ಸೆಲ್ಫೀ ವಿಡಿಯೋ ಮಾಡಿ ವ್ಯಕ್ತಿ ಸಾವು…ಜಗಳ ಆಡಿದವರ ವಿರುದ್ದ ಪ್ರಕರಣ ದಾಖಲು…

ಸೆಲ್ಫೀ ವಿಡಿಯೋ ಮಾಡಿ ವ್ಯಕ್ತಿ ಸಾವು…ಜಗಳ ಆಡಿದವರ ವಿರುದ್ದ ಪ್ರಕರಣ ದಾಖಲು…

ಮೈಸೂರು,ಮಾ10,Tv10 ಕನ್ನಡ

ಪಾರ್ಶ್ವವಾಯು ಪೀಡಿತ ವ್ಯಕ್ತಿ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಮೈಸೂರಿನ ಲಕ್ಷ್ಮಿಕಾಂತ ನಗರದಲ್ಲಿ ನಡೆದಿದೆ.ನನ್ನ ಸಾವಿಗೆ ಕೆಳಗಡೆ ಮನೆಯವರಾದ ಶ್ರೀನಿವಾಸ್ ಹಾಗೂ ಮಂಜುಳ ಕಾರಣ ಎಂದು ಸೆಲ್ಫೀ ವಿಡಿಯೋ ಮಾಡಿರುವ ಹಿನ್ನಲೆ ಮೃತರ ಪತ್ನಿ ತೆನಿಖೆ ನಡೆಸುವಂತೆ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ರಾಜು ಅನುಮಾನಾಸ್ಪದವಾಗಿ ಮೃತಪಟ್ಟವರು.ಕೆಲವು ವರ್ಷಗಳ ಹಿಂದೆ ಪೆರಾಲಿಸಿಸ್ ಆದ ಕಾರಣ ರಾಜು ಮನೆಯಲ್ಲೇ ಉಳಿದುಕೊಂಡಿದ್ದಾರೆ.ಪತ್ನಿ ಜಯಪ್ರದ ಇನ್ಫೋಸಿಸ್ ನಲ್ಲಿ ಸೆಕ್ಯೂರಿಟಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ.ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾಜು ಸೆಲ್ಫೀ ವಿಡಿಯೋ ಮಾಡಿದ್ದಾರೆ.ಪತ್ನಿ ಹಾಗೂ ಮಕ್ಕಳಿಗೆ ತಿಳಿದು ಧೈರ್ಯ ತುಂಬಿ ಪ್ರಯತ್ನವನ್ನ ತಡೆಹಿಡಿದಿದ್ದಾರೆ.ಮರುದಿನವೇ ತಾನು ವಿಷ ಕುಡಿದಿರುವುದಾಗಿ ಪರಿಚಯಸ್ತರ ಬಳಿ ಹೇಳಿದ್ದಾರೆ.ಈ ಮಾಹಿತಿ ಜಯಪ್ರದಾ ರವರಿಗೆ ಗೊತ್ತಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ರಾಜು ಮೃತಪಟ್ಟಿದ್ದಾರೆ.ಸೆಲ್ಪೀ ವಿಡಿಯೋ ಪ್ರಕಾರ ಕೆಳಗಡೆ ಮನೆಯವರು ಆಗಾಗ ಜಗಳ ಮಾಡುತ್ತಿದ್ದರು.ನನ್ನ ಸಾವಿಗೆ ಶ್ರೀನಿವಾಸ್ ಹಾಗೂ ಮಂಜುಳಾ ಕಾರಣ ಎಂದು ವಿಡಿಯೋದಲ್ಲಿ ತಿಳಿಸಿರುವ ಹಿನ್ನಲೆ ಪತಿಯ ಸಾವಿನ ಬಗ್ಗೆ ಅನುಮಾನವಿದೆ ತೆನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೆಳಗಡೆ ಮನೆಯವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ… ಮಂಡ್ಯ,ಆ7,Tv10 ಕನ್ನಡ ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಕೊಲೆಯಾಗಿದೆ.ಕೆ ಆರ್ ಎಸ್ ನಲ್ಲಿ ಮಲಗಿದ್ದ ವ್ಯಕ್ತಿ ತಲೆ…
ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ ಅವರಿಗೆ ಆತ್ಮೀಯ ಸನ್ಮಾನ

ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ ಅವರಿಗೆ…

ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ ಅವರಿಗೆ ಆತ್ಮೀಯ ಸನ್ಮಾನ ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಚ್.ವಿ. ರಾಘವೇಂದ್ರ ಅವರ…
ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್…

ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್…

ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್… ಮೈಸೂರು,ಜೂ30,Tv10 ಕನ್ನಡ ಪ್ರೀತಿಸಿ ಮದುವೆಯಾದ ವಿವಾಹಿತೆಯನ್ನ ಮೂವರು ವ್ಯಕ್ತಿಗಳು ಕಿಡ್ನಾಪ್ ಮಾಡಿ ರಾಮನಗರದ ಮನೆಯೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟ ಘಟನೆ…

Leave a Reply

Your email address will not be published. Required fields are marked *