ದರ್ಮಾಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 75.44 ಲಕ್ಷ ಉಂಡೆನಾಮ…ಮಾಜಿ ಸಿಇಓ ನಾರಾಯಣ ನಾಯ್ಕ ವಿರುದ್ದ FIR…

ದರ್ಮಾಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 75.44 ಲಕ್ಷ ಉಂಡೆನಾಮ…ಮಾಜಿ ಸಿಇಓ ನಾರಾಯಣ ನಾಯ್ಕ ವಿರುದ್ದ FIR…

ಹುಣಸೂರು,ಮಾ16,Tv10 ಕನ್ನಡ

ಹುಣಸೂರು ತಸಲೂಕು ಧರ್ಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 75.44 ಲಕ್ಷ ಹಣ ದುರುಪಯೋಗವಾಗಿರುವುದು ಬೆಳಕಿಗೆ ಬಂದಿದೆ.ಮಾಜಿ ಕಾರ್ಯನಿರ್ವಹಣಾಧಿಕಾರಿ ನಾರಾಯಣ ನಾಯ್ಕ ವಿರುದ್ದ ಹಾಲಿ ಸಿಇಓ ಬೀರಪ್ಪ ರವರು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

2022-23 ರ ಅವಧಿಯಲ್ಲಿ ಹಣ ದುರುಪಯೋಗವಾಗಿರುವುದು ಲೆಕ್ಕಪರಿಶೋಧನಾ ವೇಳೆ ತಿಳಿದುಬಂದಿದೆ.30-06-2023 ರಂದು ನಾರಾಯಣ ನಾಯ್ಕ ರವರು ನಿವೃತ್ತಿ ಹೊಂದಿದ್ದಾರೆ.ಸೂಕ್ತ ಲೆಕ್ಕಗಳನ್ನ ಪಾಲಿಸದೆ ಸಂಘಕ್ಕೆ 75,44,833/- ರೂಗಳನ್ನ ದುರುಪಯೋಗ ಮಾಡಿಕೊಂಡು ಸಂಘಕ್ಕೆ ನಷ್ಟ ಉಂಟು ಮಾಡಿದ್ದಾರೆಂದು ಆರೋಪಿಸಲಾಗಿದೆ.

ಸಾಲಗಾರರ ಲೆಡ್ಜರ್ ನಲ್ಲಿ ಹಣ ಪಾವತಿ ಆದಂತೆ ಹಾಗೂ ಮರುಪಾವತಿ ಆದಂತೆ ನಮೂದಿಸಿ ನಗದು ಪುಸ್ತಕದಲ್ಲಿ ಜಮಾ ಮಾಡದೆ ಇರುವುದು 67,95,266/- ರೂ ಇದೆ.

ಸದಸ್ಯರಿಗೆ ದಾಖಲಾತಿ ಇಲ್ಲದೆ ಸಾಲ ಮುಂಗಡ ಮಾಡಿರುವುದು 4,58,000/- ರೂ ಇದೆ

ಜಿಲ್ಲಾ ಬ್ಯಾಂಕ್ ಷೇರು ವೆತ್ಯಾಸ. 63,850/- ರೂ ಇದೆ

ಕೆಸಿಸಿ ಅಮಾನತ್ತು ಬಾಬ್ತಿಗೆ ಹೆಚ್ಚಿನ ಖರ್ಚು ತೋರಿಸಿರುವುದು 2,03,477/- ಇದೆ

ಶಿಲ್ಕು ವೆತ್ಯಾಸ 24,240/- ರೂಗಳಿವೆ

ಒಟ್ಟು ನಾರಾಯಣ ನಾಯ್ಕ ಅವಧಿಯಲ್ಲಿ 75,44,833/- ರೂಗಳ ಹಣ ದುರುಪಯೋಗವಾಗಿದೆ.ಈ ಸಂಭಂಧ ನಾರಾಯಣ ನಾಯ್ಕ ರವರನ್ನ ಪ್ರಶ್ನಿಸಿದಾಗ ಸಮಂಜಸ ಉತ್ತರ ಬಂದಿರುವುದಿಲ್ಲ.ಹೀಗಾಗಿ ಕೃಷಿಪತ್ತಿನ ಸಹಕಾರ ಸಂಘಗಳ ನಿಯಮಾನುಸಾರ ನಾರಾಯಣ ನಾಯ್ಕ ವಿರುದ್ದ FIR ದಾಖಲಿಸಲಾಗಿದೆ…

Spread the love

Related post

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು…ಕಾಯಿ ಕೀಳುವ ವೇಳೆ ದುರ್ಘಟನೆ…ಶಾಸಕ ದರ್ಶನ್ ದೃವನಾರಾಯಣ್ ಸಾಂತ್ವನ…

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು…ಕಾಯಿ ಕೀಳುವ ವೇಳೆ ದುರ್ಘಟನೆ…ಶಾಸಕ ದರ್ಶನ್…

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು…ಕಾಯಿ ಕೀಳುವ ವೇಳೆ ದುರ್ಘಟನೆ…ಶಾಸಕ ದರ್ಶನ್ ದೃವನಾರಾಯಣ್ ಸಾಂತ್ವನ… ನಂಜನಗೂಡು,ನ18,Tv10 ಕನ್ನಡ ತೆಂಗಿನಕಾಯಿ ಕೀಳುವ ವೇಳೆ ಆಯತಪ್ಪಿ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿದ…
ಪಾದಚಾರಿಗೆ ಬೈಕ್ ಡಿಕ್ಕಿ ಓರ್ವ ಸಾವು ಮತ್ತೊಬ್ಬನ ಸ್ಥಿತಿ ಗಂಭೀರ

ಪಾದಚಾರಿಗೆ ಬೈಕ್ ಡಿಕ್ಕಿ ಓರ್ವ ಸಾವು ಮತ್ತೊಬ್ಬನ ಸ್ಥಿತಿ ಗಂಭೀರ

ಪಾದಚಾರಿಗೆ ಬೈಕ್ ಡಿಕ್ಕಿ ಓರ್ವ ಸಾವು ಮತ್ತೊಬ್ಬನ ಸ್ಥಿತಿ ಗಂಭೀರ ಹನೂರು:- ಮಲೈ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನವು ಪಾದಚಾರಿಗೆ ಗುದ್ದಿದ್ದ ಪರಿಣಾಮ ಬೈಕ್…
ಕುರಿಹುಂಡಿ ಗ್ರಾ.ಪಂ.ಪಿಡಿಓ ಜ್ಯೋತಿ ಹಣದಾಹ…ದಾನ ಮಾಡಿದ ಪೀಠೋಪಕರಣಗಳಿಗೆ ಬಿಲ್…ಕ್ರಮ ಯಾವಾಗ…?

ಕುರಿಹುಂಡಿ ಗ್ರಾ.ಪಂ.ಪಿಡಿಓ ಜ್ಯೋತಿ ಹಣದಾಹ…ದಾನ ಮಾಡಿದ ಪೀಠೋಪಕರಣಗಳಿಗೆ ಬಿಲ್…ಕ್ರಮ ಯಾವಾಗ…?

ಕುರಿಹುಂಡಿ ಗ್ರಾ.ಪಂ.ಪಿಡಿಓ ಜ್ಯೋತಿ ಹಣದಾಹ…ದಾನ ಮಾಡಿದ ಪೀಠೋಪಕರಣಗಳಿಗೆ ಬಿಲ್…ಕ್ರಮ ಯಾವಾಗ…? ನಂಜನಗೂಡು,ನ16,Tv10 ಕನ್ನಡ ಅಂಗನವಾಡಿ ಕೇಂದ್ರಗಳಿಗೆ ದಾನವಾಗಿ ನೀಡಿದ ಪೀಠೋಪಕರಣಗಳಿಗೆ ಗ್ರಾಮ ಪಂಚಾಯ್ತಿ ಪಿಡಿಓ ಬಿಲ್ ರೈಸ್ ಮಾಡಿ…

Leave a Reply

Your email address will not be published. Required fields are marked *