ಪೆರೋಲ್ ನಲ್ಲಿ ಬಿಡುಗಡೆಯಾದ 3 ಖೈದಿಗಳು…ಓರ್ವ ಆತ್ಮಹತ್ಯೆ…ಮತ್ತೊಬ್ಬ ಒರಿಸ್ಸಾದಲ್ಲಿ ಅಂದರ್…ಮತ್ತೊಬ್ಬ ನಾಪತ್ತೆ…

ಪೆರೋಲ್ ನಲ್ಲಿ ಬಿಡುಗಡೆಯಾದ 3 ಖೈದಿಗಳು…ಓರ್ವ ಆತ್ಮಹತ್ಯೆ…ಮತ್ತೊಬ್ಬ ಒರಿಸ್ಸಾದಲ್ಲಿ ಅಂದರ್…ಮತ್ತೊಬ್ಬ ನಾಪತ್ತೆ…

ಮೈಸೂರು,ಫೆ27,Tv10 ಕನ್ನಡ

ಪೆರೋಲ್ ನಲ್ಲಿ ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ಮೂವರು ಖೈದಿಗಳ ಪೈಕಿ ಓರ್ವ ಆತ್ಮಹತ್ಯೆ ಮಾಡಿಕೊಂಡರೆ ಮತ್ತೊಬ್ಬ ಒರಿಸ್ಸಾದಲ್ಲಿ ಗಾಂಜಾ ಪ್ರಕರಣದಲ್ಲಿ ಬಂಧನವಾದರೆ ಮತ್ತೊಬ್ಬ ನಾಪತ್ತೆಯಾಗಿದ್ದಾನೆ.ಈ ಸಂಭಂಧ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಮೋಹನ್ ಕುಮಾರ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಸಜಾ ಖೈದಿಯಾಗಿದ್ದ ಹಾಸನ ಮೂಲದ ನವೀನ್ 60 ದಿನಗಳ ಅವಧಿಗೆ ಪೆರೋಲ್ ನಲ್ಲಿ ತೆರಳಿದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ.ಮತ್ತೊಬ್ಬ ಒರಿಸ್ಸಾ ರಾಜ್ಯದ ಸುನಿಲ್ ಬೀರಾ ಪೆರೋಲ್ ನಲ್ಲಿ ಬಿಡುಗಡೆಯಾದ ನಂತರ ನಾಪತ್ತೆಯಾಗಿದ್ದಾನೆ.ಮತ್ತೊಬ್ಬ ಖೈದಿ ವೆಂಕಣ್ಣ ಆಂದ್ರ ರಾಜ್ಯದ ವಿಶಾಖಪಟ್ಟಣ ನಿವಾಸಿ ವೆಂಕಣ್ಣ ಪೆರೋಲ್ ನಲ್ಲಿ ಬಿಡುಗಡೆಯಾಗಿ ತೆರಳಿದ ನಂತರ ಒರಿಸ್ಸಾನಲ್ಲಿ ಗಾಂಜಾ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

ಹಾಸನದ ನವೀನ್ ಡಿಸೆಂಬರ್ 6 ರಂದು 60 ದಿನಗಳ ಅವಧಿಗೆ ಬಿಡುಗಡೆಯಾಗಿ ಸ್ವಗ್ರಾಮ ಹಲಸನಹಳ್ಳಿಗೆ ತೆರಳಿದ್ದಾನೆ.ಫೆ2 ರಂದು ಅವಧಿ ಮುಗಿದು ಶರಣಾಗಬೇಕಿತ್ತು.ಆದ್ರೆ ನವೀನ್ ಈ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಒರಿಸ್ಸಾ ಮೂಲದ ಸುನಿಲ್ ಬೀರಾ ಡಿ.12 ರಂದು 60 ದಿನಗಳ ಅವಧಿಗೆ ಬಿಡುಗಡೆಯಾಗಿ ಪೆರೋಲ್ ಮೇಲೆ ತೆರಳಿದ್ದಾನೆ.ನಿಗದಿತ ಸಮಯಕ್ಕೆ ಶರಣಾಗದೆ ನಾಪತ್ತೆಯಾಗಿದ್ದಾನೆ.

ಆಂಧ್ರ ರಾಜ್ಯ ವಿಶಾಖಪಟ್ಟಣದ ವೆಂಕಣ್ಣ ಡಿಸೆಂಬರ್ ನಲ್ಲಿ ತೆರಳಿದವರು ನಿಗದಿತ ಸಮಯಕ್ಕೆ ಹಿಂದಿರುಗಿ ಶರಣಾಗಿಲ್ಲ.ಈತ ಒರಿಸ್ಸಾದಲ್ಲಿ ಗಾಂಜಾ ಪ್ರಕರಣದಲ್ಲಿ ಸಿಲುಕಿ ಜೈಲುವಾಸಿಯಾಗಿದ್ದಾನೆ.

ವೆಂಕಣ್ಣ ಪ್ರಕರಣದಲ್ಲಿ ಒರಿಸ್ಸಾ ನ್ಯಾಯಾಲಯ ಜಾಮೀನು ನೀಡಿದ ನಂತರ ಮೈಸೂರು ಪೊಲೀಸರು ವಶಕ್ಕೆ ಪಡೆಯಬೇಕಿದೆ.ಸುನಿಲ್ ಬೀರಾ ಪ್ರಕರಣದಲ್ಲಿ ನಾಪತ್ತೆಯಾದವನನ್ನ ಹುಡುಕಬೇಕಿದೆ.ನವೀನ್ ಆತ್ಮಹತ್ಯೆಗೆ ಶರಣಾದ ಹಿನ್ನಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ.ಒಟ್ಟಾರೆ ಪೆರೋಲ್ ನಲ್ಲಿ ತೆರಳಿದ ಖೈದಿಗಳು ಮೈಸೂರಿನ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ…

Spread the love

Related post

ಭಾರತ ಸೈನಿಕರ ಹೆಸರಿನಲ್ಲಿ ಹನುಮಾನ್ ಚಾಲಿಸ ಪಠಣೆ…ಬಿಜೆಪಿ ಕಾರ್ಯಕರ್ಯರಿಂದ ವಿಶೇಷ ಪೂಜೆ…

ಭಾರತ ಸೈನಿಕರ ಹೆಸರಿನಲ್ಲಿ ಹನುಮಾನ್ ಚಾಲಿಸ ಪಠಣೆ…ಬಿಜೆಪಿ ಕಾರ್ಯಕರ್ಯರಿಂದ ವಿಶೇಷ ಪೂಜೆ…

ಮೈಸೂರು,ಮೇ9,Tv10 ಕನ್ನಡ ಪಾಕ್ ಉಗ್ರರ ಮೇಲೆ ಭಾರತದ ಸೈನಿಕರಿಂದ ಸಿಂಧೂರ್ ಆಪರೇಷನ್ಯೋಧರ ಹೆಸರಿನಲ್ಲಿ ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಮೈಸೂರಿನ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರುಕೋಟೆ ಆಂಜನೇಯ ದೇವಸ್ಥಾನದಲ್ಲಿ ಸೈನಿಕರ…
ಸಿಡಿಯಮ್ಮನ ಜಾತ್ರಾ ಮಹೋತ್ಸವ ಸಂಭ್ರಮ…ಸಂಸದ ಯದುವೀರ್ ಭಾಗಿ…ವಿಶೇಷ ಪೂಜೆ…

ಸಿಡಿಯಮ್ಮನ ಜಾತ್ರಾ ಮಹೋತ್ಸವ ಸಂಭ್ರಮ…ಸಂಸದ ಯದುವೀರ್ ಭಾಗಿ…ವಿಶೇಷ ಪೂಜೆ…

ಹುಣಸೂರು,ಮೇ2,Tv10 ಕನ್ನಡ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಸಿಡಿಯಮ್ಮನ ಜಾತ್ರಾ ಮಹೋತ್ಸವ ಅದ್ದೂರಿಯಿಂದ ನೆರವೇರಿತು.ಹಲವಾರು ಐತಿಹ್ಯವುಳ್ಳ, ರಾಜ್ಯಾದ್ಯಂತ ಭಕ್ತರನ್ನು ಹೊಂದಿರುವ, ಪವಾಡದ ಜಾತ್ರೆಯೆಂದೇ ಪ್ರತಿಬಿಂಬಿತವಾಗಿರುವ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ…
ಮರದ ಬಳಿ ಮಲಗಿದ್ದ ರೈತನ ಕಾಲುಗಳ ಮೇಲೆ ಹರಿದ ಟಿಪ್ಪರ್…ಎರಡು ಕಾಲುಗಳು ಮುರಿತ…

ಮರದ ಬಳಿ ಮಲಗಿದ್ದ ರೈತನ ಕಾಲುಗಳ ಮೇಲೆ ಹರಿದ ಟಿಪ್ಪರ್…ಎರಡು ಕಾಲುಗಳು…

ಮಂಡ್ಯ,ಏ30,Tv10 ಕನ್ನಡ ಅರಳಿ ಮರದ ಕೆಳಗೆ ವಿರಮಿಸುತ್ತಿದ್ದ ರೈತನ ಕಾಲುಗಳ ಮೇಲೆ ಟಿಪ್ಪರ್ ಹರಿದ ಮಂಡ್ಯ ಜಿಲ್ಲೆ ಕೆ.ಆರ್‌‌.ಪೇಟೆ ತಾಲೂಕಿನ ಆಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪುಟ್ಟೇಗೌಡ ಎಂಬುವವರ ಮೇಲೆ ಹರಿದ…

Leave a Reply

Your email address will not be published. Required fields are marked *