ಹವಾ ಕ್ರಿಯೇಟ್ ಮಾಡಲು ಮಹಿಳೆ ಮೇಲೆ ಹಲ್ಲೆ…ಭಯದ ವಾತಾವರಣ ಮೂಡಿಸಿದ ಇಬ್ಬರು ಯುವಕರ ವಿರುದ್ದ ಪ್ರಕರಣ ದಾಖಲು…

ಹವಾ ಕ್ರಿಯೇಟ್ ಮಾಡಲು ಮಹಿಳೆ ಮೇಲೆ ಹಲ್ಲೆ…ಭಯದ ವಾತಾವರಣ ಮೂಡಿಸಿದ ಇಬ್ಬರು ಯುವಕರ ವಿರುದ್ದ ಪ್ರಕರಣ ದಾಖಲು…

ಮೈಸೂರು,ಮಾ12,Tv10 ಕನ್ನಡ

ನಮಗೆ ಇಲ್ಲಿ ಯಾರೂ ಗೌರವ ಕೊಡುತ್ತಿಲ್ಲ,ನಮ್ಮನ್ನ ಕಂಡರೆ ಏರಿಯಾದಲ್ಲಿ ಯಾರಿಗೂ ಭಯವಿಲ್ಲ,ಒಂದು ಹೆಣ ಉರುಳಿಸಿದ್ರೆ ನಾವು ಏನೆಂದು ಗೊತ್ತಾಗುತ್ತೆ ಎಂದು ಹೇಳಿಕೊಂಡು ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡುವ ಉದ್ದೇಶದಿಂದ ಇಬ್ಬರು ಯುವಕರು ಮಹಿಳೆ ಹಾಗೂ ಓರ್ವ ವ್ಯಕ್ತಿ ಮೇಲೆ ಕಬ್ಬಿಣದ ರಾಡ್ ಹಾಗೂ ಕಲ್ಲಿನಿಂದ ಹಲ್ಲೆ ಮಾಡಿರುವ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಏಕಲವ್ಯನಗರದಲ್ಲಿ ನಡೆದಿದೆ.ಯುವಕರಿಂದ ಹಲ್ಲೆಗೊಳಗಾದವರು ಪದ್ಮ ಹಾಗೂ ನಾಗೇಂದ್ರ.ಹವಾ ಕ್ರಿಯೇಟ್ ಮಾಡುವ ಭರದಲ್ಲಿ ಹಲ್ಲೆ ನಡೆಸಿದವರು ಓಂಕಾರ್ ಹಾಗೂ ಗೌರೀಶ್.

ಪದ್ಮ ರವರ ಅಳಿಯ ಶ್ರೀಧರ್ ರವರನ್ನ ನಡುರಸ್ತೆಯಲ್ಲಿ ನಿಲ್ಲಿಸಿಕೊಂಡ ಓಂಕಾರ್ ಹಾಗೂ ಗೌರೀಶ್ ನಾವು ಓಡಾಡುವಾಗ ಗೌರವ ಕೊಡುತ್ತಿಲ್ಲ.ನಮ್ಮ ಬಗ್ಗೆ ನಿಮಗೆ ಭಯವಿಲ್ಲ ಎಂದು ಹೇಳುತ್ತಾ ಹಲ್ಲೆಗೆ ಮುಂದಾಗಿದ್ದಾರೆ.ಈ ವೇಳೆ ಪದ್ಮ ಮಧ್ಯ ಪ್ರವೇಶಿಸಿ ಅಳಿಯನನ್ನ ಬಿಡಿಸಿಕೊಳ್ಳಲು ಮುಂದಾಗಿದ್ದಾರೆ.ಒಂದು ಹೆಣ ಉರುಳಿದ್ರೆ ನಾವು ಈ ಏರಿಯಾದಲ್ಲಿ ಏನೆಂದು ಗೊತ್ತಾಗುತ್ತೆ ಎಂದು ಪದ್ಮ ಮೇಲೆ ರಾಡ್ ನಿಂದ ಬೀಸಿದ್ದಾರೆ.ನಂತರ ಕಲ್ಲನ್ನ ತೆಗೆದು ಕಾಲಿನ ಮೇಲೆ ಎತ್ತಿ ಹಾಕಿದ್ದಾರೆ.ಈ ವೇಳೆ ಪದ್ಮ ರವರ ಕಡೆಯವರು ಬಂದು ಜಗಳ ಬಿಡಿಸಿದ್ದಾರೆ.ನಂತರ ಮುಂದೆ ಓಡಿದ ಓಂಕಾರ್ ಹಾಗೂ ಗೌರೀಶ್ ಟೀ ಅಂಗಡಿಯ ಬಳಿ ಕುಳಿತಿದ್ದ ನಾಗೇಂದ್ರ ಎಂಬುವರ ಮೇಲೂ ಅಟ್ಯಾಕ್ ಮಾಡಿ ಒಬ್ಬರನ್ನ ಸಾಯಿಸಿ ಹೆಸರು ಮಾಡೋಣ ಎಂದು ಕಿರುಚಾಡಿ ಓಡಿದ್ದಾರೆ.ಏರಿಯಾದಲ್ಲಿ ಹೆಸರು ಮಾಡಬೇಕೆಂಬ ಉದ್ದೇಶದಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿರುವುದಾಗಿ ಆರೋಪಿಸಿ ಪದ್ಮ ರವರು ಓಂಕಾರ್ ಹಾಗೂ ಗೌರೀಶ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *