
ನೋಡ್ಕೊಂಡು ಕಾರ್ ಓಡಿಸಿ ಎಂದಿದ್ದೇ ತಪ್ಪಾಯ್ತು…ಮೂವರು ಯುವಕರ ಮೇಲೆ ಕಾರು ಹರಿಸಿದ ತಂದೆ ಮಗ…
- CrimeMysore
- December 6, 2022
- No Comment
- 155
ನೋಡ್ಕೊಂಡು ಕಾರ್ ಓಡಿಸಿ ಎಂದಿದ್ದೇ ತಪ್ಪಾಯ್ತು…ಮೂವರು ಯುವಕರ ಮೇಲೆ ಕಾರು ಹರಿಸಿದ ತಂದೆ ಮಗ…

ಮೈಸೂರು,ಡಿ6,Tv10 ಕನ್ನಡ ಅಡ್ಡಾದಿಡ್ಡಿ ಕಾರು ಓಡಿಸುತ್ತಿದ್ದವರಿಗೆ ಬುದ್ದಿ ಹೇಳಿದ ಹಿನ್ನಲೆ ಮೂವರು ಯುವಕರ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ಟಿ.ಕೆ.ಲೇಔಟ್ ನಲ್ಲಿ ನಡೆದಿದೆ.ಘಟನೆಯಲ್ಲಿ
ಮೂವರು ಯುವಕರಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೇಗವಾಗಿ ಬಂದ ಫಾರ್ಚುನರ್ ಕಾರು ಯುವಕರಿದ್ದ ಕಾರಿಗೆ ಗುದ್ದಲು ಯತ್ನಿಸಲಾಗಿದೆ.
ಈ ವೇಳೆ ಯುವಕರು ಪ್ರಶ್ನೆ ಮಾಡಿದ್ದಾರೆ.
ಇಷ್ಟಕ್ಕೇ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ.
ಕಾರಿನಲ್ಲಿದ್ದ ವಾಸು ಹಾಗೂ ಪುತ್ರ ದರ್ಶನ್ ರಿಂದ ಕೊಲೆ ಯತ್ನ ನಡೆದಿದೆ.
ಮತ್ತೊಂದು ಕಾರಿನಲ್ಲಿದ್ದ ಪ್ರಜ್ವಲ್, ರಾಹುಲ್, ಆನಂದ್ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ಪ್ರಜ್ವಲ್ ಸ್ಥಿತಿ ಗಂಭೀರ ಎಂದು ಹೇಳಲಾಗಿದೆ.
ಅಪ್ಪ ಮಗನ ದರ್ಪಕ್ಕೆ ಅಮಾಕ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕ್ಷುಲ್ಲಕ ವಿಚಾರಕ್ಕೆ ಕಾರು ಹತ್ತಿಸಲು ಮುಂದಾದ
ಅಪ್ಪ ಮಗನನ್ನ ಅರೆಸ್ಟ್ ಮಾಡಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…