
ಚೀಲ ಬದಲಿಸಿ ಸರ್ಕಾರದ ರಿಯಾಯಿತಿ ಯೂರಿಯಾ ಮಾರಾಟ ಯತ್ನ…ಐವರ ಬಂಧನ…290 ಮೂಟೆ ಯೂರಿಯಾ ವಶ…
- CrimeMysore
- December 6, 2022
- No Comment
- 136

ಚೀಲ ಬದಲಿಸಿ ಸರ್ಕಾರದ ರಿಯಾಯಿತಿ ಯೂರಿಯಾ ಮಾರಾಟ ಯತ್ನ…ಐವರ ಬಂಧನ…290 ಮೂಟೆ ಯೂರಿಯಾ ವಶ…

ಪಿರಿಯಾಪಟ್ಟಣ,ಡಿ6,Tv10 ಕನ್ನಡ
ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವ ಯೂರಿಯಾವನ್ನ ಉತ್ತಮ ಗುಣಮಟ್ಟದ ಬ್ರಾಂಡ್ ಚೀಲಕ್ಕೆ ಬದಲಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಖದೀಮರನ್ನ ಬಂಧಿಸುವಲ್ಲಿ ಪಿರಿಯಾಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.ಕೃಷಿ ಇಲಾಖೆ ಅಧಿಕಾರಿಗಳ ಜೊತೆಗೆ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು ಉತ್ತಮ ಗುಣಮಟ್ಟದ ಚೀಲದಲ್ಲಿ ತುಂಬಲಾದ 290 ಮೂಟೆ ರಿಯಾಯಿತಿ ಯೂರಿಯಾ ವಶಪಡಿಸಿಕೊಂಡಿದ್ದಾರೆ.ಯೂರಿಯಾ ಸಾಗಣಿಕೆ ಬಳಸಿದ ಲಾರಿ ಸಹ ವಶಪಡಿಸಿಕೊಳ್ಳಲಾಗಿದೆ.ಡ್ರೈವರ್ ಸೇರಿದಂತೆ ಐವರನ್ನ ಬಂಧಿಸಲಾಗಿದೆ.ನಿಖಿಲ್,ಮಹಮದ್ ಬಷೀರ್,ಜಸೀರ್,ರಜೀಬ್ ಹಾಗೂ ಸಚಿನ್ ಬಂಧಿತರು.ಪಿರಿಯಾಪಟ್ಟಣ ತಾಲೂಕು ತೆಲಗನಕುಪ್ಪೆ ಗ್ರಾಮದ ರಾಜಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುವ ಯೂರಿಯಾವನ್ನ ಸಂಗ್ರಹಿಸಿ TECHNICAL GRADE UREA ಎಂಬ ಬ್ರಾಂಡ್ ನಮೂದಿಸಿರುವ ಚೀಲಗಳಿಗೆ ಬದಲಾಯಿಸಿ ಕೇರಳಾ ರಾಜ್ಯಕ್ಕೆ ಸಾಗಿಸಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿ ಯೂರಿಯಾ ಮೂಟೆಗಳನ್ನ ವಶಪಡಿಸಿಕೊಂಡು ಆರೋಪಿಗಳನ್ನ ಬಂಧಿಸಲಾಗಿದೆ.ಅನಾಮಧೇಯ ವ್ಯಕ್ತಿ ನೀಡಿದ ಮಾಹಿತಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿ ಪ್ರಸಾದ್ ರವರು ಪಿರಿಯಾಪಟ್ಟಣ ಠಾಣೆ ಪೊಲೀಸರ ನೆರವಿನಿಂದ ದಾಳಿ ನಡೆಸಿದ್ದಾರೆ.ಪಿರಿಯಾಪಟ್ಟಣ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ…