
KSIC ಸಂಸ್ಥೆಗೆ ವಂಚನೆ…ಕಾಳಿದಾಸ ರಸ್ತೆ ಶೋರೂಂ ಉಸ್ತುವಾರಿ ಸೇರಿದಂತೆ 8 ಮಂದಿ ವಿರುದ್ದ FIR…18.75 ಲಕ್ಷ ದುರುಪಯೋಗ ಆರೋಪ…
- TV10 Kannada Exclusive
- June 19, 2025
- No Comment
- 68

KSIC ಸಂಸ್ಥೆಗೆ ವಂಚನೆ…ಕಾಳಿದಾಸ ರಸ್ತೆ ಶೋರೂಂ ಉಸ್ತುವಾರಿ ಸೇರಿದಂತೆ 8 ಮಂದಿ ವಿರುದ್ದ FIR…18.75 ಲಕ್ಷ ದುರುಪಯೋಗ ಆರೋಪ…
ಮೈಸೂರು,ಜೂ18,Tv10 ಕನ್ನಡ
ಕಾಳಿದಾಸ ರಸ್ತೆಯಲ್ಲಿರುವ KSIC ಸಂಸ್ಥೆಗೆ 18.75 ಲಕ್ಷ ಹಣ ದುರುಪಯೋಗ ಮಾಡಿದ ಆರೋಪದ ಮೇಲೆ ಉಸ್ತುವಾರಿ ಸೇರಿದಂತೆ 8 ಮಂದಿ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಕೆ.ಎಸ್.ಐ.ಸಿ ಕಾರ್ಖಾನೆ ವ್ಯವಸ್ಥಾಪಕರಾದ ಸಿದ್ದಲಿಂಗ ಪ್ರಸಾದ್ ರವರು ಶಾಖೆಯ ಉಸ್ತುವಾರಿ ಯಶವಂತ್ ಕುಮಾರ್,ಸೇಲ್ಸ್ ಮನ್ ಗಳಾದ ರೇವಂತ್ ಕುಮಾರ್,ಪ್ರತಿಮಾ,ಶೋಭಾ,ಅಮ್ಜದ್ ಅಹಮದ್,ಮಹಮದ್ ಅಮೀರ್ ಹಾಗೂ ಅನು ಎಂಬುವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.02-09-2024 ರಿಂದ 31-05-2025 ರ ಅವಧಿಯಲ್ಲಿ ಒಟ್ಟು 18,75,100/- ಹಣ ದುರುಪಯೋಗ ಮಾಡಿಕೊಂಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.ಸರ್ಕಾರಿ ನೌಕರ ಗ್ರಾಹಕರಿಗೆ ಸಾಲ ನೀಡಲಾಗಿದ್ದು ನಕಲಿ ರಸೀತಿಗಳನ್ನ ಸೃಷ್ಟಿಸಿ ಸಂಸ್ಥೆಗೆ ವಂಚನೆ ಮಾಡಿರುವುದಾಗಿ ಆರೋಪಿಸಲಾಗಿದೆ…