ಬೆಳ್ಳಿ ಆಭರಣ ತಯಾರಿಸುವ ಘಟಕದಲ್ಲಿ ದರೋಡೆ…ಭದ್ರತಾ ಸಿಬ್ಬಂದಿಗಳನ್ನ ಕಟ್ಟಿಹಾಕಿ ಕೃತ್ಯ…10 ಕೆಜಿ ಬೆಳ್ಳಿ ಕಳುವು…

ಬೆಳ್ಳಿ ಆಭರಣ ತಯಾರಿಸುವ ಘಟಕದಲ್ಲಿ ದರೋಡೆ…ಭದ್ರತಾ ಸಿಬ್ಬಂದಿಗಳನ್ನ ಕಟ್ಟಿಹಾಕಿ ಕೃತ್ಯ…10 ಕೆಜಿ ಬೆಳ್ಳಿ ಕಳುವು…

ಮೈಸೂರು,ಜು29,Tv10 ಕನ್ನಡ

ಬೆಳ್ಳಿ ಪದಾರ್ಥಗಳನ್ನ ತಯಾರಿಸುವ ಘಟಕಕ್ಕೆ ನುಗ್ಗಿದ ದರೋಡೆಕೋರರು ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ಸುಮಾರು 10 ಕೆ.ಜಿ. ಬೆಳ್ಳಿ ಆಭರಣ ದೋಚಿ ಪರಾಕಿಯಾಗಿರುವ ಘಟನೆ ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ರಾಕೇಶ್‌ ಎಂಬವರಿಗೆ ಸೇರಿದ ಬೆಳ್ಳಿಯ ಪದಾರ್ಥ ತಯಾರಿಸುವ ಗೋಡನ್ ಇದೆ.ಮಂಗಳವಾರ ಮಧ್ಯರಾತ್ರಿ ಗೋಡನ್‌ ಗೆ ನುಗ್ಗಿದ ದರೋಡೆಕೋರರು ಹುಡುಕಾಟ ನಡೆಸಿದ್ದಾರೆ. ಅಲ್ಲಿ ಸುಮಾರು 350 ಕೆ.ಜಿ ಕಚ್ಛಾ ಬೆಳ್ಳಿ ಇತ್ತು ಎಂದು ಹೇಳಲಾಗಿದೆ.
ಸೋಮವಾರ ರಾತ್ರಿಯಷ್ಟೇ 30 ಕೆ.ಜಿ ಬೆಳ್ಳಿಯನ್ನು ಆಭರಣವನ್ನಾಗಿ ಮಾಡಿ ಮಾಲೀಕರು ಮನೆಗೆ ಕೊಂಡೊಯ್ದಿದ್ದರು. ಉಳಿದದನ್ನು ಲಾಕರ್ ಇರಿಸಿದ್ದರು. ದರೋಡೆಕೋರರ ಕೈಗೆ 10 ಕೆ.ಜಿ. ಬೆಳ್ಳಿ ಮಾತ್ರ ಸಿಕ್ಕಿದೆ. ಉಳಿದದ್ದು ಲಾಕರ್ ನಲ್ಲಿ ಸೇಫ್ ಆಗಿದೆ ಎಂದು ತಿಳಿದು ಬಂದಿದೆ.ಈ ಸಂಬಂಧ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರರ ಬಂಧನಕ್ಕಾಗಿ ನಾಲ್ಕು ತಂಡ ರಚಿಸಲಾಗಿದೆ. ಕಾರಿನಲ್ಲಿ ಬಂದ ಮೂವರು ವ್ಯಕ್ತಿಗಳು ಕೃತ್ಯವೆಸಗಿದ್ದಾರೆ. ಕಟ್ಟಡದ ಮೇಲ್ಛಾವಣಿ ಓಪನ್ ಮಾಡಿ ಗೋಡೌನ್ ಪ್ರವೇಶ ಮಾಡಿದ್ದಾರೆ. ಇಬ್ಬರು ಸೆಕ್ಯುರಿಟಿಗಳನ್ನ ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 10 ಕೆ.ಜಿ. ಬೆಳ್ಳಿ ಕಳ್ಳತನವಾಗಿದೆ.
ರಾಕೇಶ್‌ ಅವರ ಸಂಸ್ಥೆಯಲ್ಲಿ 30 ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಕೆಲಸ ಬಿಟ್ಟು ತೆರಳಿದವರ ಪಟ್ಟಿ ಮಾಡಲಾಗಿದ್ದು, ಆ ಮೂಲಕ ತನಿಖೆ ಆರಂಭಿಸಿದ್ದಾರೆ. ಭದ್ರತಾ ಸಿಬ್ಬಂದಿಯಲ್ಲಿ ಒಬ್ಬರು ಸ್ಥಳೀಯರಾಗಿದ್ದು, ಮತ್ತೊಬ್ಬರು ಹೊರ ರಾಜ್ಯದವರು. ಎಲ್ಲಾ ಆಯಾಮದಿಂದಲೂ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯ ಆಧರಿಸಿ ಶೀಘ್ರವೇ ಕಳ್ಳರನ್ನು ಬಂಧಿಸುವ ವಿಶ್ವಾಸ ಪೊಲೀಸರು ವ್ಯಕ್ತಪಡಿಸಿದ್ದಾರೆ…

Spread the love

Related post

11ಇ ಸ್ಕೆಚ್ ವಿತರಿಸುವಲ್ಲಿ ಗೋಲ್ ಮಾಲ್…ಲೈಸೆನ್ಸ್ ಸರ್ವೆಯರ್ AT ನಾಗರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕಿ ರಮ್ಯಾ ರಿಂದ ಆದೇಶ…

11ಇ ಸ್ಕೆಚ್ ವಿತರಿಸುವಲ್ಲಿ ಗೋಲ್ ಮಾಲ್…ಲೈಸೆನ್ಸ್ ಸರ್ವೆಯರ್ AT ನಾಗರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿಗಳ…

11ಇ ಸ್ಕೆಚ್ ವಿತರಿಸುವಲ್ಲಿ ಗೋಲ್ ಮಾಲ್…ಲೈಸೆನ್ಸ್ ಸರ್ವೆಯರ್ AT ನಾಗರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕಿ ರಮ್ಯಾ ರಿಂದ ಆದೇಶ ಮೈಸೂರು,ಜು29,Tv10 ಕನ್ನಡ ರಸ್ತೆ…
ADGP ಬಿ.ದಯಾನಂದ್ ಹಾಗೂ ಎಸ್ಪಿ ಟಿ.ಶೇಖರ್ ಮೇಲಿನ ಅಮಾನತು ಆದೇಶ ಹಿಂಪಡೆದ ಸರ್ಕಾರ…

ADGP ಬಿ.ದಯಾನಂದ್ ಹಾಗೂ ಎಸ್ಪಿ ಟಿ.ಶೇಖರ್ ಮೇಲಿನ ಅಮಾನತು ಆದೇಶ ಹಿಂಪಡೆದ…

ಬೆಂಗಳೂರು,ಜು28,Tv10 ಕನ್ನಡ ಎಡಿಜಿಪಿ ಬಿ.ದಯಾನಂದ್ ಹಾಗೂ ಎಸ್ಪಿ ಟಿ.ಶೇಖರ್ ಮೇಲಿನ ಅಮಾನತು ಆದೇಶವನ್ನ ಸರ್ಕಾರ ಹಿಂಪಡೆದಿದೆ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನ ಸರ್ಕಾರ…
ಎನ್.ಆರ್.ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಗೆ ಬಿಗ್ ರಿಲೀಫ್…ಅಮಾನತು ಆದೇಶ ರದ್ದು…24 ಗಂಟೆಯಲ್ಲೇ ವಾಪಸ್ ಕರ್ತವ್ಯಕ್ಕೆ…

ಎನ್.ಆರ್.ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಗೆ ಬಿಗ್ ರಿಲೀಫ್…ಅಮಾನತು ಆದೇಶ ರದ್ದು…24…

ಮೈಸೂರು,ಜು28,Tv10 ಕನ್ನಡ ಸಾಂಸ್ಕೃತಿಕ ನಗರಿಯಲ್ಲಿ ಮಾದಕ ವಸ್ತು ತಯಾರಿಕಾ ಘಟಕ ಪತ್ತೆಯಾದ ಪ್ರಕರಣ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಅಮಾನತಾಗಿದ್ದ ಎನ್.ಆರ್.ಠಾಣೆಯ ನಿರೀಕ್ಷಕರಾದ ಲಕ್ಷ್ಮಿಕಾಂತ ತಳವಾರ್ ರವರ ಆದೇಶ…

Leave a Reply

Your email address will not be published. Required fields are marked *