16,500/- ಹಾಕಿದ್ರೆ ದಿನಕ್ಕೆ 650/- ಬಡ್ಡಿ ಆಮಿಷ…1.81 ಲಕ್ಷ ಪಂಗನಾಮ…ನಾಲ್ವರ ವಿರುದ್ದ FIR…

16,500/- ಹಾಕಿದ್ರೆ ದಿನಕ್ಕೆ 650/- ಬಡ್ಡಿ ಆಮಿಷ…1.81 ಲಕ್ಷ ಪಂಗನಾಮ…ನಾಲ್ವರ ವಿರುದ್ದ FIR…

  • Crime
  • August 24, 2025
  • No Comment
  • 62

ಮೈಸೂರು,ಆ24,Tv10 ಕನ್ನಡ

ಆಪ್ ಗೆ 16,500/- ರೂ ಹಾಕಿದ್ರೆ ದಿನಕ್ಕೆ 650/- ರೂ ಬಡ್ಡಿ ಬರುತ್ತದೆ ಎಂದು ನಂಬಿಸಿ ಇಡೀ ಕುಟುಂಬಕ್ಕೆ 1.81 ಲಕ್ಷ ಹಣಕ್ಕೆ ಪಂಗನಾಮ ಹಾಕಿದ ಪ್ರಕರಣ ಎನ್.ಆರ್.ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಬಡೆಮಕಾನ್ ನ ನೂರ್ ಜಾನ್ ಸೇರಿದಂತೆ ಕುಟುಂಬದ 11 ಮಂದಿಗೆ ಉಂಡೆನಾಮ ಹಾಕಲಾಗಿದೆ.ಬಡೆಮಕಾನ್ ನಿವಾಸಿಗಳಾದ ರೊಮಾನಾ,ಮೆಹಬೂಬ್,ಅಜ್ಮಲ್ ಹಾಗೂ ಇಮ್ರಾನ್ ವಿರುದ್ದ ವಂಚನೆ ಪ್ರಕರಣ ದಾಖಲಿಸಲಾಗಿದೆ.

HUGE ಎಂಬ ಆಪ್ ಗೆ 16,500/- ರೂ ಹಾಕಿದ್ರೆ ಪ್ರತಿದಿನ 650/- ರೂ ಬಡ್ಡಿ ಬರುತ್ತದೆ ಎಂದು ನಾಲ್ವರು ಆರೋಪಿಗಳು ನೂರ್ ಜಾನ್ ಗೆ ನಂಬಿಸಿದ್ದಾರೆ.ಮೊದಲು ನೂರ್ ಜಾನ್ ಹಾಗೂ ಇವರ ಪತಿ ಹಣ ಹೂಡಿದ್ದಾರೆ.ಒಂದು ವಾರದ ನಂತರ ಬಡ್ಡಿ ಹಣ ಡ್ರಾ ಮಾಡಿಕೊಳ್ಳಬಹುದು ಎಂದು ನಂಬಿಸಿದ್ದಾರೆ.ಹಣ ಹೂಡಿಕೆ ಮಾಡಿಸಿದ್ರೆ ಕಮೀಷನ್ ಸಹ ಬರುತ್ತದೆ ಎಂದು ನಂಬಿಸಿದ್ದಾರೆ.ಇದನ್ನ ನಂಬಿದ ನೂರ್ ಜಾನ್ ತನ್ನ ಕುಟುಂಬಸ್ಥರು ಹಾಗೂ ಪರಿಚಯಸ್ಥರಿಂದ ಸುಮಾರು 11 ಮಂದಿಯಿಂದ 1.81 ಲಕ್ಷ. ಹಣ ಹೂಡಿಸಿದ್ದಾರೆ.ಒಂದು ವಾರದ ನಂತರ HUGE ಆಪ್ ನಿಂದ ಹಣ ಡ್ರಾ ಮಾಡಲು ಮುಂದಾದಾಗ ಆಪ್ ಓಪನ್ ಆಗಿಲ್ಲ.ಈ ಬಗ್ಗೆ ರುಮಾನಾ ರವರನ್ನ ಪ್ರಶ್ನಿಸಿದಾಗ ಆಪ್ ಕ್ಲೋಸ್ ಆದ್ರೆ ನಾವೇನು ಮಾಡೋಕ್ಕೆ ಆಗಲ್ಲ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ.ವಂಚನೆಗೆ ಒಳಗಾದ 11 ಮಂದಿ ಎನ್.ಆರ್.ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು… ಹುಣಸೂರು,ಡಿ20,Tv10 ಕನ್ನಡ ಸುಡುತ್ತಿರುವ ಬಿಸಿನೀರಿನ ಪಾತ್ರೆಗೆ ಬಿದ್ದು ಹೆಣ್ಣುಮಗು ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ. ಆದಿವಾಸಿ…
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ… ಹುಣಸೂರು,ಡಿ19,Tv10 ಕನ್ನಡ ಕ್ಲುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.ನಿಜಾಂ ಮೊಹಲ್ಲಾದ ನಿವಾಸಿ ಖಾಜಾಪೀರ್(44)ಕೊಲೆಯಾದ…
ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ… ಮಂಡ್ಯ,ಡಿ19,Tv10 ಕನ್ನಡ ಜಮೀನು ವಿಚಾರದಲ್ಲಿ ಮಾಜಿ ಶಾಸಕ ಹಾಗೂ ಪುತ್ರ ವ್ಯಕ್ತಿ ಮೇಲೆ…

Leave a Reply

Your email address will not be published. Required fields are marked *