ಗಾವಣೆ ಮಾಡಲಾಗಿದೆ.
ನಗರ ಪೊಲೀಸ್ ಆಯುಕ್ತರ ಕಚೇರಿಯ ಆಟೋಮೇಷನ್ ಸೆಂಟರ್‌ ಸಬ್ ಇನ್ಸ್‌ ಪೆಕ್ಟರ್ ರೂಪೇಶ್ ಎತ್ತಂಗಡಿಯಾಗಿದ್ದಾರೆ.
ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶಿಸಿದ್ದಾರೆ.
ಗಲಾಟೆ ತಡೆಯಲು ಅವಕಾಶ ಇದ್ದರೂ ನಿರ್ಲಕ್ಷ್ಯ ಮಾಡಿದ ಆರೋಪ ಹಿನ್ನಲೆ ವರ್ಗಾವಣೆ ಮಾಡಲಾಗಿದೆ.
ಆಕ್ಷೇಪಾರ್ಹ ಪೊಸ್ಟ್ ಹಾಕಿದ್ದ ಆರೋಪಿ ಸತೀಶ್ ಆಲಿಯಾಸ್ ಪಾಂಡುರಂಗನನ್ನ ರೂಪೇಶ್‌ ಠಾಣೆಗೆ ಕರೆತಂದಿದ್ದರು. ಆದರೆ ಬೆಳಿಗ್ಗೆಯಿಂದ ಸಂಜೆಯವರೆಗೂ ಸತೀಶ್ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಇನ್ಸ್ ಪೆಕ್ಟರ್ ರೂಪೇಶ್ ಹಿಂದೇಟು ಹಾಕಿದ್ದರು ಎನ್ನಲಾಗಿದೆ.
ಇದರಿಂದ ಮುಂದೆ ಮುಸ್ಲಿಂ ಯುವಕರ ಗುಂಪು ಜಮಾಯಿಸಿ ಗಲಾಟೆ ನಡೆಸಿತ್ತು.
ಈ ಮಧ್ಯೆ ರೂಪೇಶ್ ವಿರುದ್ದ ಹಲವು ಆರೋಪಗಳು ಕೇಳಿ ಬಂದ ಹಿನ್ನಲೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ…

Spread the love

Related post

ಯುವಕನ ಮೇಲೆ ಹಲ್ಲೆ…ನಾಲ್ವರಿಂದ ಕೃತ್ಯ…ಪ್ರಕರಣ ದಾಖಲು…

ಯುವಕನ ಮೇಲೆ ಹಲ್ಲೆ…ನಾಲ್ವರಿಂದ ಕೃತ್ಯ…ಪ್ರಕರಣ ದಾಖಲು…

ಪಿರಿಯಾಪಟ್ಟಣ,ಮಾ18,Tv10 ಕನ್ನಡ ಯುವಕನನ್ನು ಕರೆದುಕೊಂಡು ಹೋಗಿ ಹಲ್ಲೆ ನಡೆಸಿರುವ ಘಟನೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಜ್ವಲ್ (21) ಹಲ್ಲೆಗೊಳಗಾದ ಯುವಕ. ಪಿರಿಯಾಪಟ್ಟಣ ತಾಲ್ಲೂಕು…
ಶ್ರೀರಾಮ ಗೆಳೆಯರ ಬಳಗದಿಂದ ಪುನೀತ್ ರಾಜ್ ಕುಮಾರ್ ಜನ್ಮದಿನೋತ್ಸವ ಆಚರಣೆ…ಮಜ್ಜಿಗೆ,ಸಿಹಿ ವಿತರಣೆ…

ಶ್ರೀರಾಮ ಗೆಳೆಯರ ಬಳಗದಿಂದ ಪುನೀತ್ ರಾಜ್ ಕುಮಾರ್ ಜನ್ಮದಿನೋತ್ಸವ ಆಚರಣೆ…ಮಜ್ಜಿಗೆ,ಸಿಹಿ ವಿತರಣೆ…

ಮೈಸೂರು,ಮಾ17,Tv10 ಕನ್ನಡ ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಪವರ್ ಸ್ಟಾರ್ ಯುವರತ್ನ ಪುನೀತ್ ರಾಜಕುಮಾರ್ ರವರ ಜನ್ಮದಿನೋತ್ಸವದ ನೆನಪಿಗಾಗಿ ‘ಶ್ರೀರಾಮ ಗೆಳಯರ ಬಳಗದ’ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಿಕರಿಗೆ…
ಕಳೆದುಹೋಗಿದ್ದ ಮೊಬೈಲ್ ವಾರಸುದಾರರಿಗೆ…ಮಾಲೀಕರನ್ನ ತಲುಪಿದ 37 ಮೊಬೈಲ್…

ಕಳೆದುಹೋಗಿದ್ದ ಮೊಬೈಲ್ ವಾರಸುದಾರರಿಗೆ…ಮಾಲೀಕರನ್ನ ತಲುಪಿದ 37 ಮೊಬೈಲ್…

ಮೈಸೂರು,ಮಾ17,Tv10 ಕನ್ನಡ ಕಳೆದುಹೋಗಿದ್ದ 37 ಮೊಬೈಲ್ ಫೋನ್ ಗಳನ್ನು ದೇವರಾಜ ಠಾಣೆ ಪೊಲೀಸರು ಇಂದು ವಾರಸುದಾರರಿಗೆ ಮರಳಿಸಿದರು. ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಘು.ಕೆ.ಆರ್. ಉಪ ನಿರೀಕ್ಷಕರಾದ…

Leave a Reply

Your email address will not be published. Required fields are marked *