
ಕಾವೇರಿ ಆರತಿ,ಅಮ್ಯೂಸ್ ಮೆಂಟ್ ಪಾರ್ಕ್ ಗೆ ವಿರೋಧ…ರೈತರ ಪ್ರತಿಭಟನೆ…
- TV10 Kannada Exclusive
- June 12, 2025
- No Comment
- 12



ಮಂಡ್ಯ,ಜೂ12,Tv10 ಕನ್ನಡ
ಕೆಆರ್ ಎಸ್ ನಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ರೈತ ಸಂಘದಿಂದ ಬೃಹತ್ ಪ್ರತಿಭಟನೆ ನಡೆದಿದೆ.
ಕೆಆರ್ ಎಸ್ ಬೃಂದಾವನದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ವಿರೋಧದ ನಡುವೆಯೂ ಕಾವೇರಿ ಆರತಿಗೆ ಸರ್ಕಾರ ಸಿದ್ದತೆ ನಡೆಸುತ್ತಿರದೆ.
ಬೃಂದಾವನದ ಬೋಟಿಂಗ್ ಪಾಯಿಂಟ್ ಬಳಿ ಆರತಿಗೆ ಸಿದ್ದತೆ ಮಾಡಲಾಗುತ್ತಿದೆ.
ಸರ್ಕಾರದ ನಡೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಕಾವೇರಿ ಆರತಿ ಯೋಜನೆ ಕೈಬಿಡಬೇಕು.
ಈ ಯೋಜನೆಯಿಂದ ಐತಿಹಾಸಿಕ ಕೆಆರ್ ಎಸ್ ಡ್ಯಾಂಗೆ ಮಾರಕ ಎಂದು ಆರೋಪಿಸಿದ್ದಾರೆ.
ಶಾಸಕ ಗಣಿಗ ರವಿಕುಮಾರ್ ವಿರುದ್ದ ಪ್ರತಿಭಟನಾಕಾರರ ಸಿಡಿದೆದ್ದಿದ್ದಾರೆ.
ಕಾವೇರಿ ಆರತಿ, ಅಮ್ಯೂಸ್ಮೆಂಟ್ ಪಾರ್ಕ್ ಮಾಡೇ ಮಾಡ್ತೀವಿ ಎಂದು ಸವಾಲ್ ಹಾಕಿರುವ
ಗಣಿಗ ರವಿಕುಮಾರ್ ಗೆ ಕಿವಿಮಾತು ಹೇಳಿದ್ದಾರೆ. ನೀವು ಹೇಳ್ತಿರೋದು ಸರಿಯಲ್ಲ.ರೈತರು ಎದ್ದರೇ ನಿಮಗೆ ಮಂಗಳಾರತಿ ಆಗುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇದೇ ವೇಳೆ ಡಿಕೆಶಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲ್ತುಳಿತ ಪ್ರಕರಣಕ್ಕೆ ಸಿಎಂ,ಡಿಸಿಎಂ ಕಾರಣ.
ಸಹೋದರ ಸೋತಿದ್ರಿಂದ ಡಿಕೆಶಿಗೆ ಹುಚ್ಚು ಬಂದಿದೆ.
30 ವರ್ಷ ರಜೆಯನ್ನೆ ಹಾಕದ ಐಪಿಎಸ್ ಅಧಿಕಾರಿ ದಯಾನಂದ್ ರನ್ನ ಸಸ್ಪೆಂಡ್ ಮಾಡ್ತೀರಾ?.
ನಿಮ್ಮ ವಂಶಗಳೆಲ್ಲ ನಿರ್ನಾಮವಾಗುತ್ತೆ ಎಂದು ರಾಜಕಾರಣಿಗಳ ವಿರುದ್ದ ಸಾಹಿತಿ ಹರಿಹರ ಪ್ರಿಯ ವಾಗ್ದಾಳಿ ನಡೆಸಿದರು…