
ಹಾಡು ಹಗಲು ರಸ್ತೆಯಲ್ಲಿ ಗಜರಾಜನ ಬಿಂದಾಸ್ ವಾಕ್… ಗ್ರಾಮಸ್ಥರಲ್ಲಿ ಆತಂಕ…
- TV10 Kannada Exclusive
- June 13, 2025
- No Comment
- 8

ಹಾಡು ಹಗಲು ರಸ್ತೆಯಲ್ಲಿ ಗಜರಾಜನ ಬಿಂದಾಸ್ ವಾಕ್… ಗ್ರಾಮಸ್ಥರಲ್ಲಿ ಆತಂಕ…
ವಿರಾಜಪೇಟೆ,ಜೂ13,Tv10 ಕನ್ನಡ
ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟ ಗಜರಾಜ ರಸ್ತೆಯಲ್ಲಿ ಸಂಚರಿಸಿ ಭಯದ ವಾತಾವರಣ ಮೂಡಿಸಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆಯ ಒಂದನೇ ರುದ್ರಗುಪ್ಪೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆಟ್ರಂಗಡರವರ ಮನೆಗೆ ತೆರಳುವ ಸಂಪರ್ಕ ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿ ಸಂಚರಿಸಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಮಾಡಿದೆ. ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ಕಾಫಿ ಗಿಡಗಳು ಸೇರಿದಂತೆ ಇತರ ಫಲ ನೀಡುವ ಬಾಳೆ ತೆಂಗು ಗಿಡಗಳನ್ನು ನಾಶ ಮಾಡಿದೆ.
ಸನೀಹದ ಬಿ.ಶೆಟ್ಟಿಗೇರಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ರುದ್ರಗುಪ್ಪೆ ಗ್ರಾಮದ ತೋಟಗಳಿಗೆ ಲಗ್ಗೆ ಇಟ್ಟಿವೆ.
ತೋಟಗಳಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ…