
ಬೈಕ್ ಗೆ ಹೊಡೆದ ಖಾಸಗಿ ಬಸ್ ಢಿಕ್ಕಿ…ಬೈಕ್ ಸವಾರ ಸಾವು…
- Crime
- May 25, 2025
- No Comment
- 16
ಮಂಡ್ಯ,ಮೇ25,Tv10 ಕನ್ನಡ
ಖಾಸಗಿ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ದಾರುಣ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಅಗಸರಹಳ್ಳಿ ಬಳಿ ನಡೆದಿದೆ.ಬಸ್ ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ಬೈರಾಪುರ ಗ್ರಾಮದ ವೆಂಕಟೇಗೌಡ ಮೃತ ದುರ್ದೈವಿ.ಬೈಕ್ ನಲ್ಲಿ ಹೋಗುತ್ತಿದ್ದ ವೆಂಕಟೇಗೌಡಗೆ ವೇಗವಾಗಿ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಸವಾರನ ಮೇಲೆ ಬಸ್ ಚಕ್ರ ಹರಿದ ಪರಿಣಾಮ
ಸ್ಥಳದಲ್ಲೇ ವೆಂಕಟೇಗೌಡ ಮೃತಪಟ್ಟಿದ್ದಾರೆ.
ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…