ದನಗಳ ಕೊಟ್ಟಿಗೆಯಾದ ಪೊಲೀಸ್ ಕ್ವಾಟ್ರಸ್…ಠಾಣೆ ಆವರಣದಲ್ಲಿರುವ ವಸತಿ ಗೃಹಗಳ ನಿರ್ಲಕ್ಷ್ಯ…

ದನಗಳ ಕೊಟ್ಟಿಗೆಯಾದ ಪೊಲೀಸ್ ಕ್ವಾಟ್ರಸ್…ಠಾಣೆ ಆವರಣದಲ್ಲಿರುವ ವಸತಿ ಗೃಹಗಳ ನಿರ್ಲಕ್ಷ್ಯ…

ನಂಜನಗೂಡು,ಸೆ6,Tv10 ಕನ್ನಡ

ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಅನುಕೂಲಕ್ಕಾಗಿ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಲಾದ ಪೊಲೀಸ್ ವಸತಿಗೃಹಗಳು ದನಗಳ ಕೊಟ್ಟಿಗೆಯಾಗಿ ಮಾರ್ಪಟ್ಟಿವೆ.ನಂಜನಗೂಡು ತಾಲೂಕಿನ ಬಿಳಿಗೆರೆ ಪೊಲೀಸ್ ಠಾಣೆಗೆ ಸೇರಿದ ವಸತಿಗೃಹಗಳ ದುಃಸ್ಥಿತಿ ಇದು.ಸುಮಾರು 10 ಕುಟುಂಬಗಳು ನೆಲಸಲು ವಸತಿಗೃಹಗಳನ್ನ ನಿರ್ಮಿಸಲಾಗಿದೆ.ಠಾಣೆಯ ಆವರಣದಲ್ಲೇ ಲಕ್ಷಾಂತರ ಹಣ ಖರ್ಚು ಮಾಡಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.ಹಲವಾರು ವರ್ಷಗಳಿಂದ ಯಾವೊಬ್ಬ ಅಧಿಕಾರಿಯಾಗಲಿ ಅಥವಾ ಸಿಬ್ಬಂದಿಯಾಗಲಿ ಈ ವಸತಿಗೃಹದಲ್ಲಿ ನೆಲೆಸಿಲ್ಲ.ನಿರ್ಲಕ್ಷ್ಯಕ್ಕೆ ಒಳಗಾದ ವಸತಿಗೃಹಗಳನ್ನ ಸಮೀಪದ ನಿವಾಸಿಗಳು ದನಗಳ ಕೊಟ್ಟಿಗೆಯಂತೆ ಬಳಸಿಕೊಂಡಿದ್ದಾರೆ.ಪೋಲೀಸ್ ಠಾಣೆ ಆವರಣದಲ್ಲೇ ಇಂತಹ ಬೆಳವಣಿಗೆ ಆಗಿದ್ದರೂ ಠಾಣೆಯ ಅಧಿಕಾರಿಗಳಿಗಾಗಲಿ ಹಿರಿಯ ಅಧಿಕಾರಿಗಳಿಗಾಗಲಿ ಕಣ್ಣಿಗೆ ಬಿದ್ದಿಲ್ಲದಿರುವುದು ಅಚ್ಚರಿಯ ವಿಚಾರ.ಠಾಣೆ ಆವರಣಕ್ಕೆ ಎಂಟ್ರಿ ಕೊಡುವ ಯಾವೊಬ್ಬ ವ್ಯಕ್ತಿಯ ಸಂಪೂರ್ಣ ಮಾಹಿತಿ ಪಡೆಯುವ ಸಿಬ್ಬಂದಿಗಳಿಗೆ ಪಾಪ ದನಗಳ ಕೊಟ್ಟಿಗೆ ಮಾಡಿಕೊಂಡಿರುವ ನಿವಾಸಿಗಳ ಬಗ್ಗೆ ತಿಳಯದಿರುವುದು ಸೋಜಿಗದ ವಿಚಾರ.ಅವಶ್ಯಕತೆ ಇಲ್ಲದಿದ್ದರೂ ಲಕ್ಷಾಂತರ ವೆಚ್ಚದಲ್ಲಿ ವಸತಿಗೃಹಗಳನ್ನ ನಿರ್ಮಿಸುವ ಉದ್ದೇಶವಾದ್ರೂ ಏನು…?ವಸತಿಗೃಹಗಳು ವಾಸಿಸಲು ಯೋಗ್ಯವಾಗಿದ್ದರೂ ಬಳಸದೇ ಇರುವ ಕಾರಣವಾದ್ರೂ ಏನು…? ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವ ಸರ್ಕಾರಗಳಿಗೆ ಬುದ್ದಿ ಬರುವುದು ಯಾವಾಗ…?ಇನ್ನಾದ್ರೂ ಈ ವಸತಿಗೃಹಗಳನ್ನ ಸಮರ್ಪಕವಾಗಿ ಬಳಸುವ ಬಗ್ಗೆ ಹಿರಿಯ ಅಧಿಕಾರಿಗಳು ಚಿಂತಿಸುವರೇ…?

Spread the love

Related post

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು… ಹುಣಸೂರು,ಡಿ20,Tv10 ಕನ್ನಡ ಸುಡುತ್ತಿರುವ ಬಿಸಿನೀರಿನ ಪಾತ್ರೆಗೆ ಬಿದ್ದು ಹೆಣ್ಣುಮಗು ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ. ಆದಿವಾಸಿ…
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ… ಹುಣಸೂರು,ಡಿ19,Tv10 ಕನ್ನಡ ಕ್ಲುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.ನಿಜಾಂ ಮೊಹಲ್ಲಾದ ನಿವಾಸಿ ಖಾಜಾಪೀರ್(44)ಕೊಲೆಯಾದ…
ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ… ಮಂಡ್ಯ,ಡಿ19,Tv10 ಕನ್ನಡ ಜಮೀನು ವಿಚಾರದಲ್ಲಿ ಮಾಜಿ ಶಾಸಕ ಹಾಗೂ ಪುತ್ರ ವ್ಯಕ್ತಿ ಮೇಲೆ…

Leave a Reply

Your email address will not be published. Required fields are marked *