12 ವರ್ಷದಿಂದ ಮನೆಯಲ್ಲಿದ್ದೇನೆ…ಈಗ ಜನರ ಜೊತೆ ಸೇರಬೇಕಿದೆ…ಜನಾರ್ಧನ ರೆಡ್ಡಿ ಇಂಗಿತ…

12 ವರ್ಷದಿಂದ ಮನೆಯಲ್ಲಿದ್ದೇನೆ…ಈಗ ಜನರ ಜೊತೆ ಸೇರಬೇಕಿದೆ…ಜನಾರ್ಧನ ರೆಡ್ಡಿ ಇಂಗಿತ…

12 ವರ್ಷದಿಂದ ಮನೆಯಲ್ಲಿದ್ದೇನೆ…ಈಗ ಜನರ ಜೊತೆ ಸೇರಬೇಕಿದೆ…ಜನಾರ್ಧನ ರೆಡ್ಡಿ ಇಂಗಿತ…

ಗದಗ್,ಡಿ7,Tv10 ಕನ್ನಡ
12 ವರ್ಷಗಳಿಂದ ಮನೆಯಲ್ಲಿದ್ದೆ ಇದೀಗ ಜನರ ಜೊತೆ ಸೇರಬೇಕು ಎಂದು ಬಿಜೆಪಿ ಮುಖಂಡ ಮಾಜಿ ಸಚಿವ ಜನಾರ್ಧನ ರೆಡ್ಡಿ ಗದಗ್ ನಲ್ಲಿ ತಮ್ಮ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ. ತಮ್ಮ ರಾಜಕೀಯ ಭವಿಷ್ಯವನ್ನ ಬಿಜೆಪಿ ನಾಯಕರ ಕೋರ್ಟ್ ನ ಮೇಲೆ ಜವಾಬ್ದಾರಿ ಹಾಕಿದ ಜನಾರ್ಧನ ರೆಡ್ಡಿ ನಾಯಕರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.
ಭಾರತೀಯ ಜನತಾ ಪಕ್ಷದಿಂದ ರಾಜಕೀಯ ಜೀವನ ಆರಂಭವಾಗಿದೆ.
ಆಡ್ವಾನಿಯವರ ರಾಮ ರಥಯಾತ್ರೆ ಮೂಲಕ ಕೆಲಸ ಆರಂಭ ಮಾಡಿದ್ದೆವು.
ಏನಿದ್ರೂ ಭಾರತೀಯ ಜನತಾ ಪಕ್ಷದ ಮೇಲೆ ಅಭಿಮಾನ ಇರುತ್ತೆ.
ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡುತ್ತೇನೆ.
ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ.
ಬಳ್ಳಾರಿಯಿಂದ ಹೊರಗಿರಬೇಕಾದ ಪರಿಸ್ಥಿತಿ ಇದೆ. ಬೆಂಗಳೂರಲ್ಲಿ ಇರಲು ಇಷ್ಟ ಇಲ್ಲ.ಉತ್ತರ ಕರ್ನಾಟಕ.. ಬಳ್ಳಾರಿ.. ಬೀದರ್ ನಿಂದ ಬೆಳಗಾವಿ ವರೆಗೆ ಎಲ್ಲಾದ್ರೂ ಇರಬೇಕು.
ಮನಸ್ಸಿಗೆ, ಆರೋಗ್ಯಕ್ಕೆ ಈ ವಾತಾವರಣ ತೃಪ್ತಿ ತರುತ್ತದೆ‌.ನಮ್ಮ ಜನರ ನಡುವೆಯೇ ಇರಬೇಕು ಇನ್ನೋ ಕಾರಣಕ್ಕೆ ಗಂಗಾವತಿಯಲ್ಲಿ ಮನೆ ಮಾಡಿದ್ದೇನೆ ಎಂದರು.
ಹೊಸ ಪಕ್ಷದ ವಿಚಾರವಾಗಿ ಹೆಚ್ಚು ಮಾತಾಡಲ್ಲ ಈ ಬಗ್ಗೆ ಇನ್ನೂ ಸಮಯ ಇದೆ ಎಂದು ಜಾರಿಕೊಂಡರು.12 ವರ್ಷ ಮನೆಯಲ್ಲಿದ್ದೇನೆ.. ಈಗ ಜನರ ಜೊತೆ ಇರಬೇಕು.ಯಾವ ಕ್ಷೇತ್ರದಿಂದ ಚುನಾವಣೆ ಅನ್ನೋದನ್ನ ಬರುವ ದಿನಗಳಲ್ಲಿ ತಿಳಿಸುತ್ತೇನೆ‌.
ಬಿಜೆಪಿ ಬಗ್ಗೆ ಅಭಿಮಾನ ಇದೆ ಆದ್ರೆ ಹಿರಿಯರು, ನಾಯಕರು ಏನು ತೀರ್ಮಾನ ಮಾಡ್ತಾರೆ ಕಾದು ನೋಡುತ್ತಿದ್ದೇನೆ ಎಂದು ತಿಳಿಸಿದರು.

ಶ್ರೀರಾಮುಲು ಜೊತೆ ಭಿನ್ನಾಭಿಪ್ರಾಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಜನಾರ್ಧನ ರೆಡ್ಡಿ ಗದಗ್ ಗೆ ಬಂದು ಈಗ ರಾಮುಲು ಮನೆಯಲ್ಲೇ ರೆಡಿಯಾಗಿದ್ದೇನೆ.
ರಾಮುಲು ಮನೆ ಅಂದ್ರೆ ನಮ್ಮ ಮನೆ. ನಮ್ಮ ಮನೆ ಅಂದ್ರೆ ರಾಮುಲು ಮನೆ.
ಜಗತ್ತೇ ಬೇರೆಯಾದ್ರೆ. ನಾನು ಶ್ರೀರಾಮುಲು ನೇ ಬೇರೆ.ರಾಜಕೀಯಕ್ಕೂ ಮೀರಿ ನಮ್ಮ ಕುಟುಂಬ ಇದ್ದಂತೆ ಇದ್ದೇವೆ.ಈ ಕುರಿತಂತೆ ಮಾಧ್ಯಮದವರು ಅನಾವಶ್ಯಕವಾಗಿ ಸೃಷ್ಟಿಸುವುದು ಬೇಡ ಎಂದು ಮನವಿ ಮಾಡಿದರು…

Spread the love

Related post

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025…

ಮೈಸೂರು,ಜೂ26,Tv10 ಕನ್ನಡ ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ…

Leave a Reply

Your email address will not be published. Required fields are marked *