11ಇ ಸ್ಕೆಚ್ ವಿತರಿಸುವಲ್ಲಿ ಗೋಲ್ ಮಾಲ್…ಲೈಸೆನ್ಸ್ ಸರ್ವೆಯರ್ AT ನಾಗರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕಿ ರಮ್ಯಾ ರಿಂದ ಆದೇಶ…

11ಇ ಸ್ಕೆಚ್ ವಿತರಿಸುವಲ್ಲಿ ಗೋಲ್ ಮಾಲ್…ಲೈಸೆನ್ಸ್ ಸರ್ವೆಯರ್ AT ನಾಗರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕಿ ರಮ್ಯಾ ರಿಂದ ಆದೇಶ…

11ಇ ಸ್ಕೆಚ್ ವಿತರಿಸುವಲ್ಲಿ ಗೋಲ್ ಮಾಲ್…ಲೈಸೆನ್ಸ್ ಸರ್ವೆಯರ್ AT ನಾಗರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕಿ ರಮ್ಯಾ ರಿಂದ ಆದೇಶ

ಮೈಸೂರು,ಜು29,Tv10 ಕನ್ನಡ

ರಸ್ತೆ ಮತ್ತು ಮನೆಗಳಿರುವ ಜಾಗಕ್ಕೆ 11ಇ ಸ್ಕೆಚ್ ವಿತರಿಸಿ ಅಕ್ರಮವೆಸಗಿದ ಆರೋಪ ಸಾಬೀತಾದ ಹಿನ್ನಲೆ ಲೈಸೆನ್ಸ್ ಸರ್ವೆಯರ್ ಎ.ಟಿ.ನಾಗರಾಜ್ ರನ್ನ ಅಮಾನತುಪಡಿಸಲಾಗಿದೆ.ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರಾದ ರಮ್ಯಾ ರವರು ಆದೇಶ ಹೊರಡಿಸಿದ್ದಾರೆ.ಈ ಸಂಭಂಧ ಶ್ರೀ ಚಾಮುಂಡೇಶ್ವರಿ ರೆವಿನ್ಯೂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ದೂರು ನೀಡಿ ನ್ಯಾಯ ಒದಗಿಸುವಂತೆ ಪತ್ರ ಬರೆದಿದ್ದರು.ದಾಖಲೆಗಳನ್ನ ಪರಿಶೀಲಿಸಿದಾಗ 11ಇ ಸ್ಕೆಚ್ ವಿತರಿಸುವ ವೇಳೆ ಲೈಸೆನ್ಸ್ ಸರ್ವೆಯರ್ ಎಟಿ ನಾಗರಾಜ್ ಅಕ್ರಮ ಎಸಗಿರುವುದು ಖಚಿತವಾದ ಹಿನ್ನಲೆ ಅಮಾನತು ಆದೇಶ ಹೊರಡಿಸಲಾಗಿದೆ.

ಮೈಸೂರು ಜಿಲ್ಲೆ ಕಸಬಾ ಹೋಬಳಿ ಶ್ಯಾದನಹಳ್ಳಿ ಗ್ರಾಮದ ಸರ್ವೆ ನಂ 72/1 ಹಾಗೂ 72/11 ರ ಜಮೀನು ಮಾಲೀಕರಾದ ಪುಟ್ಟಪ್ಪ ಎಂಬುವರು ರೆವಿನ್ಯೂ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ.ಕ್ರಯಪತ್ರ ಪಡೆದವರು ಗ್ರಾಮ ಪಂಚಾಯ್ತಿಯಲ್ಲಿ ಖಾತೆ ಮಾಡಿಸಿಕೊಂಡು ಮನೆಗಳನ್ನ ನಿರ್ಮಿಸಿ ವಾಸವಿದ್ದಾರೆ.ಪುಟ್ಟಪ್ಪ ರವರು ಮರಣಹೊಂದಿದ ನಂತರ ಅವರ ಮಕ್ಕಳು ಪೌತಿಖಾತೆ ಮಾಡಿಸಿಕೊಂಡು ಮನೆಗಳಲ್ಲಿ ವಾಸವಿರುವ ಜನರಿಗೆ ತೊಂದರೆ ಕೊಡುತ್ತಿದ್ದಾರೆ.MR/H3/28-7-2022 ನ್ನು ರದ್ದುಪಡಿಸಿ ಕೊಡಬೇಕು ಹಾಗೂ ಮನೆಗಳಿರುವ ಜಾಗಕ್ಕೆ ಅಕ್ರಮವಾಗಿ ತತ್ಕಾಲ್ ಪೋಡಿ ಮಾಡಿ ಸರ್ವೆ ನಂ.72/11 ರಿಂದ 72/20 ಎಂದು 5 1/4 ಗುಂಟೆ ಪ್ರದೇಶಕ್ಕೆ ಮಾಡಿರುವ ಪೋಡಿಯನ್ನ ರದ್ದುಪಡಿಸಿ ಎಡಿಎಲ್ ಆರ್ ಸರ್ವೆಯರ್ ಎ.ಟಿ.ನಾಗರಾಜ್ ಹಾಗೂ ಆರ್.ಐ.ಮತ್ತು ವಿಎ ಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸಂಘ ದೂರು ನೀಡಿದೆ.

ದೂರಿನ ಅನ್ವಯದಂತೆ ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ಮಂಜುನಾಥ್ ರವರು ದಾಖಲೆಗಳನ್ನ ಪರಿಶೀಲಿಸಿದಾಗ ಸಾರ್ವಜನಿಕರು ಓಡಾಡುವ ರಸ್ತೆ ಹಾಗೂ ಮನೆಗಳಿರುವ ಜಾಗ 5 1/4 ಗುಂಟೆ ಪ್ರದೇಶಕ್ಕೆ ಅಕ್ರಮವಾಗಿ 11ಇ ಸ್ಕೆಚ್ ವಿತರಿಸಿರುವುದು ಕಂಡುಬಂದಿದೆ.ಮಂಜುನಾಥ್ ರವರು ನೀಡಿದ ವರದಿ ಅನ್ವಯದಂತೆ ಅಕ್ರಮ ಎಸಗಿದ ಲೈಸೆನ್ಸ್ ಸರ್ವೆಯರ್ ಎ.ಟಿ.ನಾಗರಾಜ್ ರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ…

Spread the love

Related post

ಬೆಳ್ಳಿ ಆಭರಣ ತಯಾರಿಸುವ ಘಟಕದಲ್ಲಿ ದರೋಡೆ…ಭದ್ರತಾ ಸಿಬ್ಬಂದಿಗಳನ್ನ ಕಟ್ಟಿಹಾಕಿ ಕೃತ್ಯ…10 ಕೆಜಿ ಬೆಳ್ಳಿ ಕಳುವು…

ಬೆಳ್ಳಿ ಆಭರಣ ತಯಾರಿಸುವ ಘಟಕದಲ್ಲಿ ದರೋಡೆ…ಭದ್ರತಾ ಸಿಬ್ಬಂದಿಗಳನ್ನ ಕಟ್ಟಿಹಾಕಿ ಕೃತ್ಯ…10 ಕೆಜಿ…

ಮೈಸೂರು,ಜು29,Tv10 ಕನ್ನಡ ಬೆಳ್ಳಿ ಪದಾರ್ಥಗಳನ್ನ ತಯಾರಿಸುವ ಘಟಕಕ್ಕೆ ನುಗ್ಗಿದ ದರೋಡೆಕೋರರು ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ಸುಮಾರು 10 ಕೆ.ಜಿ. ಬೆಳ್ಳಿ ಆಭರಣ ದೋಚಿ ಪರಾಕಿಯಾಗಿರುವ ಘಟನೆ ಮೈಸೂರಿನ…
ADGP ಬಿ.ದಯಾನಂದ್ ಹಾಗೂ ಎಸ್ಪಿ ಟಿ.ಶೇಖರ್ ಮೇಲಿನ ಅಮಾನತು ಆದೇಶ ಹಿಂಪಡೆದ ಸರ್ಕಾರ…

ADGP ಬಿ.ದಯಾನಂದ್ ಹಾಗೂ ಎಸ್ಪಿ ಟಿ.ಶೇಖರ್ ಮೇಲಿನ ಅಮಾನತು ಆದೇಶ ಹಿಂಪಡೆದ…

ಬೆಂಗಳೂರು,ಜು28,Tv10 ಕನ್ನಡ ಎಡಿಜಿಪಿ ಬಿ.ದಯಾನಂದ್ ಹಾಗೂ ಎಸ್ಪಿ ಟಿ.ಶೇಖರ್ ಮೇಲಿನ ಅಮಾನತು ಆದೇಶವನ್ನ ಸರ್ಕಾರ ಹಿಂಪಡೆದಿದೆ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನ ಸರ್ಕಾರ…
ಎನ್.ಆರ್.ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಗೆ ಬಿಗ್ ರಿಲೀಫ್…ಅಮಾನತು ಆದೇಶ ರದ್ದು…24 ಗಂಟೆಯಲ್ಲೇ ವಾಪಸ್ ಕರ್ತವ್ಯಕ್ಕೆ…

ಎನ್.ಆರ್.ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಗೆ ಬಿಗ್ ರಿಲೀಫ್…ಅಮಾನತು ಆದೇಶ ರದ್ದು…24…

ಮೈಸೂರು,ಜು28,Tv10 ಕನ್ನಡ ಸಾಂಸ್ಕೃತಿಕ ನಗರಿಯಲ್ಲಿ ಮಾದಕ ವಸ್ತು ತಯಾರಿಕಾ ಘಟಕ ಪತ್ತೆಯಾದ ಪ್ರಕರಣ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಅಮಾನತಾಗಿದ್ದ ಎನ್.ಆರ್.ಠಾಣೆಯ ನಿರೀಕ್ಷಕರಾದ ಲಕ್ಷ್ಮಿಕಾಂತ ತಳವಾರ್ ರವರ ಆದೇಶ…

Leave a Reply

Your email address will not be published. Required fields are marked *