ಜೆಕೆ ಟೈರ್ಸ್ ಕಾರ್ಮಿಕನ ಕಾಲು ಬೆರಳು ಕಟ್…ಕೆಲಸದ ವೇಳೆ ಘಟನೆ…ಮೂವರ ವಿರುದ್ದ ಪ್ರಕರಣ ದಾಖಲು…

ಜೆಕೆ ಟೈರ್ಸ್ ಕಾರ್ಮಿಕನ ಕಾಲು ಬೆರಳು ಕಟ್…ಕೆಲಸದ ವೇಳೆ ಘಟನೆ…ಮೂವರ ವಿರುದ್ದ ಪ್ರಕರಣ ದಾಖಲು…

  • Crime
  • June 10, 2025
  • No Comment
  • 151

ಮೈಸೂರು,ಜೂ10,Tv10 ಕನ್ನಡ

ಕೆಲಸ ನಿರ್ವಹಿಸುತ್ತಿದ್ದ ವೇಳೆ ಕಾರ್ಮಿಕನ ಕಾಲಿನ ಮೂರು ಬೆರಳು ಕಟ್ ಆದ ಘಟನೆ ಮೈಸೂರಿನ ಜೆಕೆ ಫ್ಯಾಕ್ಟರಿಯಲ್ಲಿ ನಡೆದಿದೆ.ಫ್ಯಾಕ್ಟರಿಯ ವಿಭಾಗದ ಮೂವರು ಮುಖ್ಯಸ್ಥರ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೂಕ್ತ ತರಬೇತಿ ನೀಡದೆ ಅನುಭವ ಇಲ್ಲದ ವಿಭಾಗದಲ್ಲಿ ಬಲವಂತವಾಗಿ ಕೆಲಸ ಮಾಡಿಸಿರುವುದಾಗಿ ಆರೋಪಿಸಿ ಗಾಯಗೊಂಡ ಕಾರ್ಮಿಕನ ಪತ್ನಿ ಮೂವರು ಮುಖ್ಯಸ್ಥರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಸೂಪರ್ ವೈಸರ್ ನಾಗರಾಜು,ಮ್ಯಾನೇಜರ್ ಆನಂದ್ ಹಾಗೂ ಪ್ರೊಡಕ್ಷನ್ ಇನ್ಚಾರ್ಜ್ ರಾಜೀವ್ ಕುಮಾರ್ ವಿರುದ್ದ ಪ್ರಕರಣ ದಾಖಲಾಗಿದೆ.25 ವರ್ಷಗಳಿಂದ ಕೆಲಸ ಮಾಡುತ್ತಿರುವ ಜಯೇಶ್ ಎಂಬುವರು ಗಾಯಗೊಂಡವರು.

ರಾತ್ರಿಪಾಳಿಯಲ್ಲಿ 10TK ದೋಷಪೂರಿತ ಮೆಷಿನ್ ನಲ್ಲಿ ಕೆಲಸ ಮಾಡುವಾಗಿ ಎಡಗಾಲಿನ ಮೂರು ಬೆರಳುಗಳು ಕಟ್ ಆಗಿದೆ.25 ವರ್ಷದಿಂದ ಕೆಲಸ ಮಾಡುತ್ತಿದ್ದ ಜಯೇಶ್ ರವರನ್ನ ಕಾರಣ ನೀಡದೆ ಕೆಲಸದಿಂದ ತೆಗೆದುಹಾಕಿದ್ದರು.ಈ ಬಗ್ಗೆ ಪ್ರಶ್ನಿಸಿ ಜಯೇಶ್ ಕಾರ್ಮಿಕ ನ್ಯಾಯಾಲಯ ಮೆಟ್ಟಲೇರಿದ್ದರು.ಜಯೇಶ್ ರವರನ್ನ ಪುನರ್ ನೇಮಕ ಮಾಡಿಕೊಳ್ಳುವಂತೆ ಕಾರ್ಮಿಕ ನ್ಯಾಯಾಲಯ ಆದೇಶಿಸಿತ್ತು.ನ್ಯಾಯಾಲಯದ ಆದೇಶದಂತೆ ನೇಮಕ ಮಾಡಿಕೊಂಡ ಫ್ಯಾಕ್ಟರಿ ಈ ಹಿಂದೆ ಕೆಲಸ ಮಾಡುತ್ತಿದ್ದ ವಿಭಾಗದಲ್ಲಿ ಅವಕಾಶ ನೀಡದೆ ಮತ್ತೊಂದು ವಿಭಾಗದಲ್ಲಿ ನೇಮಕ ಮಾಡಿತ್ತು.ಆ ವಿಭಾಗದಲ್ಲಿ ಕೆಲಸ ಮಾಡಲು ಸೂಕ್ತ ತರಬೇತಿ ನೀಡದೆ ಬಲವಂತವಾಗಿ ಕೆಲಸ ಮಾಡುವಂತೆ ಮೂವರು ಒತ್ತಾಯ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದರೆಂದು ಜಯೇಶ್ ರವರ ಪತ್ನಿ ಜ್ಯೋತಿ ಆರೋಪಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು… ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *