
ಹವಾ ಕ್ರಿಯೇಟ್ ಮಾಡಲು ಮಹಿಳೆ ಮೇಲೆ ಹಲ್ಲೆ…ಭಯದ ವಾತಾವರಣ ಮೂಡಿಸಿದ ಇಬ್ಬರು ಯುವಕರ ವಿರುದ್ದ ಪ್ರಕರಣ ದಾಖಲು…
- TV10 Kannada Exclusive
- March 12, 2025
- No Comment
- 25
ಮೈಸೂರು,ಮಾ12,Tv10 ಕನ್ನಡ
ನಮಗೆ ಇಲ್ಲಿ ಯಾರೂ ಗೌರವ ಕೊಡುತ್ತಿಲ್ಲ,ನಮ್ಮನ್ನ ಕಂಡರೆ ಏರಿಯಾದಲ್ಲಿ ಯಾರಿಗೂ ಭಯವಿಲ್ಲ,ಒಂದು ಹೆಣ ಉರುಳಿಸಿದ್ರೆ ನಾವು ಏನೆಂದು ಗೊತ್ತಾಗುತ್ತೆ ಎಂದು ಹೇಳಿಕೊಂಡು ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡುವ ಉದ್ದೇಶದಿಂದ ಇಬ್ಬರು ಯುವಕರು ಮಹಿಳೆ ಹಾಗೂ ಓರ್ವ ವ್ಯಕ್ತಿ ಮೇಲೆ ಕಬ್ಬಿಣದ ರಾಡ್ ಹಾಗೂ ಕಲ್ಲಿನಿಂದ ಹಲ್ಲೆ ಮಾಡಿರುವ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಏಕಲವ್ಯನಗರದಲ್ಲಿ ನಡೆದಿದೆ.ಯುವಕರಿಂದ ಹಲ್ಲೆಗೊಳಗಾದವರು ಪದ್ಮ ಹಾಗೂ ನಾಗೇಂದ್ರ.ಹವಾ ಕ್ರಿಯೇಟ್ ಮಾಡುವ ಭರದಲ್ಲಿ ಹಲ್ಲೆ ನಡೆಸಿದವರು ಓಂಕಾರ್ ಹಾಗೂ ಗೌರೀಶ್.
ಪದ್ಮ ರವರ ಅಳಿಯ ಶ್ರೀಧರ್ ರವರನ್ನ ನಡುರಸ್ತೆಯಲ್ಲಿ ನಿಲ್ಲಿಸಿಕೊಂಡ ಓಂಕಾರ್ ಹಾಗೂ ಗೌರೀಶ್ ನಾವು ಓಡಾಡುವಾಗ ಗೌರವ ಕೊಡುತ್ತಿಲ್ಲ.ನಮ್ಮ ಬಗ್ಗೆ ನಿಮಗೆ ಭಯವಿಲ್ಲ ಎಂದು ಹೇಳುತ್ತಾ ಹಲ್ಲೆಗೆ ಮುಂದಾಗಿದ್ದಾರೆ.ಈ ವೇಳೆ ಪದ್ಮ ಮಧ್ಯ ಪ್ರವೇಶಿಸಿ ಅಳಿಯನನ್ನ ಬಿಡಿಸಿಕೊಳ್ಳಲು ಮುಂದಾಗಿದ್ದಾರೆ.ಒಂದು ಹೆಣ ಉರುಳಿದ್ರೆ ನಾವು ಈ ಏರಿಯಾದಲ್ಲಿ ಏನೆಂದು ಗೊತ್ತಾಗುತ್ತೆ ಎಂದು ಪದ್ಮ ಮೇಲೆ ರಾಡ್ ನಿಂದ ಬೀಸಿದ್ದಾರೆ.ನಂತರ ಕಲ್ಲನ್ನ ತೆಗೆದು ಕಾಲಿನ ಮೇಲೆ ಎತ್ತಿ ಹಾಕಿದ್ದಾರೆ.ಈ ವೇಳೆ ಪದ್ಮ ರವರ ಕಡೆಯವರು ಬಂದು ಜಗಳ ಬಿಡಿಸಿದ್ದಾರೆ.ನಂತರ ಮುಂದೆ ಓಡಿದ ಓಂಕಾರ್ ಹಾಗೂ ಗೌರೀಶ್ ಟೀ ಅಂಗಡಿಯ ಬಳಿ ಕುಳಿತಿದ್ದ ನಾಗೇಂದ್ರ ಎಂಬುವರ ಮೇಲೂ ಅಟ್ಯಾಕ್ ಮಾಡಿ ಒಬ್ಬರನ್ನ ಸಾಯಿಸಿ ಹೆಸರು ಮಾಡೋಣ ಎಂದು ಕಿರುಚಾಡಿ ಓಡಿದ್ದಾರೆ.ಏರಿಯಾದಲ್ಲಿ ಹೆಸರು ಮಾಡಬೇಕೆಂಬ ಉದ್ದೇಶದಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿರುವುದಾಗಿ ಆರೋಪಿಸಿ ಪದ್ಮ ರವರು ಓಂಕಾರ್ ಹಾಗೂ ಗೌರೀಶ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…