
ಕಂದಾಯ ಅಧಿಕಾರಿ ಮೇಲೆ ಹಲ್ಲೆ ಯತ್ನ…ಕಚೇರಿ ಗಾಜು ಪುಡಿ ಮಾಡಿ ಪುಂಡಾಟ…ಇಬ್ಬರ ವಿರುದ್ದ FIR…
- TV10 Kannada Exclusive
- June 19, 2025
- No Comment
- 88




ಮೈಸೂರು,ಜೂ19,Tv10 ಕನ್ನಡ
ವಿವಾದಿತ ಸ್ಥಳದ ಅಳತೆ ಮಾಡುವ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳು ಕಚೇರಿಗೆ ನುಗ್ಗಿ ಕಂದಾಯ ಇಲಾಖೆ ಅಧಿಕಾರಿ ಮೇಲೆ ಹಲ್ಲೆ ಯತ್ನ ನಡೆಸಿದ್ದಲ್ಲದೆ ಕಚೇರಿ ಗಾಜು ಪುಡಿ ಮಾಡಿದ ಘಟನೆ ಮೈಸೂರಿನ ಹೂಟಗಳ್ಳಿ ನಗರಸಭೆ ಕಚೇರಿಯಲ್ಲಿ ನಡೆದಿದೆ.ಈ ಸಂಭಂಧ ಕಂದಾಯ ಅಧಿಕಾರಿ ನಂಜುಂಡಸ್ವಾಮಿ ರವರು ಪಾರ್ಥಸಾರಥಿ ಹಾಗೂ ಲ್ಯಾವಿಶ್ ಎಂಬುವರ ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆಯೊಬ್ಬರು ಸಾರ್ವಜನಿಕ ಸ್ಥಳವನ್ನ ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿದ ಆರೋಪದ ಮೇಲೆ ಪಾರ್ಥಸಾರಥಿ ರವರು ಅಳತೆ ಮಾಡಿ ಕ್ರಮ ಕೈಗೊಳ್ಳುವಂತೆ ಹೂಟಗಳ್ಳಿ ನಗರಸಭೆ ಕಚೇರಿಯಲ್ಲಿ ದೂರು ನೀಡಿದ್ದರು.ಈ ಸಂಭಂಧ ಪಾರ್ಥಸಾರತಿ ಕಚೇರಿಗೆ ಬಂದು ಅಳತೆ ಮಾಡುವಂತೆ ಒತ್ತಾಯಿಸಿದರು.ಈ ವೇಳೆ ಕಂದಾಯ ಅಧಿಕಾರಿ ನಂಜುಂಡಸ್ವಾಮಿಗೆ ಏರುಧ್ವನಿಯಲ್ಲಿ ಧಂಕಿ ಹಾಕಿ ಸಿಬ್ಬಂದಿಗಳ ಸಮ್ಮುಖದಲ್ಲೇ ಹಲ್ಲೆ ನಡೆಸಲು ಯತ್ನಿಸಿದ್ದಾರೆ.ಕಚೇರಿ ಸಿಬ್ಬಂದಿಗಳು ನಂಜುಂಡಸ್ವಾಮಿ ನೆರವಿಗೆ ಬಂದಿದ್ದಾರೆ.ಧಂಕಿ ಹಾಕಿದ ಪಾರ್ಥಸಾರಥಿ ಹಾಗೂ ಇವರ ಜೊತೆ ಬಂದಿದ್ದ ಲ್ಯಾವಿಶ್ ರವರು ಕಚೇರಿ ಗಾಜು ಪುಡಿ ಮಾಡಿ ಪುಂಡಾಟ ನಡೆಸಿದ್ದಾರೆ.ಕರ್ತವ್ಯಕ್ಕೆ ಅಡ್ಡಿಪಡಿಸಿ ಪುಂಡಾಟ ನಡೆಸಿದ ಇಬ್ಬರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನಂಜುಂಡಸ್ವಾಮಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…