ದೇವಮಾನವನ ಹೆಸರಲ್ಲಿ ವಂಚನೆ…2.19 ಕೋಟಿ…200 ಗ್ರಾಂ ಚಿನ್ನಾಭರಣ ಲಪಟಾಯಿಸಿದ ಖದೀಮರು…ದಂಪತಿ ವಿರುದ್ದ FIR…

ದೇವಮಾನವನ ಹೆಸರಲ್ಲಿ ವಂಚನೆ…2.19 ಕೋಟಿ…200 ಗ್ರಾಂ ಚಿನ್ನಾಭರಣ ಲಪಟಾಯಿಸಿದ ಖದೀಮರು…ದಂಪತಿ ವಿರುದ್ದ FIR…

ಮೈಸೂರು,ಆ5,Tv10 ಕನ್ನಡ

ಮೈಮೇಲೆ ದೇವರು ಬರುತ್ತದೆ,ನಾನೊಬ್ಬ ದೇವ ಮಾನವ,ಹತ್ತಾರು ದೇವರುಗಳು ಒಲಿದಿದೆ ಇನ್ನೊಬ್ಬರ ಕಷ್ಟ ಸುಖಗಳಿಗೆ ಸಹಾಯ ಮಾಡದಿದ್ದರೆ ನಿಮ್ಮ ಕುಟುಂಬ ಸಂಕಷ್ಟದಲ್ಲಿ ಸಿಲುಕುತ್ತದೆ ಎಂದು ಭೀತಿ ಹುಟ್ಟಿಸಿದ ದಂಪತಿ ಮೈಸೂರಿನ ನಿವಾಸಿಯೊಬ್ಬರಿಗೆ 2,19,35,872/- ರೂ ಹಾಗೂ 202 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣವೊಂದು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ದಕ್ಷಿಣ ಕನ್ನಡ ದ ದಂಪತಿ ರೂಪಶ್ರೀ ಕುಮಾರ್ ಹಾಗೂ ಪತಿ ಸಂದೇಶ್ ಎಂಬುವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.ಮೈಸೂರಿನ ಜೆಎಸ್ ಎಸ್ ಲೇಔಟ್ ನಿವಾಸಿ ಅರುಣ್ ಕುಮಾರ್ (54) ಎಂಬುವರೇ ವಂಚನೆಗೆ ಒಳಗಾದವರು.ಪ್ರಕರಣದ ಪ್ರಮುಖ ಅಂಶವೆಂದರೆ ಕೇವಲ ವಾಟ್ಸಾಪ್ ನ್ನೇ ಬಳಸಿ ವಂಚಿಸಿರುವುದು ವಿಶೇಷ.

2017 ರಲ್ಲಿ ವಾಟ್ಸಾಪ್ ರೂಪಶ್ರೀ ಕುಮಾರ್ ರವರು ಅರುಣ್ ಕುಮಾರ್ ರವರನ್ನ ಸಂಪರ್ಕಿಸಿದ್ದಾರೆ.ಅಪ್ಪಾಜಿ ಎಂಬ ದೇವಮಾನವನ ಹೆಸರೇಳಿ ಅರುಣ್ ಕುಮಾರ್ ರವರನ್ನ ನಂಬಿಸಿದ್ದಾರೆ.ಅಪ್ಪಾಜಿ ರವರು ಹಿಮಾಲಯ ಹಾಗೂ ಕೇರಳಾದಲ್ಲಿ ತಪಸ್ಸು ಮಾಡಿದ್ದಾರೆ.ಇವರು ನಮ್ಮ ಅಜ್ಜಿಗೆ ಇದ್ದ ಕ್ಯಾನ್ಸರ್ ಗುಣಪಡಿಸಿದ್ದಾರೆಂದು ನಂಬಿಸಿದ್ದಾರೆ.ಇವರ ಮಾತನ್ನ ನಂಬಿದ ಅರುಣ್ ಕುಮಾರ್ ಮತ್ತಷ್ಟು ಸ್ನೇಹ ಬೆಳೆಸಿದ್ದಾರೆ.ನೀವು ಕೆಲಸಕ್ಕೆ ತೆರಳುವ ಸಂಧರ್ಭದಲ್ಲಿ ಆಕ್ಸಿಡೆಂಟ್ ಆಗುತ್ತದೆ ಇದರಿಂದ ತಪ್ಪಿಸಿಕೊಳ್ಳಬೇಕಿದ್ದಲ್ಲಿ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವುದೇ ಪರಿಹಾರ ಎಂದು ಅಪ್ಪಾಜಿ ಮೂಲಕ ವಾಟ್ಸಾಪ್ ಸಂದೇಶ ರವಾನಿಸಿದ್ದಾರೆ.ಇದನ್ನೂ ನಂಬಿದ ಅರುಣ್ ಕುಮಾರ್ ಹಣ ಪಾವತಿಸಿದ್ದಾರೆ.ಅಪ್ಪಾಜಿ ರವರು ದೇವಮಾನವ ಇವರ ಮೈಮೇಲೆ ರಾಘವೇಂದ್ರ ಸ್ವಾಮಿ,ಲಕ್ಷ್ಮಿ,ಕೊಡಗಜ್ಜ,ಮಂಜುನಾಥ್ ಸ್ವಾಮಿ,ಸುಭ್ರಹ್ಮಣ್ಯೇಶ್ವರ,ಗೌರಿ ಹಾಗೂ ಇತರ ದೇವರುಗಳು ಬರುತ್ತದೆ ಎಂದು ತಿಳಿಸಿದ್ದಾರೆ.ಸಂದೇಶ್ ಮೈಮೇಲೆ ದೇವರು ಬಂದಿರುವ ವಿಡಿಯೋಗಳನ್ನ ಅರುಣ್ ಕುಮಾರ್ ಗೆ ರವಾನೆಯಾಗಿದೆ.ನೀವು ಜರ್ಮನಿಗೆ ಹೋಗುತ್ತೀರ ಎಂದು ಅಪ್ಪಾಜಿ ಭವಿಷ್ಯ ನುಡಿದಿದ್ದಾರೆ.ಅಂತೆಯೇ ಕಾಕತಾಳೀಯವೆಂಬಂತೆ ಅರುಣ್ ಕುಮಾರ್ ಪತ್ನಿ ಜರ್ಮನಿಗೆ ತೆರಳಿದ್ದಾರೆ.ನಂತರ ಅರುಣ್ ಕುಮಾರ್ ಹಾಗೂ ಮಗ ಸಹ ಜರ್ಮನಿಗೆ ತೆರಳಿದ್ದಾರೆ.ಅಲ್ಲಿಂದ ಅರುಣ್ ಕುಮಾರ್ ಮೇಲೆ ಮತ್ತಷ್ಟು ನಂಬಿಕೆ ಹುಟ್ಟಿಸುವಂತಹ ಸನ್ನಿವೇಶಗಳು ಸೃಷ್ಠಿಯಾಗಿದೆ.ಮತ್ತೊಬ್ಬರ ಕಷ್ಟ ಪರಿಹಾರ ಮಾಡಲು ನೀವು ಹಣ ಕೊಡದಿದ್ರೆ ನಿಮ್ಮ ಕುಟುಂಬಕ್ಕೆ ಸಂಕಷ್ಟ ಎದುರಾಗುತ್ತದೆ ಎಂದು ಭೀತಿ ಹುಟ್ಟಿಸಿ ಹಂತಹಂತವಾಗಿ 2,19,35,872/- ರೂ ಗಳನ್ನ ವಿವಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.ಅಲ್ಲದೆ ಧಾರ್ಮಿಕ ಕಾರ್ಯಗಳ ಹೆಸರೇಳಿ 202 ಗ್ರಾಂ ಚಿನ್ನಾಭರಣ ಸಹ ಪಡೆದಿದ್ದಾರೆ.

2024 ರಲ್ಲಿ ಅಪ್ಪಾಜಿ ರವರನ್ನ ಭೇಟಿ ಮಾಡಬೇಕು ಎಂದು ಒತ್ತಡ ಹೇರಿದಾಗ ಅಪ್ಪಾಜಿ ಮೃತಪಟ್ಟಿದ್ದಾರೆ.ಈಗ ಅಪ್ಪಾಜಿ ಮೈ ಮೇಲೆ ಬರುತ್ತಿಲ್ಲ ಎಂದು ಹೇಳಿದ್ದಾರೆ.ಇವರ ವರ್ತನೆ ಮೇಲೆ ಅನುಮಾನಗೊಂಡ ಅರುಣ್ ಕುಮಾರ್ ಗಂಭೀರವಾಗಿ ದಂಪತಿಯನ್ನ ಪ್ರಶ್ನಿಸಿದಾಗ ದೇವಮಾನವ ಅಪ್ಪಾಜಿ ಎಂಬ ಹೆಸರಲ್ಲಿ ವಂಚಿಸಿರುವುದು ಬೆಳಕಿಗೆ ಬಂದಿದೆ.ದಂಪತಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಹಣ ವಾಪಸ್ ಕೊಡಿಸುವಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ….

Spread the love

Related post

ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಯಜುರುಪಾಕರ್ಮ…ಸಾಮೂಹಿಕ ಯಜ್ಞೋಪವೀತ ಬದಲಾವಣೆ…

ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಯಜುರುಪಾಕರ್ಮ…ಸಾಮೂಹಿಕ ಯಜ್ಞೋಪವೀತ ಬದಲಾವಣೆ…

ಮೈಸೂರು,ಆ9,Tv10 ಕನ್ನಡ ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹ ದೇವಾಲಯದಲ್ಲಿ ಸಾಮೂಹಿಕವಾಗಿ ಋಗ್ವೇದ ಹಾಗೂ ಯಜುರುಪಾಕರ್ಮ ಕಾರ್ಯಕ್ರಮ ನೆರವೇರಿತು.ನೂರಾರು ವಿಪ್ರರು ಭಾಗವಹಿಸಿ ಜನಿವಾರ ಬದಲಾಯಿಸಿಕೊಂಡರು.ದೇವಸ್ಥಾನದ ಆಡಳಿತಾಧಿಕಾರಿ ಎನ್ ಶ್ರೀನಿವಾಸನ್ ನೇತೃತ್ವದಲ್ಲಿ…
ವಿಷ್ಣುವರ್ಧನ್ ಪುಣ್ಯಭೂಮಿ ಧ್ವಂಸ ಹಿನ್ನಲೆ…ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ…

ವಿಷ್ಣುವರ್ಧನ್ ಪುಣ್ಯಭೂಮಿ ಧ್ವಂಸ ಹಿನ್ನಲೆ…ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ…

ಮೈಸೂರು,ಆ8,Tv10 ಕನ್ನಡ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ರವರ ಪುಣ್ಯಭೂಮಿಯನ್ನ ಧ್ವಂಸಗೊಳಿಸಿದ ಪ್ರಕರಣ ಮೈಸೂರಿನಲ್ಲಿ ಪ್ರತಿಧ್ವನಿಸಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಡಾ. ವಿಷ್ಣುವರ್ಧನ್ ಉದ್ಯಾನವನ ಮುಂಭಾಗ…
ನಾಳೆ ಕೆ.ಆರ್.ಬ್ಯಾಂಕ್ ನವೀಕೃತ ಕಟ್ಟಡ ಉದ್ಘಾಟನೆ…ಸಿಎಂ ಆಗಮನ ಹಿನ್ನಲೆ…ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ…

ನಾಳೆ ಕೆ.ಆರ್.ಬ್ಯಾಂಕ್ ನವೀಕೃತ ಕಟ್ಟಡ ಉದ್ಘಾಟನೆ…ಸಿಎಂ ಆಗಮನ ಹಿನ್ನಲೆ…ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ…

ಮೈಸೂರು,ಆ8,Tv10 ಕನ್ನಡ ಅಗ್ರಹಾರ ವೃತ್ತದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭ ನಾಳೆ ನೆರವೇರಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಟ್ಟಡ ಉದ್ಘಾಟಿಸಲಿದ್ದಾರೆ.ಈ ಹಿನ್ನಲೆ ಭದ್ರತೆ…

Leave a Reply

Your email address will not be published. Required fields are marked *