• August 12, 2022

ಕಾಡಾನೆ ದಾಳಿಗೆ ರೈತ ಬಲಿ…ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಷ…

ಕಾಡಾನೆ ದಾಳಿಗೆ ರೈತ ಬಲಿ…ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಷ…

ಹೆಚ್.ಡಿ.ಕೋಟೆ,ಆಗಸ್ಟ್ 12,Tv10 ಕನ್ನಡ
ಕಾಡಾನೆ ದಾಳಿಗೆ ಸಿಲುಕಿ ಕೇರಳ ಮೂಲದ ರೈತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆ ತಾಲೂಕು ಎತ್ತಿಗೆ ಗ್ರಾಮದಲ್ಲಿ ನಡೆದಿದೆ.
ಬಾಲನ್ (60) ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ರೈತ.ಕೇರಳ ಮೂಲದ ಬಾಲನ್ ಎತ್ತಿಗೆ ಗ್ರಾಮದ ಜಮೀನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ನಡೆಸುತ್ತಿದ್ದರು.
ತಡರಾತ್ರಿ ಜಮೀನಿನತ್ತ ಬಂದ ಕಾಡಾನೆ ದಾಳಿ ನಡೆಸಿದೆ.
ಬೆಳಗಾದರೂ ಅರಣ್ಯ ಸೇರದೆ ನಾಡಿನಲ್ಲೇ ಬೀಡು ನಿಟ್ಟಿದ್ದ ಆನೆಯನ್ನ ಗ್ರಾಮಸ್ಥರು ಹಿಮ್ಮೆಟ್ಟಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸರ ಭೇಟಿ ನೀಡಿದ್ದಾರೆ.
ಕಾಡಾನೆಗಳ ಉಪಟಳದಿಂದ ಬೆಳೆ ಹಾನಿಯಲ್ಲದೆ ಜೀವಹಾನಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದ್ದಾರೆ…

Spread the love

Leave a Reply

Your email address will not be published.