ನ್ಯಾಯಾಲಯದ ಆವರಣದಲ್ಲಿ ಕೊಲೆ ಬೆದರಿಕೆ ಆರೋಪ…ದಂಪತಿ ಸೇರಿದಂತೆ ಮೂವರ ವಿರುದ್ದ ಪ್ರಕರಣ ದಾಖಲು…

ನ್ಯಾಯಾಲಯದ ಆವರಣದಲ್ಲಿ ಕೊಲೆ ಬೆದರಿಕೆ ಆರೋಪ…ದಂಪತಿ ಸೇರಿದಂತೆ ಮೂವರ ವಿರುದ್ದ ಪ್ರಕರಣ ದಾಖಲು…

ಮೈಸೂರು,ಮಾ12,Tv10 ಕನ್ನಡ

ಹಣಕಾಸಿನ ವಿಚಾರದಲ್ಲಿ ಮೈಸೂರು ನ್ಯಾಯಾಲಯ ಆವರಣದಲ್ಲಿ ವ್ಯಕ್ತಿಯೋರ್ವರಿಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ನ್ಯಾಯಾಲಯದ ಆದೇಶದಂತೆ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.ಬೆಂಗಳೂರು ಮೂಲದ ಸತೀಶ್, ಸಂಜಯ್ ಹಾಗೂ ಅನಿತಾ ಸಂಜಯ್ ವಿರುದ್ದ ಪ್ರಕರಣ ದಾಖಲಾಗಿದೆ.ಮೈಸೂರಿನ ಕೆ.ಜಿ.ಕೊಪ್ಪಲಿನ ನಿವಾಸಿ ದಿನೇಶ್ ಎಂಬುವರು ಪ್ರಕರಣ ದಾಖಲಿಸಿದ್ದಾರೆ.

2018 ರಲ್ಲಿ ದಿನೇಶ್ ಎಕ್ಸಲೆಂಟ್ ಸೋಲಾರ್ಸ್ ಎಂಬ ಕಂಪನಿ ಪ್ರಾರಂಭಿಸಿದ್ದರು.ಪರಿಚಯಸ್ತರ ಮೂಲಕ ದಿನೇಶ್ ರವರಿಗೆ ಸಂಜಯ್ ಹಾಗೂ ಅನಿತಾ ಸಂಜಯ್ ಪರಿಚಯವಾಗಿದ್ದಾರೆ.ಸೋಲಾರ್ ಪವರ್ ಪ್ರಾಜೆಕ್ಟ್ ಆರಂಭಿಸಲು ದಿನೇಶ್ ಗೆ ಸಲಹೆ ನೀಡಿದ್ದಾರೆ.ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಅಗತ್ಯ ಅನುಮತಿ ಕೊಡಿಸುವ ಭರವಸೆ ಕೊಟ್ಟಿದ್ದಾರೆ.ಬಂಡವಾಳ ಹಾಕುವವರಿಗೆ ಪ್ರಾಜೆಕ್ಟ್ ಹಸ್ತಾಂತರವಾಗುತ್ತದೆ ಹಾಗೂ ಲಾಭಾಂಶ ಸಿಗುತ್ತದೆ ಎಂದು ತಿಳಿಸಿ ಹಲವು ದಾಖಲೆಗಳನ್ನ ತೋರಿಸಿದ್ದಾರೆ.ದಂಪತಿ ಮಾತನ್ನ ನಂಬಿದ ದಿನೇಶ್ ಕೆಲವರಿಂದ ಹಣ ಹೂಡಿಕೆ ಮಾಡಿಸಿದ್ದಾರೆ.ಸತೀಶ್ ರವರು ಎಮ್.ಓ.ಯು ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ದಂಪತಿ ವ್ಯವಹರಿಸಿದ್ದಾರೆ.ನಂತರ ದಿನೇಶ್ ರವರಿಗೆ ಗೊತ್ತಾಗಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ದಾಖಲೆಗಳು ನಕಲಿ ಎಂದು.ಈ ನಡುವೆ ಬಲವಂತವಾಗಿ ಎಮ್.ಓ.ಯು.ಮಾಡಿಸಿಕೊಂಡು ಸಹಿ ಹಾಕಿಸಿಕೊಂಡಿರುವುದಾಗಿ ಆರೋಪ ಬಂದಿದೆ.ಈ ಕುರಿತಂತೆ ಸತೀಶ್ ಮಂಗಳೂರಿನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ದಿನೇಶ್ ರವರು ಮೈಸೂರಿನ ನ್ಯಾಯಾಲಯಕ್ಕೆ ಬಂದಾಗ ಹಣ ಹಿಂದಿರುಗಿಸುವಂತೆ ಸತೀಶ್ ಧಂಕಿ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಎಪ್.ಐ.ಆರ್.ನಲ್ಲಿ ಉಲ್ಲೇಖಿಸಲಾಗಿದ್ದು ಸತೀಶ್, ಸಂಜಯ್ ಹಾಗೂ ಅನಿತಾ ಸಂಜಯ್ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ…

Spread the love

Related post

ಹವಾ ಕ್ರಿಯೇಟ್ ಮಾಡಲು ಮಹಿಳೆ ಮೇಲೆ ಹಲ್ಲೆ…ಭಯದ ವಾತಾವರಣ ಮೂಡಿಸಿದ ಇಬ್ಬರು ಯುವಕರ ವಿರುದ್ದ ಪ್ರಕರಣ ದಾಖಲು…

ಹವಾ ಕ್ರಿಯೇಟ್ ಮಾಡಲು ಮಹಿಳೆ ಮೇಲೆ ಹಲ್ಲೆ…ಭಯದ ವಾತಾವರಣ ಮೂಡಿಸಿದ ಇಬ್ಬರು…

ಮೈಸೂರು,ಮಾ12,Tv10 ಕನ್ನಡ ನಮಗೆ ಇಲ್ಲಿ ಯಾರೂ ಗೌರವ ಕೊಡುತ್ತಿಲ್ಲ,ನಮ್ಮನ್ನ ಕಂಡರೆ ಏರಿಯಾದಲ್ಲಿ ಯಾರಿಗೂ ಭಯವಿಲ್ಲ,ಒಂದು ಹೆಣ ಉರುಳಿಸಿದ್ರೆ ನಾವು ಏನೆಂದು ಗೊತ್ತಾಗುತ್ತೆ ಎಂದು ಹೇಳಿಕೊಂಡು ಏರಿಯಾದಲ್ಲಿ ಹವಾ ಕ್ರಿಯೇಟ್…
ನ್ಯಾಯಾಲಯವನ್ನೇ ಯಾಮಾರಿಸಿದ ಭೂಪರು…ಒಂದೇ ಸ್ವತ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಬಳಸಿ ವಂಚನೆ…ಇಬ್ಬರ ವಿರುದ್ದ FIR ದಾಖಲು…

ನ್ಯಾಯಾಲಯವನ್ನೇ ಯಾಮಾರಿಸಿದ ಭೂಪರು…ಒಂದೇ ಸ್ವತ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಬಳಸಿ…

ಮೈಸೂರು,ಮಾ12,Tv10 ಕನ್ನಡ ಜಾಮೀನು ನೀಡುವ ಸಮಯದಲ್ಲಿ ಒಂದೇ ಸ್ವತ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಗಳನ್ನ ಸಲ್ಲಿಸಿ ನ್ಯಾಯಾಲಯವನ್ನೇ ಯಾಮಾರಿಸಿದ ಇಬ್ಬರ ವಿರುದ್ದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ…
ಡೆವಿಲ್ ಸಿನಿಮಾ ಚಿತ್ರೀಕರಣ…ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಿತ್ರ…ನಾಡದೇವಿ ದರುಶನ ಪಡೆದ ಡಚ್ಚು…

ಡೆವಿಲ್ ಸಿನಿಮಾ ಚಿತ್ರೀಕರಣ…ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಿತ್ರ…ನಾಡದೇವಿ ದರುಶನ ಪಡೆದ…

ಮೈಸೂರು,ಮಾ12,Tv10 ಕನ್ನಡ ಇಂದಿನಿಂದ ಮೈಸೂರಿನಲ್ಲಿ ಮತ್ತೆ ದರ್ಶನ್ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ.ಮೈಸೂರಿನ ನಜರಬಾದ್ ನಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ಚಿತ್ರೀಕರಣ ಆರಂಭವಾಗಿದೆ.ಡೆವಿಲ್ ಚಿತ್ರದ ಶೂಟಿಂಗ್ ಗಾಗಿ ಡಿ ಬಾಸ್…

Leave a Reply

Your email address will not be published. Required fields are marked *