
ಮೈಸೂರು:ಬೀಗ ಮುರಿದಿಲ್ಲ…ಬಾಗಿಲು ಹೊಡೆದಿಲ್ಲ…ಮನೆಯಲ್ಲಿದ್ದ ನಗದು ಚಿನ್ನಾಭರಣ ಮಾಯ…
- TV10 Kannada Exclusive
- March 6, 2025
- No Comment
- 108
ಮೈಸೂರು,ಮಾ6,Tv10 ಕನ್ನಡ
ಮನೆ ಬೀಗ ಮುರಿದಿಲ್ಲ,ಬಾಗಿಲು ಹೊಡೆದಿಲ್ಲ ಆದ್ರೂ ಮನೆಯಲ್ಲಿದ್ದ 3.5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನಾಭರಣ ಕಳುವಾಗಿರುವ ಘಟನೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿನಿ ಲೇ ಔಟ್ ನಲ್ಲಿ ನಡೆದಿದೆ.ಸಿದ್ದರಾಮನಹುಂಡಿಯ ಸರ್ಕಾರಿ ಕಾಲೇಜ್ ರಿಟೈರ್ಡ್ ವೈಸ್ ಪ್ರಿನ್ಸಿಪಲ್ ಮಾಯಾಂಗ ಎಂಬುವರ ಮನೆಯಲ್ಲಿ ನಿಗೂಢವಾಗಿ ಕಳ್ಳತನವಾಗಿದೆ.ಕಾರ್ಯಕ್ರಮವೊಂದಕ್ಕೆ ಕುಟುಂಬ ಸಮೇತ ತೆರಳಿದ್ದ ಮಾಯಾಂಗ ರವರು ಮನೆಗೆ ಹಿಂದಿರುಗಿದಾಗ ವಾರ್ಡ್ ರೋಬ್ ನಲ್ಲಿದ್ದ ಹಣ 25 ಗ್ರಾಂ ಚಿನ್ನಾಭರಣ ಹಾಗೂ 3.5 ಲಕ್ಷ ನಗದು ಮಾಯವಾಗಿದೆ.ಮನೆಯ ಮುಂದಿನ ಅಥವಾ ಹಿಂದಿನ ಬಾಗಿಲು ಯಥಾ ಪ್ರಕಾರ ಬೀಗ ಹಾಕಿದಂತೆಯೇ ಇದೆ.ಹೀಗಿದ್ದೂ ನಿಗೂಢವಾಗಿ ಕಳ್ಳತನ ಆಗಿರುವುದು ಅಚ್ಚರಿಗೆ ಕಾರಣವಾಗಿದೆ.ಪರಿಚಯಸ್ಥರೇ ನಕಲಿ ಕೀ ಬಳಸಿ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.ಈ ಸಂಭಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…