ಕಂದಾಯ ಅಧಿಕಾರಿ ಮೇಲೆ ಹಲ್ಲೆ ಯತ್ನ…ಕಚೇರಿ ಗಾಜು ಪುಡಿ ಮಾಡಿ ಪುಂಡಾಟ…ಇಬ್ಬರ ವಿರುದ್ದ FIR…

ಕಂದಾಯ ಅಧಿಕಾರಿ ಮೇಲೆ ಹಲ್ಲೆ ಯತ್ನ…ಕಚೇರಿ ಗಾಜು ಪುಡಿ ಮಾಡಿ ಪುಂಡಾಟ…ಇಬ್ಬರ ವಿರುದ್ದ FIR…

ಮೈಸೂರು,ಜೂ19,Tv10 ಕನ್ನಡ

ವಿವಾದಿತ ಸ್ಥಳದ ಅಳತೆ ಮಾಡುವ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳು ಕಚೇರಿಗೆ ನುಗ್ಗಿ ಕಂದಾಯ ಇಲಾಖೆ ಅಧಿಕಾರಿ ಮೇಲೆ ಹಲ್ಲೆ ಯತ್ನ ನಡೆಸಿದ್ದಲ್ಲದೆ ಕಚೇರಿ ಗಾಜು ಪುಡಿ ಮಾಡಿದ ಘಟನೆ ಮೈಸೂರಿನ ಹೂಟಗಳ್ಳಿ ನಗರಸಭೆ ಕಚೇರಿಯಲ್ಲಿ ನಡೆದಿದೆ.ಈ ಸಂಭಂಧ ಕಂದಾಯ ಅಧಿಕಾರಿ ನಂಜುಂಡಸ್ವಾಮಿ ರವರು ಪಾರ್ಥಸಾರಥಿ ಹಾಗೂ ಲ್ಯಾವಿಶ್ ಎಂಬುವರ ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಹಿಳೆಯೊಬ್ಬರು ಸಾರ್ವಜನಿಕ ಸ್ಥಳವನ್ನ ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿದ ಆರೋಪದ ಮೇಲೆ ಪಾರ್ಥಸಾರಥಿ ರವರು ಅಳತೆ ಮಾಡಿ ಕ್ರಮ ಕೈಗೊಳ್ಳುವಂತೆ ಹೂಟಗಳ್ಳಿ ನಗರಸಭೆ ಕಚೇರಿಯಲ್ಲಿ ದೂರು ನೀಡಿದ್ದರು.ಈ ಸಂಭಂಧ ಪಾರ್ಥಸಾರತಿ ಕಚೇರಿಗೆ ಬಂದು ಅಳತೆ ಮಾಡುವಂತೆ ಒತ್ತಾಯಿಸಿದರು.ಈ ವೇಳೆ ಕಂದಾಯ ಅಧಿಕಾರಿ ನಂಜುಂಡಸ್ವಾಮಿಗೆ ಏರುಧ್ವನಿಯಲ್ಲಿ ಧಂಕಿ ಹಾಕಿ ಸಿಬ್ಬಂದಿಗಳ ಸಮ್ಮುಖದಲ್ಲೇ ಹಲ್ಲೆ ನಡೆಸಲು ಯತ್ನಿಸಿದ್ದಾರೆ.ಕಚೇರಿ ಸಿಬ್ಬಂದಿಗಳು ನಂಜುಂಡಸ್ವಾಮಿ ನೆರವಿಗೆ ಬಂದಿದ್ದಾರೆ.ಧಂಕಿ ಹಾಕಿದ ಪಾರ್ಥಸಾರಥಿ ಹಾಗೂ ಇವರ ಜೊತೆ ಬಂದಿದ್ದ ಲ್ಯಾವಿಶ್ ರವರು ಕಚೇರಿ ಗಾಜು ಪುಡಿ ಮಾಡಿ ಪುಂಡಾಟ ನಡೆಸಿದ್ದಾರೆ.ಕರ್ತವ್ಯಕ್ಕೆ ಅಡ್ಡಿಪಡಿಸಿ ಪುಂಡಾಟ ನಡೆಸಿದ ಇಬ್ಬರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನಂಜುಂಡಸ್ವಾಮಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಗ್ರಾಮದೇವತೆ ಜಾತ್ರೆ ವಿಡಿಯೋ ಮಾಡಿದ್ರೆ ಹುಷಾರ್…30 ಸಾವಿರ ದಂಡ ಎಚ್ಚರಿಕೆ…ಡಂಗುರ ಸಾರಿ ಪ್ರಚಾರ…

ಗ್ರಾಮದೇವತೆ ಜಾತ್ರೆ ವಿಡಿಯೋ ಮಾಡಿದ್ರೆ ಹುಷಾರ್…30 ಸಾವಿರ ದಂಡ ಎಚ್ಚರಿಕೆ…ಡಂಗುರ ಸಾರಿ…

ಗ್ರಾಮದೇವತೆ ಜಾತ್ರೆ ವಿಡಿಯೋ ಮಾಡಿದ್ರೆ ಹುಷಾರ್…30 ಸಾವಿರ ದಂಡ ಎಚ್ಚರಿಕೆ…ಡಂಗುರ ಸಾರಿ ಪ್ರಚಾರ… ನಂಜನಗೂಡು,ಫೆ9,Tv10 ಕನ್ನಡ ಗ್ರಾಮದೇವತೆ ಜಾತ್ರೇಲಿ ಕುಡಿದು ಗಲಾಟೆ ಮಾಡಿದ್ರೆ,ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ರೆ 30…
ಅಂಬಿಕಾಪುರ ಗ್ರಾಮದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆ.

ಅಂಬಿಕಾಪುರ ಗ್ರಾಮದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ…

ಅಂಬಿಕಾಪುರ ಗ್ರಾಮದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆ. ಹನೂರು Tv10 ಕನ್ನಡ07/02/2026. ಹನೂರು :ರೈತಾಪಿ ವರ್ಗದ ಜನರು…
ಭೂಗಳ್ಳರಿಗೆ ಬಿಸಿ…ಜೆಸಿಬಿ ಘರ್ಜನೆ…140 ಕೋಟಿ ಮೌಲ್ಯದ ಆಸ್ತಿ ಮೈಸೂರು ಅಭಿವೃದ್ದಿ ಪ್ರಾಧಿಕಾರದ ವಶಕ್ಕೆ…

ಭೂಗಳ್ಳರಿಗೆ ಬಿಸಿ…ಜೆಸಿಬಿ ಘರ್ಜನೆ…140 ಕೋಟಿ ಮೌಲ್ಯದ ಆಸ್ತಿ ಮೈಸೂರು ಅಭಿವೃದ್ದಿ ಪ್ರಾಧಿಕಾರದ…

ಭೂಗಳ್ಳರಿಗೆ ಬಿಸಿ…ಜೆಸಿಬಿ ಘರ್ಜನೆ…140 ಕೋಟಿ ಮೌಲ್ಯದ ಆಸ್ತಿ ಮೈಸೂರು ಅಭಿವೃದ್ದಿ ಪ್ರಾಧಿಕಾರದ ವಶಕ್ಕೆ… ಮೈಸೂರು,ಫೆ7,Tv10 ಕನ್ನಡ ಬೆಳ್ಳಬೆಳಗ್ಗೆ ಮೈಸೂರು ಅಭಿವೃದ್ದ ಪ್ರಾಧಿಕಾರ ಭೂಗಳ್ಳರಿಗೆ ಬಿಸಿ ಮುಟ್ಟಿಸಿದೆ.ಮೈಸೂರು ತಾಲೂಕು ಕಸಬ…

Leave a Reply

Your email address will not be published. Required fields are marked *