ದಸರಾ ಆನೆಗಳಿಗೆ ಎರಡನೇ ಸುತ್ತಿನ ಸಿಡಿಮದ್ದಿನ ತಾಲೀಮು…ಶಬ್ಧಕ್ಕೆ ಜಗ್ಗದ ಗಜಪಡೆ…

ದಸರಾ ಆನೆಗಳಿಗೆ ಎರಡನೇ ಸುತ್ತಿನ ಸಿಡಿಮದ್ದಿನ ತಾಲೀಮು…ಶಬ್ಧಕ್ಕೆ ಜಗ್ಗದ ಗಜಪಡೆ…

  • Mysore
  • September 16, 2022
  • No Comment
  • 177

ದಸರಾ ಆನೆಗಳಿಗೆ ಎರಡನೇ ಸುತ್ತಿನ ಸಿಡಿಮದ್ದಿನ ತಾಲೀಮು…ಶಬ್ಧಕ್ಕೆ ಜಗ್ಗದ ಗಜಪಡೆ…

ಮೈಸೂರು,ಸೆ16,Tv10 ಕನ್ನಡ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗೆ ಮೊದಲ ಹಂತದ ಸಿಡಿಮದ್ದಿನ ತಾಲೀಮು ನಡೆದಿದೆ.ಇಂದು ಎರಡನೇ ಹಂತದ ತಾಲೀಮು ನಡೆದಿದೆ.ದಸರಾ ವಸ್ತುಪ್ರದರ್ಶನದ ಪಾರ್ಕಿಂಗ್ ಸ್ಥಳದಲ್ಲಿ ತಾಲೀಮು ನಡೆದಿದೆ. ಫಿರಂಗಿ ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗಿದೆ.ಈಬಾರಿ ಗಜಪಡೆ, ಅಶ್ವಗಳು ವಿಚಲಿತವಾಗದೇ ಪಿರಂಗಿಯಿಂದ ಹೊರಟ ಸಿಡಿಮದ್ದಿನ ಶಬ್ಧಕ್ಕೆ ಹೊಂದಿಕೊಳ್ಳುವ ಮೂಲಕ ತಾಲೀಮು ಯಶಸ್ವಿಗೊಳಿಸಿದೆ.
ಅಕ್ಟೋಬರ್ 5ರಂದು ನಡೆಯಲಿರುವ ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಮತ್ತು ಅಶ್ವಾರೋಹಿದಳದ ಕುದುರೆಗಳು ಭಾರೀ ಶಬ್ದಗಳಿಗೆ ಬೆಚ್ಚದಂತೆ ಅವು ಶಬ್ದಗಳಿಗೆ ಹೊಂದಿಕೊಳ್ಳಲು ಅನುಕೂಲವಾಗಲೆಂದು ತಾಲೀಮು ನಡೆಸಲಾಗುತ್ತಿದೆ. ಮೂರು ಸುತ್ತಿನಲ್ಲಿ 21 ಬಾರಿ ಫಿರಂಗಿ ಮೂಲಕ ಸಿಡಿಮದ್ದು ಸಿಡಿಸಲಾಗಿದೆ.
ಸೆ.12ರಂದು ಮೊದಲ ಸಿಡಿಮದ್ದು ಸಿಡಿಸುವ ತಾಲೀಮು ನಡೆದಿತ್ತು. ಆ ವೇಳೆ ಕುದುರೆಗಳು, ಮೂರು ಆನೆಗಳು ಬೆಚ್ಚಿದ್ದವು. ಆದರೆ ಈ ಬಾರಿ ಶಬ್ದಗಳಿಗೆ ಯಾವುದೂ ವಿಚಲಿತವಾಗದೆ ಶಬ್ಧಕ್ಕೆ ಹೊಂದಿಕೊಂಡಿವೆ.ಇಂದು ನಡೆದ ತಾಲೀಮಿನಲ್ಲಿ 12 ಆನೆಗಳು,41 ಕುದುರೆಗಳು ಭಾಗಿಯಾಗಿದ್ದವು.ಸೆ.23 ಕ್ಕೆ ಮೂರನೇ ಸುತ್ತಿನ ತಾಲೀಮು ನಡೆಯಲಿದೆ. ಡಿಸಿಪಿ-3 ಶಿವರಾಜ್ ಮಾತನಾಡಿ ಪ್ರತಿಬಾರಿ ಅರಮನೆ ಬಳಿ ತಾಲೀಮು ನಡೆಯುತ್ತಿತ್ತು. ಅರಮನೆಯ ಗೋಡೆಗಳಿಗೆ ತೊಂದರೆಯಾಗಲಿವೆ ಎನ್ನುವ ಕಾರಣಕ್ಕೆ ಇಲ್ಲಿ ಮಾಡಿದ್ದೇವೆ ಸಿಡಿಮದ್ದು ಒಟ್ಟಾರೆ 92.2ಡೆಸಿಬಲ್ ಎವರೇಜ್ ಇದೆ ಎಂದು ತಿಳಿಸಿದರು…

Spread the love

Related post

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ…

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್ ಶ್ರೀರಂಗಪಟ್ಟಣ,ಅ25,Tv10 ಕನ್ನಡ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸರ್ವೇ ನಂ. 44ರಲ್ಲಿ 2.13…
ಸಂಸದ ಯದುವೀರ್ ತಾತ ವಿಧಿವಶ…ಸಂಸದರ ಅಧಿಕೃತ ಕಾರ್ಯಕ್ರಮ ಮುಂದೂಡಿಕೆ…

ಸಂಸದ ಯದುವೀರ್ ತಾತ ವಿಧಿವಶ…ಸಂಸದರ ಅಧಿಕೃತ ಕಾರ್ಯಕ್ರಮ ಮುಂದೂಡಿಕೆ…

ಮೈಸೂರು,ಅ23,Tv10 ಕನ್ನಡ ಸಂಸದರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ತಾತ ಮದನ್ ಗೋಪಾಲ್ ರಾಜ್ ಅರಸ್ ವಿಧಿ ವಶರಾಗಿದ್ದಾರೆ.ಈ ಹಿನ್ನಲೆಯದುವೀರ್ ಅಧಿಕೃತ ಕಾರ್ಯಕ್ರಮಗಳು ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.93 ವರ್ಷ…
ಹೃದಯಾಘಾತಕ್ಕೆ ರೈತ ಬಲಿ…ಜಮೀನು ಉಳುಮೆ ಮಾಡುವ ವೇಳೆ ಘಟನೆ…

ಹೃದಯಾಘಾತಕ್ಕೆ ರೈತ ಬಲಿ…ಜಮೀನು ಉಳುಮೆ ಮಾಡುವ ವೇಳೆ ಘಟನೆ…

ಹೃದಯಾಘಾತಕ್ಕೆ ರೈತ ಬಲಿ…ಜಮೀನು ಉಳುಮೆ ಮಾಡುವ ವೇಳೆ ಘಟನೆ… ಮಂಡ್ಯ,ಅ23,Tv10 ಕನ್ನಡ ಜಮೀನಲ್ಲಿ ಉಳುಮೆ ಮಾಡುವ ವೇಳೆ ಹೃದಯಾಘಾತದಿಂದ ರೈತ ಸಾವನ್ನಪ್ಪಿದ ಘಟನೆಮಂಡ್ಯ ತಾಲ್ಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ…

Leave a Reply

Your email address will not be published. Required fields are marked *