ಸಿಂಗರಶೆಟ್ಟಿ ಕೊಳ ಪುನರುಜ್ಜೀವನಗೊಳಿಸಿ…ಬಿಜೆಪಿ ಕಾರ್ಯಕರ್ತರ ಆಗ್ರಹ…ಎರಡು ಸಮುದಾಯ ಮುಖಂಡರ ನಡುವೆ ಮಾತಿನ ಚಕಮಕಿ…

ಸಿಂಗರಶೆಟ್ಟಿ ಕೊಳ ಪುನರುಜ್ಜೀವನಗೊಳಿಸಿ…ಬಿಜೆಪಿ ಕಾರ್ಯಕರ್ತರ ಆಗ್ರಹ…ಎರಡು ಸಮುದಾಯ ಮುಖಂಡರ ನಡುವೆ ಮಾತಿನ ಚಕಮಕಿ…

ಮೈಸೂರು,ಆ6,Tv10 ಕನ್ನಡ

ಮೈಸೂರಿನ ರಾಜೇಂದ್ರನಗರದ ಮುಖ್ಯರಸ್ತೆಯಲ್ಲಿರುವ ನೂರಾರು ವರ್ಷಗಳ ಇತಿಹಾಸವಿರುವ ಸಿಂಗರಶೆಟ್ಟಿ ಕಲ್ಯಾಣಿಯನ್ನ ಸದವಚ್ಛಗೊಳಿಸಿ ಪುನರುಜ್ಜೀವನಗೊಳಿಸುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಸದರಿ ಸ್ಥಳವನ್ನ ಮುಚ್ಚಲಾಗಿದೆ.ಇಲ್ಲಿ ಅನಧಿಕೃತವಾಗಿ ಶೆಡ್ ಗಳನ್ನ ನಿರ್ಮಿಸಲಾಗಿದೆ.ಸುತ್ತಮುತ್ತ ಮಾಂಸ ಹಾಗೂ ಮೀನಿನ ಅಂಗಡಿಗಳನ್ನ ತೆರೆದು ಅಪವಿತ್ರಗೊಳಿಸಲಾಗಿದೆ.ಮಂಟಪ ಮತ್ತು ಕಲ್ಯಾಣಿಯನ್ನ ಸ್ವಚ್ಛಗೊಳಿಸಬೇಕಿದೆ.ಈ ಕುರಿತಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾರ್ಯಕರ್ತರ ಒತ್ತಾಯವಾಗಿದೆ.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಗಿರಿಧರ್ ರವರ ನೇತೃತ್ವದಲ್ಲಿ ಸುಮಾರು 25 ಜನ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುವ ವೇಳೆ ಕೆಲವು ಸ್ಥಳೀಯರು ಮಾತಿನ ಚಕಮಕಿಗೆ ಇಳಿದಿದ್ದಾರೆ.
ಈ ವೇಳೆ ಗಿರಿಧರ್ ಮಾತನಾಡಿ ಇಲ್ಲಿಂದ ದೇವರ ಪೂಜೆಗೆಂದು
ಶಿವಾಜಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ನೀರು ತೆಗೆದುಕೊಂಡು ಹೋಗುತ್ತಿದ್ದರು. ಈಗ ಕೊಳವನ್ನು ಮುಚ್ಚಿ ಮಂಟಪದ ಸುತ್ತ ಮುತ್ತ ಮೀನು ಮತ್ತು ಮಾಂಸದ ಅಂಗಡಿಗಳನ್ನು ಅನಧಿಕೃತವಾಗಿ ಇಟ್ಟು ಅದನ್ನು ಅಪವಿತ್ರಗೊಳಿಸಲಾಗುತ್ತಿದೆ. ಈ ಭಾಗದಲ್ಲಿ ರಜಪೂತರು ಹಾಗೂ ಮರಾಠ ಸಮಾಜದ ಜನರು ಹೆಚ್ಚು ವಾಸವಾಗಿದ್ದು. ಮತ್ತು ದೇವರಿಗೆ ಸಂಬಂದ ಪಟ್ಟಂತ ಮಂಟಪಕ್ಕೆ ಮತ್ತು ಹಿಂದುಗಳ ಭಾವನೆಗೆ ಧಕ್ಕೆ ಆಗುತಿದೆ. ಆ ಮಂಟಪದ ಸುತ್ತ ಮುತ್ತ ಇರುವ ಅಂಗಡಿಗಳನ್ನು ಖಾಲಿ ಮಾಡಿಸಿ. ಹಿಂದುಗಳ ಪವಿತ್ರವಾಗಿರು ಮಂಟಪವನ್ನು ಸ್ವಚ್ಚಗೋಳಿಸಬೇಕು ಆಗ್ರಹಿಸಿದರು.ಇಲ್ಲದಿದ್ದಲ್ಲಿ ಮುಂದಿನ ವಾರ ಸ್ಥಳದ ಬಳಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.ಈಗಾಗಲೇ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದೇವೆ ಆದ್ದರಿಂದ ಸದರಿ ಸ್ಥಳವನ್ನು ಪರಿಶೀಲನೆ ಮಾಡಲು ಬಂದಿದ್ದೆವು ಆದರೆ ಸ್ಥಳೀಯ ಜನರು ವಿರೋಧ ಮಾಡಿದ್ದಾರೆ. ಇದು ನಮ್ಮ ಅಸ್ಮಿತೆ ಈ ಜಾಗವನ್ನು ಪುನರುಜ್ಜೀವನ ಮಾಡಿ ಪೂಜೆ ಪುನಸ್ಕಾರ ಆಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ಬಿಜೆಪಿ ಮೈಸೂರು ನಗರ ನರಸಿಂಹರಾಜ ಕ್ಷೇತ್ರದ ಅಧ್ಯಕ್ಷರಾದ ಮಂಜುನಾಥ್ , ಮುಖಂಡರಾದ ಮುರುಳಿ , ಕಾರ್ತಿಕ್ ಮರಿಯಪ್ಪ, ಪುನೀತ್,ಲಕ್ಷ್ಮಣ್ ,ಮಣಿರತ್ನಂ, ಕೃಷ್ಣಮೂರ್ತಿ ರಾವತ್ ಜಗದೀಶ್ ,ಶಾಂತರಾಜ್,ತಂಬಿ,ಮಹದೇವು,ವೇಲು,ನಾಗರಾಜ್ ,ಜಗದೀಶ್ ,ನವೀನ್ ಶೆಟ್ಟಿ ಸಮಾಜದ ಮುಖಂಡರು ಹಾಜರಿದ್ದರು…

Spread the love

Related post

ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಯಜುರುಪಾಕರ್ಮ…ಸಾಮೂಹಿಕ ಯಜ್ಞೋಪವೀತ ಬದಲಾವಣೆ…

ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಯಜುರುಪಾಕರ್ಮ…ಸಾಮೂಹಿಕ ಯಜ್ಞೋಪವೀತ ಬದಲಾವಣೆ…

ಮೈಸೂರು,ಆ9,Tv10 ಕನ್ನಡ ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹ ದೇವಾಲಯದಲ್ಲಿ ಸಾಮೂಹಿಕವಾಗಿ ಋಗ್ವೇದ ಹಾಗೂ ಯಜುರುಪಾಕರ್ಮ ಕಾರ್ಯಕ್ರಮ ನೆರವೇರಿತು.ನೂರಾರು ವಿಪ್ರರು ಭಾಗವಹಿಸಿ ಜನಿವಾರ ಬದಲಾಯಿಸಿಕೊಂಡರು.ದೇವಸ್ಥಾನದ ಆಡಳಿತಾಧಿಕಾರಿ ಎನ್ ಶ್ರೀನಿವಾಸನ್ ನೇತೃತ್ವದಲ್ಲಿ…
ವಿಷ್ಣುವರ್ಧನ್ ಪುಣ್ಯಭೂಮಿ ಧ್ವಂಸ ಹಿನ್ನಲೆ…ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ…

ವಿಷ್ಣುವರ್ಧನ್ ಪುಣ್ಯಭೂಮಿ ಧ್ವಂಸ ಹಿನ್ನಲೆ…ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ…

ಮೈಸೂರು,ಆ8,Tv10 ಕನ್ನಡ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ರವರ ಪುಣ್ಯಭೂಮಿಯನ್ನ ಧ್ವಂಸಗೊಳಿಸಿದ ಪ್ರಕರಣ ಮೈಸೂರಿನಲ್ಲಿ ಪ್ರತಿಧ್ವನಿಸಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಡಾ. ವಿಷ್ಣುವರ್ಧನ್ ಉದ್ಯಾನವನ ಮುಂಭಾಗ…
ನಾಳೆ ಕೆ.ಆರ್.ಬ್ಯಾಂಕ್ ನವೀಕೃತ ಕಟ್ಟಡ ಉದ್ಘಾಟನೆ…ಸಿಎಂ ಆಗಮನ ಹಿನ್ನಲೆ…ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ…

ನಾಳೆ ಕೆ.ಆರ್.ಬ್ಯಾಂಕ್ ನವೀಕೃತ ಕಟ್ಟಡ ಉದ್ಘಾಟನೆ…ಸಿಎಂ ಆಗಮನ ಹಿನ್ನಲೆ…ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ…

ಮೈಸೂರು,ಆ8,Tv10 ಕನ್ನಡ ಅಗ್ರಹಾರ ವೃತ್ತದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭ ನಾಳೆ ನೆರವೇರಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಟ್ಟಡ ಉದ್ಘಾಟಿಸಲಿದ್ದಾರೆ.ಈ ಹಿನ್ನಲೆ ಭದ್ರತೆ…

Leave a Reply

Your email address will not be published. Required fields are marked *