ಫೇಕ್ ಲಿಂಕ್ ಕಳಿಸಿ ಮೊಬೈಲ್ ಕಂಟ್ರೋಲ್ ಗೆ ತೆಗೆದುಕೊಂಡು 1.98 ಲಕ್ಷ ಹಣ ವರ್ಗಾವಣೆ…ವಂಚಕನ ವಿರುದ್ದ FIR…

ಫೇಕ್ ಲಿಂಕ್ ಕಳಿಸಿ ಮೊಬೈಲ್ ಕಂಟ್ರೋಲ್ ಗೆ ತೆಗೆದುಕೊಂಡು 1.98 ಲಕ್ಷ ಹಣ ವರ್ಗಾವಣೆ…ವಂಚಕನ ವಿರುದ್ದ FIR…

ಮೈಸೂರು,ಆ5,Tv10 ಕನ್ನಡ

ಫೇಕ್ ಲಿಂಕ್ ಕಳಿಸಿ ಮೊಬೈಲ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಬೆದರಿಸಿ ಬ್ಯಾಂಕ್ ಖಾತೆಯಿಂದ 1.98 ಲಕ್ಷ ಹಣ ಮೋಸದಿಂದ ವರ್ಗಾವಣೆ ಮಾಡಿಕೊಂಡು ವಂಚಿಸಿದ ಪ್ರಕರಣ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಶ್ರೀರಾಂಪುರ ನಿವಾಸಿ ಜಮುನಾರಾಣಿ ಎಂಬುವರು ಹಣ ಕಳೆದುಕೊಂಡವರು.ಜ್ಯೋತಿಷ್ಯದ ಬಗ್ಗೆ ನಿತ್ಯಕುಂಡಲಿ ಪುಸ್ತಕ ಖರೀದಿಸುವ ಸಲುವಾಗಿ ಜಮುನಾರಾಣಿ ರವರು ಗೂಗಲ್ ನಲ್ಲಿ ಸರ್ಚ್ ಮಾಡುವಾಗ ಗೌರಿಶಂಕರ ಬುಕ್ ಡಿಪೋ ಕಂಡುಬಂದಿದೆ.ಇದರಲ್ಲಿ ನಮೂದಾಗಿದ್ದ ಮೊಬೈಲ್ ನಂಬರ್ ಗೆ ಫೋನ್ ಮಾಡಿ ನಿತ್ಯಕುಂಡಲಿ ಪುಸ್ತಕದ ಬಗ್ಗೆ ಕೇಳಿದಾಗ ಲಭ್ಯವಿದೆ ಎಂದು ವ್ಯಕ್ತಿ ಉತ್ತರಿಸಿದ್ದಾನೆ.ಇದೇ ವೇಳೆ ವ್ಯಕ್ತಿ ಎಪಿಕೆ ಫೈಲ್ ಕಳಿಸಿದ್ದಾನೆ.ಆಕಸ್ಮಿಕವಾಗಿ ಫೈಲ್ ಓಪನ್ ಆಗಿದೆ.ಕೆಲವೇ ಕ್ಷಣಗಳಲ್ಲಿ ಇದು ಫ್ರಾಡ್ ಎಂದು ಖಚಿತವಾದಾಗ ಕಾಲ್ ಕಟ್ ಮಾಡಲು ಯತ್ನಿಸಿದರೂ ಕಟ್ ಆಗಿಲ್ಲ.ಈ ವೇಳೆ ಜುಮುನಾರಾಣಿ ರವರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುವ ಫೇಕ್ ಮೆಸೇಜ್ ಬಂದಿದೆ.ಮಾತನಾಡುತ್ತಿದ್ದ ವ್ಯಕ್ತಿ ಹಣ ಹಿಂದಕ್ಕೆ ಬರಬೇಕಂದ್ರೆ ನಾನು ಹೇಳಿದ ಹಾಗೆ ಕೇಳಬೇಕೆಂದು ಬೆದರಿಸಿದ್ದಾನೆ.ವಂಚಕ ಹೇಳಿದಂತೆ ಮಾಡಿದಾಗ ಎರಡು ಖಾತೆಗಳಿಂದ ತಲಾ 99,000/- ರೂ ಒಟ್ಟು 1,98,000/- ಡ್ರಾ ಆಗಿದೆ.ಎಷ್ಟೇ ಪ್ರಯತ್ನ ಪಟ್ಟರೂ ಕಾಲ್ ಮಾತ್ರ ಕಟ್ ಆಗಿಲ್ಲ.ನಂತರ ಜಮುನಾರಾಣಿ ರವರು ಮೊಬೈಲ್ ಸ್ವಿಚ್ ಆಫ್ ಮಾಡಿ 1930 ಕ್ಕೆ ಕರೆ ಮಾಡಿದ್ದಾರೆ.ಮೊಬೈಲ್ ಅನ್ನು ತನ್ನ ಕಂಟ್ರೋಲ್ ಗೆ ತೆಗೆದುಕೊಂಡು ಫೇಕ್ ಲಿಂಕ್ ಹಾಕಿ ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡ ವಂಚಕನ ವಿರುದ್ದ ಜಮುನಾರಾಣಿ ರವರು ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ… ಮೈಸೂರು,ಜೂ10,Tv10 ಕನ್ನಡ ನಿರೀಕ್ಷೆಯಂತೆ ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳ ಕರ್ತವ್ಯದಲ್ಲಿ ಭಾರಿ ಬದಲಾವಣೆ ಆಗಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ತವ್ಯ…
ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್.ರಕ್ಷಿತ್ ಹೆಗಲಿಗೆ ಮಹತ್ತರ ಜವಾಬ್ದಾರಿ…

ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ…

ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್.ರಕ್ಷಿತ್ ಹೆಗಲಿಗೆ ಮಹತ್ತರ ಜವಾಬ್ದಾರಿ… ಮೈಸೂರು,ಜೂ9,Tv10 ಕನ್ನಡ ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಹಾಗೂ…
ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…?

ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…?

ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…? ನಂಜನಗೂಡು,ಜೂ7,Tv10 ಕನ್ನಡ ಸಾರ್ವಜನಿಕರಿಗೆ ಅನುಕೂಲವಾಗಿ ಪರಿಣಮಿಸಬೇಕಿದ್ದ ಗ್ರಾಮ ಪಂಚಾಯ್ತಿ ಕಾರ್ಯಾಲಯ ಸಿಬ್ಬಂದಿಗಳಿಲ್ಲದೆ ಬಣಗುಡುತ್ತಾ ಹಿಡಿಶಾಪಕ್ಕೆ ತುತ್ತಾಗಿದೆ.ಕೆಲಸ ಕಾರ್ಯಗಳಿಗೆ ಬರುವ ಜನ ಖಾಲಿ…

Leave a Reply

Your email address will not be published. Required fields are marked *