ಹುರುಳಿಗೆ ಸಿಲುಕಿ ಹುಲಿ ಸಾವು…ಜಮೀನು ಮಾಲೀಕನ ವಿರುದ್ದ ಪ್ರಕರಣ…
- CrimeTV10 Kannada Exclusive
- March 27, 2026
- No Comment
- 4
ಹುರುಳಿಗೆ ಸಿಲುಕಿ ಹುಲಿ ಸಾವು…ಜಮೀನು ಮಾಲೀಕನ ವಿರುದ್ದ ಪ್ರಕರಣ…
ಎಚ್.ಡಿ.ಕೋಟೆ,ಮಾ27,Tv10 ಕನ್ನಡ
ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ಹುರುಳಿಗೆ ಸಿಲುಕಿ ಗಂಡು ಹುಲಿಯೊಂದು ಮೃತ ಪಟ್ಟ ಘಟನೆ ಹೆಚ್.ಡಿ.ಕೋಟೆ ತಾಲೋಕಿನ ಅಗಸನಹುಂಡಿಯಲ್ಲಿ ನಡೆದಿದೆ.
ಗಿರೀಶ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಅಳವಡಿಸಿದ್ದ ಹುರುಳಿಗೆ ಸುಮಾರು 3,ವರ್ಷದ ಗಂಡು ಹುಲಿ ಸಿಲುಕಿಕೊಂಡು ಸಾವನ್ನಪ್ಪಿದೆ. 2-3 ದಿನಗಳ ಹಿಂದೆಯೇ ಹುಲಿ ಮೃತಪಟ್ಟಿದ್ದು ಪ್ರಕರಣ ಇಂದು ಬೆಳಕಿಗೆ ಬಂದಿದೆ. ತಜ್ಞರ ತಂಡ ಹುಲಿ ಮೃತದೇಹದ ಮರಣೋತ್ತರ ಪರೀಕ್ಷೆ ನೆರವೇರಿಸಿ ಕಳೆಬರಕ್ಕೆ ಅಗ್ನಿ ಸ್ಪರ್ಶ ಮಾಡಿದರು.
ಕಾಡು ಹಂದಿಗಳ ಬೇಟೆಗಾಗಿ ಜಮೀನಿನಲ್ಲಿ ಅಕ್ರಮವಾಗಿ ಹುರುಳು ಹಾಕಿರಬಹುದೆಂದು ಅಂದಾಜಿಸಲಾಗಿದ್ದು ತನಿಖೆ ನಂತರವಷ್ಟೇ ಸತ್ಯ ಸಂಗತಿ ಹೊರಬೀಳಬೇಕಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ವಲಯದ 2ನೇ ಗಸ್ತಿಗೆ ಸೇರಿದ ಜಮೀನಿನಲ್ಲಿ ಹುಲಿ ಮೃತಪಟ್ಟಿದೆ. ಮೇಟಿಕುಪ್ಪೆ ವಲಯ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಬೇಟಿ ನೀಡಿ ಮಹಜರು ನಡೆಸಿದ ಬಳಿಕ ಗಿರೀಶ್ ವಿರುದ್ದ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ…