• July 29, 2022

ಬಳ್ಳಿಗಳಿಂದ ಮುಕ್ತವಾದ ಮಾರ್ಗದರ್ಶಿ ಫಲಕ…Tv10 ವರದಿ ಫಲಶೃತಿ…

ಬಳ್ಳಿಗಳಿಂದ ಮುಕ್ತವಾದ ಮಾರ್ಗದರ್ಶಿ ಫಲಕ…Tv10 ವರದಿ ಫಲಶೃತಿ…

ಮೈಸೂರು,ಜುಲೈ29,Tv10 ಕನ್ನಡ
ಕೊನೆಗೂ ಬಳ್ಳಿಗಳಿಂದ ಸಂಚಾರಿ ಮಾರ್ಗದರ್ಶಿ ಫಲಕ ಮುಕ್ತವಾಗಿದೆ.ವಿವಿ ಪುರಂ ಸಂಚಾರಿ ಪೊಲೀಸರು ಎಚ್ಚೆತ್ತು ಬಳ್ಳಿಗಳಿಂದ ಮುಚ್ಚಿಹೋಗಿದ್ದ ಮಾರ್ಗದರ್ಶಿ ಫಲಕವನ್ನ ಮುಕ್ತಗೊಳಿಸಿದ್ದಾರೆ.ಇದು Tv10 ವರದಿಯ ಫಲಶೃತಿ.

ಕೆ.ಆರ್.ಎಸ್.ರಸ್ತೆ ಗೋಕುಲಂ ಬಡಾವಣೆ ಪ್ರವೇಶ ಧ್ವಾರದ ಇಎಸ್ ಐ ಆಸ್ಪತ್ರೆ ಬಳಿ ಅಳವಡಿಸಲಾಗಿದ್ದ ಸಂಚಾರಿ ಮಾರ್ಗದರ್ಶಿ ಫಲಕವೊಂದನ್ನ ಗಿಡಬಳ್ಳಿಗಳು ಮುಚ್ಚಿಹಾಕಿತ್ತು.ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕಿದ್ದ ಫಲಕ ವಿ.ವಿ.ಪುರಂ ಸಂಚಾರಿ ಪೊಲೀಸರ ನಿರ್ಲಕ್ಷ್ಯತೆಗೆ ಒಳಗಾಗಿತ್ತು.ಈ ಬಗ್ಗೆ Tv10 ಕನ್ನಡ ವಾಹಿನಿ ವರದಿ ಮಾಡಿತ್ತು.ಕೂಡಲೇ ಎಚ್ಚೆತ್ತ ಡಿಸಿಪಿ ಗೀತಾಪ್ರಸನ್ನ ರವರು ಸೂಚನೆ ನೀಡಿ ತೆರವುಗೊಳಿಸಿದ್ದಾರೆ.ಇದು Tv10 ಇಂಪ್ಯಾಕ್ಟ್…

Spread the love

Leave a Reply

Your email address will not be published.