ಯಾವನೋ ಶೂಟ್ ಮಾಡಿದ್ದು…ಇತ್ಲಿಂದ ಬುಲೆಟ್ ಬಿಟ್ರೆ ತಲೆ ಒಳಗೆ ಹೋಗ್ಬೇಕು…ಎದೆಗೆ ಒದ್ದುಬಿಡ್ತೀನಿ…ಅರಣ್ಯಾಧಿಕಾರಿಗೆ ನಾಗಮಂಗಲ ಶಾಸಕ ಸುರೇಶ್ ಗೌಡ ಆವಾಜ್…ಯಾಕೆ ಗೊತ್ತಾ…?

ಯಾವನೋ ಶೂಟ್ ಮಾಡಿದ್ದು…ಇತ್ಲಿಂದ ಬುಲೆಟ್ ಬಿಟ್ರೆ ತಲೆ ಒಳಗೆ ಹೋಗ್ಬೇಕು…ಎದೆಗೆ ಒದ್ದುಬಿಡ್ತೀನಿ…ಅರಣ್ಯಾಧಿಕಾರಿಗೆ ನಾಗಮಂಗಲ ಶಾಸಕ ಸುರೇಶ್ ಗೌಡ ಆವಾಜ್…ಯಾಕೆ ಗೊತ್ತಾ…?

ಯಾವನೋ ಶೂಟ್ ಮಾಡಿದ್ದು…ಇತ್ಲಿಂದ ಬುಲೆಟ್ ಬಿಟ್ರೆ ತಲೆ ಒಳಗೆ ಹೋಗ್ಬೇಕು…ಎದೆಗೆ ಒದ್ದುಬಿಡ್ತೀನಿ…ಅರಣ್ಯಾಧಿಕಾರಿಗೆ ನಾಗಮಂಗಲ ಶಾಸಕ ಸುರೇಶ್ ಗೌಡ ಆವಾಜ್…ಯಾಕೆ ಗೊತ್ತಾ…?

ಮಂಡ್ಯ,ಆಗಸ್ಟ್5,Tv10 ಕನ್ನಡ
ಅತಿಕ್ರಮಣ ಮಾಡಲು ಮುಂದಾದ ವ್ಯಕ್ತಿಗಳಿಂದ ಅರಣ್ಯ ರಕ್ಷಣೆ ಮಾಡಲು ಮುಂದಾದ ಅರಣ್ಯಾಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ ಹಿನ್ನಲೆ ಶಾಸಕ ಅವ್ಯಾಚ ಶಬ್ಧಗಳನ್ನ ಬಳಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ.ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶಾಸಕ ಸುರೇಶ್ ಗೌಡ ಕರ್ತವ್ಯ ನಿರತ ಅರಣ್ಯಾಧಿಕಾರಿಗಳಿಗೆ ಅವ್ಯಾಚ ಶಬ್ದಗಳನ್ನ ಬಳಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.ನಾಗಮಂಗಲ ತಾಲೂಕು ಕಸಬಾ ಹೋಬಳಿ ಹಾಲತಿ ಗ್ರಾಮ ಸರ್ವೆ ನಂ.132 ಸರ್ಕಾರಿ ಜಮೀನು ರಕ್ಷಿಸಲು ಮುಂದಾದ ಎಸಿಎಫ್ ಮೇಕೆ ದಾಳಿ ನಡೆಸುವ ಯತ್ನವಾಗಿದೆ.ಈ ಸಂಧರ್ಭದಲ್ಲಿ ಅರಣ್ಯಾಧಿಕಾರಿ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.ಈ ಮಾಹಿತಿ ಅರಿತ ಶಾಸಕ ಸುರೇಶ್ ಗೌಡ ಸ್ಥಳಕ್ಕೆ ಬಂದು ಕರ್ತವ್ಯ ನಿರತ ಅಧಿಕಾರಿ ಮೇಲೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ.

ಅದಿಕಾರಿಯನ್ನ ನೋಡುತ್ತಲೇ ಯಾವನೋ ಶೂಟ್ ಮಾಡಿದ್ದು,ಇತ್ತಿಂದ ಬುಲೆಟ್ ಬಿಟ್ರೆ ತಲೆ ಒಳಗೆ ಹೋಗಬೇಕು,ಯಾರೋ ಪರ್ಮಿಷನ್ ಕೊಟ್ಟಿದ್ದು,ಎದೆಗೆ ಒದ್ದು ಬಿಡ್ತೀನಿ…ಬೋ..ಮಗನೆ..ಇದು ನಿಮ್ಮಪ್ಪನ ಆಸ್ತೀನಾ..ಪೊಲೀಸರನ್ನ ಕರೆತಂದು ದಾದಾಗಿರಿ ಮಾಡ್ತೀಯ..ಅರಣ್ಯ ಉಳಿಸೋದು ನಿಮಗಿಂತ ನಮಗೆ ಚೆನ್ನಾಗಿ ಗೊತ್ತು…ಅವನುಚಹೇಳ್ದ ಅಂತ ಶೂಟ್ ಮಾಡ್ತೀಯ..ಅವನೇನಾದ್ರೂ ಮಾಡ್ಕೊಳ್ಳಲಿ ಸುಮ್ಮನಿರು…ಮರ್ಯಾದೆಯಿಂದ ಇಲ್ಲಿಂದ ಜಾಗ ಖಾಲಿ ಮಾಡು…ಅದ್ಯಾರೋ ಬೋ..ಮಗ ಮೇಲಧಿಕಾರಿ…ಡಿಐಜಿ ನ ಫೋನ್ ಮಾಡೋ.. ಎಂದು ಆವಾಜ್ ಹಾಕಿದ ಘಟನೆ ಬೆಳಕಿಗೆ ಬಂದಿದೆ.ಕರ್ತವ್ಯ ನಿರತ ಅಧಿಕಾರಿಯನ್ನ ಬಹಿರಂಗವಾಗಿ ನಿಂದಿಸಿದ ಶಾಸಕನ ವರ್ತನೆ ವಿಡಿಯೋ ವೈರಲ್ ಆಗಿದೆ.ಅಧಿಕಾರಿಗಳು ತಮ್ಮ ಕರ್ತವ್ಯ ಮಾಡೋದು ತಪ್ಪಾ ಎಂಬ ಪ್ರಶ್ನೆ ಉದ್ಭವಿಸಿದೆ.ಶಾಸಕ ಸುರೇಶ್ ಗೌಡ ಹಾಕಿದ ಆವಾಜ್ ಬಿಹಾರದ ಬೆಳವಣಿಗೆಗಳನ್ನ ನೆನಪಿಗೆ ತರಿಸುತ್ತಿದೆ…

Spread the love

Related post

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025…

ಮೈಸೂರು,ಜೂ26,Tv10 ಕನ್ನಡ ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ…

Leave a Reply

Your email address will not be published. Required fields are marked *