ದತ್ತಾತ್ರೇಯ ಆಗಮನ ಹಿನ್ನಲೆ…ಮಾಜಿ ಶಾಸಕ ಎಂ.ಕೆ.ಎಸ್ ರಿಂದ ದಸರಾ ಗಜಪಡೆಗೆ ವಿಶೇಷ ಸತ್ಕಾರ…

ದತ್ತಾತ್ರೇಯ ಆಗಮನ ಹಿನ್ನಲೆ…ಮಾಜಿ ಶಾಸಕ ಎಂ.ಕೆ.ಎಸ್ ರಿಂದ ದಸರಾ ಗಜಪಡೆಗೆ ವಿಶೇಷ ಸತ್ಕಾರ…

ದತ್ತಾತ್ರೇಯ ಆಗಮನ ಹಿನ್ನಲೆ…ಮಾಜಿ ಶಾಸಕ ಎಂ.ಕೆ.ಎಸ್ ರಿಂದ ದಸರಾ ಗಜಪಡೆಗೆ ವಿಶೇಷ ಸತ್ಕಾರ…

ಮೈಸೂರು,ಸೆ16,Tv10 ಕನ್ನಡ
ದಸರಾ ಆನೆ ಲಕ್ಷ್ಮೀ ಪುತ್ರ ದತ್ತಾತ್ರೆಯನಿಗೆ ಜನ್ಮ ನೀಡಿರುವ ಹಿನ್ನೆಲೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇಂದು ಗಜಪಡೆಗೆ ಕಬ್ಬು,ಬೆಲ್ಲ,ಬಾಳೆ ಹಣ್ಣು ನೀಡಿ ಸತ್ಕರಿಸಿದರು.ಗಜಪಡೆಗೆ ಸೇರಿದ ದತ್ತಾತ್ರೇಯನ ಆಗಮನವನ್ನ ವಿಶೇಷವಾಗಿ ಆಚರಿಸಿ ಶುಭಹಾರೈಸಿದರು.ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದ ಲಕ್ಷ್ಮಿ ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮ ನೀಡಿದೆ.ರಾಜವಂಶಸ್ಥರು ಲಕ್ಷ್ಮಿ ಪುತ್ರನಿಗೆ ದತ್ತಾತ್ರೇಯ ಎಂದು ನಾಮಕರಣ ಮಾಡಿದ್ದಾರೆ.ಗಜಪಡೆಗೆ ಹಿಸದಾರಿ ಸೇರ್ಪಡೆಯಾದ ದತ್ತಾತ್ರೇಯ ಗಜಪಡೆಯಲ್ಲಿ ಸ್ಟಾರ್ ಅಟ್ರಾಕ್ಷನ್ ಆಗಿದ್ದಾನೆ. ಸಾಂಸ್ಕೃತಿಕ ನಗರದ ಮೈಸೂರಿನ ಜನತೆಯ ಪರವಾಗಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಕಬ್ಬು ಬೆಲ್ಲ ಬಾಳೆಹಣ್ಣುನೀಡುವ ಮೂಲಕ ಸಿಹಿ ವಿತರಣೆಯೊಂದಿಗೆ ದತ್ತಾತ್ರೇಯನ ಆಗಮನವನ್ನು ಸಡಗರದಿಂದ ಸ್ವಾಗತಿಸಿದ್ದಾರೆ.ಈ ಸಂಧರ್ಭದಲ್ಲಿ ಡಿಸಿಎಫ್ ಕರಿಕಾಳನ್,ಎಸಿಎಫ್ ಸಂತೋಷ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್,ಭವ್ಯ,ಮಾಜಿ ಮಹಾಪೌರರಾದ ಪುಷ್ಪಲತಾ ಚಿಕ್ಕಣ್ಣ,ಪ್ರತಿಧ್ವನಿ ಪ್ರಸಾದ್,ರೂಪೇಶ್,ಪುಟ್ಭಾಲ್ ಮಂಜು,ಗುಣಶೇಖರ್,ಫಾರೂಖ್,ಅರುಣ್,ಪೈಲ್ವಾನ್ ಮಹೇಶ್,ಚಿಕ್ಕಲಿಂಗು,ಉಮೇಶ್,ಲೋಕೇಶ್,ಹರೀಶ್,ಅಭಿಷೇಕ್ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು…

Spread the love

Related post

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ… ಚಾಮರಾಜನಗರ,ಜು28,Tv10 ಕನ್ನಡ ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.ಕೊಡಗು ಜಿಲ್ಲೆ…
ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…

Leave a Reply

Your email address will not be published. Required fields are marked *