ಅರಳಿ ಮರ ನೆಡುವ ಮೂಲಕ ಸಮಾಜಕ್ಕೆ ಮಾದರಿ ಹಿಂದುಳಿದ ವರ್ಗಗಳ ಮೊರ್ಚಾ….

ಅರಳಿ ಮರ ನೆಡುವ ಮೂಲಕ ಸಮಾಜಕ್ಕೆ ಮಾದರಿ ಹಿಂದುಳಿದ ವರ್ಗಗಳ ಮೊರ್ಚಾ….

ಅರಳಿ ಮರ ನೆಡುವ ಮೂಲಕ ಸಮಾಜಕ್ಕೆ ಮಾದರಿ ಹಿಂದುಳಿದ ವರ್ಗಗಳ ಮೊರ್ಚಾ….

ಇಂದು ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಸೇವಾ ಪಾಕ್ಷಿಕ ದ ಅಡಿಯಲ್ಲಿ ಅರಳಿಮರ ಗಿಡ ನೆಡಸುವ ಅಭಿಯಾನಕ್ಕೆ ಮಂತ್ರಿ ಗಳಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಯವರು ಚಾಲನೆ ನೀಡಿದರು..

ವಾಯುಮಾಲಿನ್ಯ ತಡೆಗಟ್ಟುವಲ್ಲಿ ಹಿಂದುಳಿದ ವರ್ಗಗಳ ಮೊರ್ಚಾ ಪ್ರಯತ್ನ…

ಕರ್ನಾಟಕ ರಾಜ್ಯ ಬಾ.ಜ.ಪ.ಘಟಕವು ಸನ್ಮಾನ್ಯ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಸಾರ್ವಜನಿಕ ರಿಗೆ ಹಾಗೂ ಪರಿಸರಕ್ಕೆ ಅನೂಕೊಲ ವಾಗುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಹಿಂದುಳಿದ ವರ್ಗಗಳ ಮೊರ್ಚಾದ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯ ಶಾಲಾ ಕಾಲೇಜು ಅವರಣ,ಸಾರ್ಕಾರಿ ಸ್ಥಳ,ಜಿಲ್ಲಾ ಆಸ್ಪತ್ರೆ, ಸ್ಮಶಾನದಲ್ಲಿ, ಪಾರ್ಕ್ ಗಳು ಇನ್ನೂ ಮುಂತಾದ ಸ್ಥಳಗಳಲ್ಲಿ ಅರಳಿಮರ ಗಳನ್ನು ಸಾರ್ವಜನಿಕ ರೊಂದಿಗೆ ನೆಡಸ ಬೇಕಾಗಿರುವುದರಿಂದ ಇಂದು ಸಾಂಕೇತಿಕವಾಗಿ ಸರ್ಕಾರಿ ಅಥಿತಿ ಗೃಹ ದಲ್ಲಿ ಚಾಲನೆ ನೀಡಲಾಯಿತು..

ನಂತರ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ ಯವರು ಪರಿಸರ ನಮ್ಮೆಲ್ಲರ ಆಸ್ತಿ, ಬಾ.ಜ.ಪ.ಘಟಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಯಾವುದೇ ರೀತಿಯ ಆಡಂಬರ ವಿಲ್ಲದೆ ಸಾರ್ವಜನಿಕ ರಿಗೆ ಹಾಗೂ ದೇಶಕ್ಕೆ ಅನುಕೂಲ ವಾಗುವ ನಿಟ್ಟಿನಲ್ಲಿ,ಮುಂದೊಂದು ದಿನ ವಾಯುಮಾಲಿನ್ಯದ ಆಗುವ ಅನಾಹುತ ತಡೆಗಟ್ಟಲು ಬಾ.ಜ.ಪ.ಯುವಕರು ಅರಳಿಮರ ನೆಡುವ ಮೂಲಕ ಸಮಾಜಕ್ಕೆ ಮಾದರಿಯಾಗಲಿದ್ದಾರೆ ಎಂದು ಅಭಿಪ್ರಾಯ ಪಟ್ಟರು..

ನಾಗೇಂದ್ರ ರವರು ಮಾತನಾಡಿ ಅರಳಿಮರ ಶ್ರೇಷ್ಠ ವಾದ ಮರ ಹಾಗೂ ವೈಜ್ಞಾನಿಕ ವಾಗಿ ಸಾರ್ವಜನಿಕ ರು ಹೆಚ್ಚು ಇರುವ ಸ್ಥಳಗಳಲ್ಲಿ ಅರಳಿಮರ ದ ಅವಶ್ಯಕತೆ ಇದೆ ಪಾರ್ಕಿಗೊಂದು ಅರಳಿಮರ ಕಡ್ಡಾಯವಾಗಿ ಇರಬೇಕು ಹಾಗೆ ಈಗಾಗಲೇ ಮೈಸೂರಿನ ಹೊರ ವರ್ತುಲ ರಸ್ತೆಯಲ್ಲಿ ಸಾವಿರಾರು ಅರಳಿಮರವನ್ನು ಸಂಘ ಸಂಸ್ಥೆಗಳ ಒಟ್ಟುಗೂಡಿ ನೆಡುವ ಮ‌ೂಲಕ ಕಾರ್ಯ ಪ್ರಾರಂಭವಾಗಿದೆ ಎಂದು ತಿಳಿಸಿದರು..

ಸಂಧರ್ಭದಲ್ಲಿ ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಸಚಿವ ರಾದ ಕೋಟಾ ಶ್ರೀನಿವಾಸ ಪೂಜಾರಿ, ಚಾಮರಾಜ ಕ್ಷೇತ್ರದ ಶಾಸಕ ರಾದ ಎಲ್.ನಾಗೇಂದ್ರ, ಭಾ.ಜ.ಪ.ನಗರ ಅಧ್ಯಕ್ಷರಾದ ಟಿ.ಎಸ್. ಶ್ರೀ ವತ್ಸ, ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಜೋಗಿಮಂಜು,ಉಪ ಮೇಯರ್ ರೂಪ ಯೋಗೇಶ್ ನಗರಪಾಲಿಕೆ ಸದಸ್ಯ ಸತೀಶ್,ಕೆ.ಜೆ.ರಮೇಶ್, ಪ್ರಧಾನ ಕಾರ್ಯದರ್ಶಿ ಗೋಪಾಲ್‌,ಮಣಿರತ್ನಂ, ಸೋಮಶೇಖರ್ ರಾಜು, ಹರೀಶ್,ಪುನೀತ್,ರಮೇಶ್,ಚಿಕ್ಕಮ್ಮ ಬಸವರಾಜ್, ಶಿವರಾಜ್, ಕೃಷ್ಣ ಮೂರ್ತಿ,ಜಗದೀಶ್, ವಿಜಯ್,ಸೂರಜ್, ಅಂಕಿತ್,ಮುಂತಾದವರು ಇದ್ದರು

Spread the love

Related post

ದೇವರಾಜ ಮಾರುಕಟ್ಟೆಯಲ್ಲಿ ಯದುವೀರ್ ಪರ ಪ್ರಚಾರ…ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ಹಂಚಿ ಮತಯಾಚನೆ…

ದೇವರಾಜ ಮಾರುಕಟ್ಟೆಯಲ್ಲಿ ಯದುವೀರ್ ಪರ ಪ್ರಚಾರ…ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ಹಂಚಿ…

ಮೈಸೂರು,ಏ19,Tv10 ಕನ್ನಡ ಮೈಸೂರಿನ ವಾರ್ಡ್ ನಂ 23 ರ ದೇವರಾಜ ಮಾರುಕಟ್ಟೆ,ಡಿ.ದೇವರಾಜ ಅರಸ್ ರಸ್ತೆ,ಸಯ್ಯಾಜಿರಾವ್ ರಸ್ತೆ,ಕೆ.ಟಿ.ಸ್ಡ್ರೀಟ್,ಶ್ರೀರಾಂಪೇಟೆಯಲ್ಲಿ ಬಿಜೆಪಿ ಮುಖಂಡರು ಯದುವೀರ್ ಪರ ಮತಯಾಚಿಸಿದರು.ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರಗಳನ್ನ ಹಂಚಿ…
ಯದುವೀರ್ ಗೆ ಪಾದತೊಳೆದು ಸ್ವಾಗತ…ಅಗ್ರಹಾರದಲ್ಲಿ ಅದ್ದೂರಿ ಪ್ರಚಾರ…

ಯದುವೀರ್ ಗೆ ಪಾದತೊಳೆದು ಸ್ವಾಗತ…ಅಗ್ರಹಾರದಲ್ಲಿ ಅದ್ದೂರಿ ಪ್ರಚಾರ…

ಮೈಸೂರು,ಏ19,Tv10 ಕನ್ನಡ ಲೋಕಸಭೆ ಚುನಾವಣೆ ಕಾವು ಏರುತ್ತಿದೆ.ಅಭ್ಯರ್ಥಿಗಳು ಮತಬೇಟೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.ನೆಚ್ಚಿನ ಅಭ್ಯರ್ಥಿಗಳ ಪರ ಅಭಿಮಾನಿಗಳು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ಇಂದು ಅಗ್ರಹಾರ 50 ನೇ ವಾರ್ಡ್ ನಲ್ಲಿ…
ಮೈಸೂರು:ನಕಲಿ ಫೆವಿಕ್ವಿಕ್ ಮಾರಾಟ…ಓರ್ವನ ಬಂಧನ…ದೇವರಾಜ ಠಾಣೆ ಪೊಲೀಸರ ಕಾರ್ಯಾಚರಣೆ…

ಮೈಸೂರು:ನಕಲಿ ಫೆವಿಕ್ವಿಕ್ ಮಾರಾಟ…ಓರ್ವನ ಬಂಧನ…ದೇವರಾಜ ಠಾಣೆ ಪೊಲೀಸರ ಕಾರ್ಯಾಚರಣೆ…

ಮೈಸೂರು,ಏ18,Tv10 ಕನ್ನಡ ಮೈಸೂರಿನಲ್ಲಿ ನಕಲಿ ಫೆವಿಕ್ವಿಕ್ ಮಾರಾಟ ಮಾಡುತ್ತಿದ್ದ ಏಜೆನ್ಸಿ ಮೇಲೆ ದೇವರಾಜ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.ದಾಳಿ ವೇಳೆ ನಕಲಿ ಫೆವಿಕ್ವಿಕ್ ಗಳು ದೊರೆತಿದ್ದು ಏಜೆನ್ಸಿಯ ಮಾಲೀಕನನ್ನ…

Leave a Reply

Your email address will not be published. Required fields are marked *