ಹಳೇ ಧ್ವೇಷ…ಕ್ಯಾಬ್ ಡ್ರೈವರ್ ಮೇಲೆ ಆಟೋ ಡ್ರೈವರ್ ಹಲ್ಲೆ…ಧ್ವೇಷಕ್ಕೆ ಕಾರಣ ಏನು ಗೊತ್ತಾ…?

ಹಳೇ ಧ್ವೇಷ…ಕ್ಯಾಬ್ ಡ್ರೈವರ್ ಮೇಲೆ ಆಟೋ ಡ್ರೈವರ್ ಹಲ್ಲೆ…ಧ್ವೇಷಕ್ಕೆ ಕಾರಣ ಏನು ಗೊತ್ತಾ…?

ಹಳೇ ಧ್ವೇಷ…ಕ್ಯಾಬ್ ಡ್ರೈವರ್ ಮೇಲೆ ಆಟೋ ಡ್ರೈವರ್ ಹಲ್ಲೆ…ಧ್ವೇಷಕ್ಕೆ ಕಾರಣ ಏನು ಗೊತ್ತಾ…?

ಮೈಸೂರು,ಆ6,Tv10 ಕನ್ನಡ

ಹಳೇ ಧ್ವೇಷದ ಹಿನ್ನಲೆ ಕ್ಯಾಬ್ ಡ್ರೈವರ್ ಮೇಲೆ ಆಟೋ ಡ್ರೈವರ್ ಹಲ್ಲೆ ನಡೆಸಿದ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಯಲ್ಲಿ ನಡೆದಿದೆ.ಈ ವೇಳೆ ನೆರವಿಗೆ ಬಂದ ಕ್ಯಾಬ್ ಡ್ರೈವರ್ ಪತ್ನಿ ಮೇಲೂ ಹಲ್ಲೆ ನಡೆಸಲಾಗಿದೆ.ಹಲ್ಲೆಗೊಳಗಾದ ದಂಪತಿ ಆಟೋ ಡ್ರೈವರ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಹಳೇ ಧ್ವೇಷಕ್ಕೆ ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ.

ಕ್ಯಾಬ್ ಡ್ರೈವರ್ ಪುರುಶೋತ್ತಮ್ ಹಾಗೂ ಇವರ ಪತ್ನಿ ಸುನಿತಾ ಹಲ್ಲೆಗೊಳಗಾದವರು.ಆಟೋ ಡ್ರೈವರ್ ವಿಜಯಕುಮಾರ್ ವಿರುದ್ದ ಪ್ರಕರಣ ದಾಖಲಾಗಿದೆ.ವಿಜಯ್ ಕುಮಾರ್ ಪತ್ನಿ ಎರಡು ವರ್ಷಗಳ ಹಿಂದೆ ಪುರುಷೋತ್ತಮ್ ಮನೆಯಲ್ಲಿ ಕೆಲಸ ಮಾಡುತ್ತಿದ್ಲು.ಈ ವೇಳೆ ವಿಜಯ್ ಕುಮಾರ್ ಪತ್ನಿ ಮತ್ತೊಬ್ಬನ ಜೊತೆ ಓಡಿಹೋದಳು.ಇದಕ್ಕೆ ಕಾರಣ ಪುರುಷೋತ್ತಮ್ ಎಂದು ವಿಜಯಕುಮಾರ್ ಧ್ವೇಷ ಬೆಳೆಸಿಕೊಂಡ.ನಿನ್ನೆ ರಿಯೋಮೆರಿಡಿಯನ್ ಬಳಿ ಕ್ಯಾಬ್ ನಲ್ಲಿ ಗ್ರಾಹಕರೊಬ್ಬರನ್ನ ಕರೆತಂದ ಪುರುಷೋತ್ತಮ್ ಡ್ರಾಪ್ ಮಾಡಿ ಕಾದಿದ್ದರು.ಈ ವೇಳೆ ಅಲ್ಲಿಗೆ ಬಂದ ವಿಜಯ್ ಕುಮಾರ್ ಇಲ್ಲಿ ಯಾಕೋ ಗಾಡಿ ಹಾಕಿದ್ದೀಯ ಎಂದು ಕ್ಯಾತೆ ತೆಗೆದು ಹಲ್ಲೆ ನಡೆಸಿದ್ದಾನೆ.ವಿಜಯ್ ಕುಮಾರ್ ಗೆ ಸ್ನೇಹಿತ ಸಾಥ್ ನೀಡಿದ್ದಾನೆ.ಈ ಮಾಹಿತಿ ತಿಳಿದ ಪತ್ನಿ ಸ್ಥಳಕ್ಕೆ ಬಂದಿದ್ದಾರೆ.ಸುನಿತಾ ಮೇಲೂ ಹಲ್ಲೆ ನಡೆದಿದೆ.ಚಿಕಿತ್ಸೆ ಪಡೆದ ದಂಪತಿ ಹಲ್ಲೆ ನಡೆಸಿದ ವಿಜಯ್ ಕುಮಾರ್ ಮೇಲೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Spread the love

Related post

ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಯಜುರುಪಾಕರ್ಮ…ಸಾಮೂಹಿಕ ಯಜ್ಞೋಪವೀತ ಬದಲಾವಣೆ…

ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಯಜುರುಪಾಕರ್ಮ…ಸಾಮೂಹಿಕ ಯಜ್ಞೋಪವೀತ ಬದಲಾವಣೆ…

ಮೈಸೂರು,ಆ9,Tv10 ಕನ್ನಡ ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹ ದೇವಾಲಯದಲ್ಲಿ ಸಾಮೂಹಿಕವಾಗಿ ಋಗ್ವೇದ ಹಾಗೂ ಯಜುರುಪಾಕರ್ಮ ಕಾರ್ಯಕ್ರಮ ನೆರವೇರಿತು.ನೂರಾರು ವಿಪ್ರರು ಭಾಗವಹಿಸಿ ಜನಿವಾರ ಬದಲಾಯಿಸಿಕೊಂಡರು.ದೇವಸ್ಥಾನದ ಆಡಳಿತಾಧಿಕಾರಿ ಎನ್ ಶ್ರೀನಿವಾಸನ್ ನೇತೃತ್ವದಲ್ಲಿ…
ವಿಷ್ಣುವರ್ಧನ್ ಪುಣ್ಯಭೂಮಿ ಧ್ವಂಸ ಹಿನ್ನಲೆ…ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ…

ವಿಷ್ಣುವರ್ಧನ್ ಪುಣ್ಯಭೂಮಿ ಧ್ವಂಸ ಹಿನ್ನಲೆ…ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ…

ಮೈಸೂರು,ಆ8,Tv10 ಕನ್ನಡ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ರವರ ಪುಣ್ಯಭೂಮಿಯನ್ನ ಧ್ವಂಸಗೊಳಿಸಿದ ಪ್ರಕರಣ ಮೈಸೂರಿನಲ್ಲಿ ಪ್ರತಿಧ್ವನಿಸಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಡಾ. ವಿಷ್ಣುವರ್ಧನ್ ಉದ್ಯಾನವನ ಮುಂಭಾಗ…
ನಾಳೆ ಕೆ.ಆರ್.ಬ್ಯಾಂಕ್ ನವೀಕೃತ ಕಟ್ಟಡ ಉದ್ಘಾಟನೆ…ಸಿಎಂ ಆಗಮನ ಹಿನ್ನಲೆ…ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ…

ನಾಳೆ ಕೆ.ಆರ್.ಬ್ಯಾಂಕ್ ನವೀಕೃತ ಕಟ್ಟಡ ಉದ್ಘಾಟನೆ…ಸಿಎಂ ಆಗಮನ ಹಿನ್ನಲೆ…ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ…

ಮೈಸೂರು,ಆ8,Tv10 ಕನ್ನಡ ಅಗ್ರಹಾರ ವೃತ್ತದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭ ನಾಳೆ ನೆರವೇರಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಟ್ಟಡ ಉದ್ಘಾಟಿಸಲಿದ್ದಾರೆ.ಈ ಹಿನ್ನಲೆ ಭದ್ರತೆ…

Leave a Reply

Your email address will not be published. Required fields are marked *