ತೆವಳಿಕೊಂಡು ರಸ್ತೆ ದಾಟುತ್ತಿದ್ದ ಭಿಕ್ಷುಕನ ಮೇಲೆ ಹರಿದ ಬಸ್…ಸ್ಥಳದಲ್ಲೇ ಸಾವು…
- CrimeMysore
- October 22, 2022
- No Comment
- 364
ತೆವಳಿಕೊಂಡು ರಸ್ತೆ ದಾಟುತ್ತಿದ್ದ ಭಿಕ್ಷುಕನ ಮೇಲೆ ಹರಿದ ಬಸ್…ಸ್ಥಳದಲ್ಲೇ ಸಾವು…
ಹೆಚ್.ಡಿ.ಕೋಟೆ,ಅ22,Tv10 ಕನ್ನಡ
ತೆವಳಿಕೊಂಡು ರಸ್ತೆ ದಾಟುತ್ತಿದ್ದ ಭಿಕ್ಷುಕನ ಮೇಲೆ ಸರ್ಕಾರಿ ಬಸ್ ಹರಿದ ಘಟನೆ ಹೆಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ. ಚಾಲಕನ ಅಜಾಗರೂಕತೆ ವಿಶೇಷ ಚೇತನ ಭಿಕ್ಷುಕ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಎಚ್.ಡಿ.ಕೋಟೆ ತಾಲೋಕಿನ ಸಾಗರೆ ಗ್ರಾಮದ ಚಿಕ್ಕಿ ಪುಟ್ಟ ಮೃತ ದುರ್ದೈವಿ.
ಘಟನೆ ಬಳಿಕ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರಗೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ನಿಂದ ಅವಗಡ ಸಂಭವಿಸಿದೆ.
ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ತಕರಣ ದಾಖಲಾಗಿದೆ…